ಎಸ್‍ಎಸ್‍ಎಲ್‍ಸಿ ಪರೀಕ್ಷೆ: 848 ಗೈರು

ದಾವಣಗೆರೆ :

      ಎಸ್ಸೆಸ್ಸೆಲ್ಸಿ ಗಣಿತ ವಿಷಕ್ಕೆ ಸೋಮವಾರ ಜಿಲ್ಲೆಯಲ್ಲಿ ಶಾಂತಿಯುತ ಪರೀಕ್ಷೆ ನಡೆದಿದ್ದು, ಒಟ್ಟು 848 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.

       ಗಣಿತ ವಿಷಯದಲ್ಲಿ ಜಿಲ್ಲೆಯಲ್ಲಿ ನೋಂದಣಿಯಾಗಿದ್ದ ಒಟ್ಟು 25506 ವಿದ್ಯಾರ್ಥಿಗಳ ಪೈಕಿ 530 ಬಾಲಕರು, 318 ಬಾಲಕಿಯರು ಸೇರಿದಂತೆ ಒಟ್ಟು 848 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. 12401 ಬಾಲಕರು, 12257 ಬಾಲಕಿಯರು ಸೇರಿದಂತೆ ಒಟ್ಟು 24658 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

        ಚನ್ನಗಿರಿ ತಾಲೂಕಿನಲ್ಲಿ ಪರೀಕ್ಷೆ ನೋಂದಣಿಯಾಗಿದ್ದ ಒಟ್ಟು 3862 ವಿದ್ಯಾರ್ಥಿಗಳ ಪೈಕಿ 80 ಬಾಲಕರು ಹಾಗೂ 46 ಬಾಲಕಿಯರು ಸೇರಿದಂತೆ ಒಟ್ಟು 126 ವಿದ್ಯಾರ್ಥಿಗಳು ಗೈರಾಗಿದ್ದು, 1832 ಬಾಲಕರು, 1904 ಬಾಲಕಿಯರು ಒಟ್ಟು 3736 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

        ದಾವಣಗೆರೆ ಉತ್ತರ ವಲಯದಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 3304 ವಿದ್ಯಾರ್ಥಿಗಳ ಪೈಕಿ 67 ಬಾಲಕರು, 52 ಬಾಲಕಿಯರು ಸೇರಿದಂತೆ ಒಟ್ಟು 119 ಗೈರಾಗಿದ್ದು, 1612 ಬಾಲಕರು, 1573 ಬಾಲಕಿಯರು ಒಟ್ಟು 3185 ವಿದ್ಯಾರ್ಥಿಗಳು ಹಾಜರಾಗಿದ್ದರೆ, ದಾವಣಗೆರೆ ದಕ್ಷಿಣ ವಲಯದಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 6642 ವಿದ್ಯಾರ್ಥಿಗಳ ಪೈಕಿ 144 ಬಾಲಕರು, 84 ಬಾಲಕಿಯರು ಸೇರಿದಂತೆ ಒಟ್ಟು 228 ವಿದ್ಯಾರ್ಥಿಗಳು ಗೈರಾಗಿದ್ದು, 3331 ಬಾಲಕರು, 3083 ಬಾಲಕಿಯರು ಸೇರಿದಂತೆ ಒಟ್ಟು 6414 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

       ಹರಿಹರ ತಾಲ್ಲೂಕಿನಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 3300 ವಿದ್ಯಾರ್ಥಿಗಳ ಪೈಕಿ 84 ಬಾಲಕರು, 31 ಬಾಲಕಿಯರು ಸೇರಿದಂತೆ ಒಟ್ಟು 115 ವಿದ್ಯಾರ್ಥಿಗಳು ಗೈರಾಗಿದ್ದು, 1672 ಬಾಲಕರು, 1513 ಬಾಲಕಿಯರು ಸೇರಿದಂತೆ ಒಟ್ಟು 3185 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

       ಹೊನ್ನಾಳಿ ತಾಲ್ಲೂಕಿನಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 2833 ವಿದ್ಯಾರ್ಥಿಗಳ ಪೈಕಿ 50 ಬಾಲಕರು, 35 ಬಾಲಕಿಯರು ಸೇರಿದಂತೆ ಒಟ್ಟು 85 ವಿದ್ಯಾರ್ಥಿಗಳು ಗೈರಾಗಿದ್ದು, 1272 ಬಾಲಕರು, 1476 ಬಾಲಕಿಯರು ಸೇರಿದಂತೆ ಒಟ್ಟು 2748 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಹರಪನಹಳ್ಳಿ ತಾಲ್ಲೂಕಿನಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 3426 ವಿದ್ಯಾರ್ಥಿಗಳ ಪೈಕಿ 63 ಬಾಲಕರು, 35 ಬಾಲಕಿಯರು ಸೇರಿದಂತೆ ಒಟ್ಟು 98 ವಿದ್ಯಾರ್ಥಿಗಳು ಗೈರಾಗಿದ್ದು, 1619 ಬಾಲಕರು, 1709 ಬಾಲಕಿಯರು ಸೇರಿದಂತೆ ಒಟ್ಟು 3328 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

        ಜಗಳೂರು ತಾಲ್ಲೂಕಿನಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 2139 ವಿದ್ಯಾರ್ಥಿಗಳ ಪೈಕಿ 42 ಬಾಲಕರು, 35 ಬಾಲಕಿಯರು ಸೇರಿದಂತೆ ಒಟ್ಟು 77 ವಿದ್ಯಾರ್ಥಿಗಳು ಗೈರಾಗಿದ್ದು, 1063 ಬಾಲಕರು, 999 ಬಾಲಕಿಯರು ಸೇರಿದಂತೆ ಒಟ್ಟು 2062 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ವರದಿಯಾಗಿರುವುದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link