ಜಗಳೂರು:
ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷೆ ವಹಿಸುತ್ತಿರುವ ಮುಖ್ಯಶಿಕ್ಷಕನ್ನು ಬೇರೆಡೆ ವರ್ಗಾಯಿಸುಂತೆ ಆಗ್ರಹಿಸಿ ಗುರುವಾರ ಕೆಳಗೋಟೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಆ.15ರಂದು ದೇಶಾಧ್ಯಂತ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಾರೆ. ಆದರೆ ಈ ಶಾಲೆಯಲ್ಲಿ ಬೆರಳೆಣಿಕೆ ಜನ ಸೇರಿಕೊಂಡು ವಿದ್ಯಾರ್ಥಿಗಳನ್ನು ಗ್ರಾ.ಪಂ ಸದಸ್ಯರು, ಹಿರಿಯರು, ಮುಖಂಡರುಗಳನ್ನು ಕಾಯದೇ ಮನಸ್ಸಿಗೆ ಬಂದಾಗೆ ಧ್ವಜರೋಹಣ ನೆವೇರಿಸಿಕೊಂಡು ಹೋಗಿದ್ದಾರೆ. ಗ್ರಾಮದಲ್ಲಿ ಯಾವುದೇ ಪಥ ಸಂಚಲನ ಅಥವಾ ಮೆರವಣಿಗೆಯನ್ನು ಕೂಡ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಉಪಹಾರವನ್ನು ನೀಡದೇ ಹೋಗಿದ್ದಾರೆ. ಸ್ವಾತಂತ್ರ ದಿನಾಚರಣೆ ಹಿನ್ನೆಲೆ ವಿದ್ಯಾರ್ಥಿಗಳು ಹದಿನೈದು ದಿನಗಳಿಂದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ತಯಾರಿ ನಡೆಸಿಕೊಂಡು ಸಿದ್ದರಾಗಿ ಬಂದಿದ್ದರು. ಆದರೆ ನೃತ್ಯ ಮಾಡಿಸದೇ ಮಕ್ಕಳಿಗೆ ಬೇಸರವನ್ನುಂಟು ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಇಸಿಒ ಮಂಜುನಾಥ್ ಮತ್ತು ಬಿಆರ್ಸಿ ಎಲ್. ಈರಪ್ಪ ಗ್ರಾಮಸ್ಥರ ದೌಡಾಯಿಸಿದರು.
ಮುಖಂಡ ಅಹಮದ್ ಅಲಿ ಮಾತನಾಡಿ, ಮುಖ್ಯೋಪಾಧ್ಯಾಯ ಬಿ. ಸಿದ್ದಪ್ಪ ಶಾಲೆಗೆ ಬಂದು ಹತ್ತುವರ್ಷಗಳಾಗಿವೆ. ವರ್ಷದಲ್ಲಿ ನಿವೃತ್ತಿ ಹೊಂದುತ್ತಾರೆ. ಆದರೆ ಇಲ್ಲಿಯರೆವಗೂ ಸರಿಯಾಗಿ ಶಾಲೆಗೆ ಬಂದಿಲ್ಲ. ಮಕ್ಕಳಿಗೆ ಪಾಠ ಮಾಡುವುದಿಲ್ಲ. ಬಿಸಿಯೂಟಕ್ಕೆ ಗುಣಮಟ್ಟದ ತರಕಾರಿಯನ್ನು ನೀಡುವುದಿಲ್ಲ. ಶಾಲೆಯ ಬಾಗಿಲು, ಕಿಟಕಿಗಳು ಮುರಿದು ಹೋದರು ಸರಿಪಡಿಸಿಲ್ಲ, ಇಂತವರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇವರು ನಮ್ಮ ಶಾಲೆಗೆ ಬೇಡ, ಬೇರೆಯವರನ್ನು ನೇಮಿಸಿ ಎಂದು ಒತ್ತಾಯಿಸಿದರು.
ಇಸಿಒ ಮಂಜುನಾಥ್ ಪ್ರತಿಕ್ರಿಯಿಸಿ, ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವ ಅಧಿಕಾರ ನಮಗಿಲ್ಲ, ಗ್ರಾಮಸ್ಥರ ದೂರುಗಳನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲು ಕಾಲವಕಾಶ ನೀಡಬೇಕು, ತಾತ್ಕಾಲಿಕವಾಗಿ ಅಕ್ಷರದಾಸೋಹವನ್ನು ಶಿಕ್ಷಕರೊಬ್ಬರಿಗೆ ಜವಾಬ್ದಾರಿ ವಹಿಸಲಾಗುವುದು. ಈ ಶಾಲೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಲು ಅವಕಾಶವಿದೆ. ಆದ್ದರಿಂದ ಗ್ರಾಮಸ್ಥರು ಗೊಂದಲ ಮಾಡಿಕೊಳ್ಳದೇ ಶಿಕ್ಷಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಡಿಎಂಸಿ ಅಧ್ಯಕ್ಷ ನಾಗರಾಜ್, ಸದಸ್ಯರಾದ ಯುವರಾಜ್, ಹನುಮಂತಪ್ಪ, ಪ್ರಕಾಶ್, ಗ್ರಾ.ಪಂ ಸದಸ್ಯ ಅಜ್ಜಯ್ಯ, ಮುಖಂಡರಾದ ಗೌಡ್ರು ಪ್ರಕಾಶ್, ಜಗದೀಶ್, ಶುಕುರ್ಸಾಬ್, ಪಾಲಯ್ಯ, ಸಂತೋಷ್, ಚಂದ್ರು, ಶಿವಕುಮಾರ್, ಮುಖ್ಯ ಶಿಕ್ಷಕ ಸಿದ್ದಪ್ಪ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
