ಎಂ.ಎನ್. ಕೋಟೆ : ಗ್ರಾ.ಪಂ.ನಲ್ಲೇ ಶೌಚಾಲಯವಿಲ್ಲ

ಎಂ ಎನ್ ಕೋಟೆ :

      ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಹೊಸ ಆಡಳಿತ ಮಂಡಳಿ ಮೊದಲ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

      ನೂತನ ಅಧ್ಯಕ್ಷೆ ಶಶಿಕಲಾ ಯೋಗೀಶ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದ್ದು.ಹಳ್ಳಿಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೋಳುವುದು ನಮ್ಮ ಜವಬ್ದಾರಿಯಾಗಿದೆ. ಮಹಾತ್ಮ ಗಾಂಧಿ ರಾಷ್ವೀಯ ಯೋಜನೆಯಡಿಯಲ್ಲಿ ತುರ್ತಾಗಿ ಕೆಲಸ ಮಾಡಲು ಅವಕಾಶವಿದೆ. ಕ್ರಿಯಾ ಯೋಜನೆಯಲ್ಲಿ ಸೇರಿಸಿ ಕೆಲಸಮಾಡಬೇಕು ಎಂದರು.
ಎಲ್ಲ ಹಳ್ಳಿಗಳಲ್ಲಿ ಜಾತ್ರೆಗಳು ಪ್ರಾರಂಭವಾಗುತ್ತಿರುವುದರಿಂದ ಬೀದಿ ದೀಪಗಳನ್ನು ಹಾಕಲಾಗುತ್ತದೆ. ಸಿಬ್ಬಂದಿಗಳು ತುರ್ತಾಗಿ ಕೆಲಸಮಾಡಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೋಳ್ಳಬೇಕು ಎಂದು ನೀರುಗಂಟಿಗಳಿಗೆ ಸೂಚಿಸಿದ್ದರು.

ಗ್ರಾಪಂನಲ್ಲೇ ಶೌಚಾಲಯವಿಲ್ಲ

      ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರೇ ಹೆಚ್ಚು ಇದ್ದರೂ ಕೂಡ ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯವೇ ಇಲ್ಲ. ಎಲ್ಲ ಹಳ್ಳಿಗಳಿಗೂ ಶೌಚಾಲಯ ಕಟ್ಟುವುದಕ್ಕೆ ಅನುದಾನ ಕೊಡಲಾಗುತ್ತಿದೆ.     ನಮ್ಮ ಪಂಚಾಯಿತಿಗೆ ಶೌಚಾಲಯವಿಲ್ಲ. ತುರ್ತಾಗಿ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ದೀಲೀಪ್ ಕುಮಾರ್ ಸಭೆಯಲ್ಲಿ ಆಗ್ರಹಿಸಿದರು.

     ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮಹಿಳಾ ಸದಸ್ಯರು ಇರುವುದರಿಂದ ಅದಷ್ವು ಬೇಗನೆ ಶೌಚಾಲಯವನ್ನು ನಿರ್ಮಸಲಾಗುವುದು ಎಂದು ಉತ್ತರಿಸಿದರು.ಇದೇ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದಗಂಗಮ್ಮ ,ಪಿಡಿಒ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಭೀಮಶೆಟ್ಟಿ, ನರಸಯ್ಯ, ರವಿಕುಮಾರ್, ಸ್ವಾಮಿ, ಸಿದ್ದಗಂಗಯ್ಯ , ಲೆಕ್ಕ ಸಹಾಯಕ ಸಂದೀಪ್ ಸಿಬ್ಬಂಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link