ತಿಪಟೂರು
ತಾಲ್ಲೂಕಿನ ಕಸಬಾ ಹೋಬಳಿ ರಾಮಶೆಟ್ಟಿಹಳ್ಳಿಯಲ್ಲಿ ಗುರುವಾರ ರಾತ್ರಿ ಕುರಿ ಕಳ್ಳತನ ಮಾಡಲು ಬಂದವರನ್ನು ಗ್ರಾಮಸ್ಥರು ಕುರಿ ಮತ್ತು ವಾಹನ ಸಮೇತ ಕಟ್ಟಿಹಾಕಿದ ಘಟನೆ ನಡೆದಿದೆ.
ಗ್ರಾಮದಲ್ಲಿ ರಾತ್ರಿ ಹಾಸನ ಮೂಲದ ಯುವಕರ ತಂಡವೊಂದು ಅಣ್ಣಪ್ಪ ನವರ ಮನೆ ಮತ್ತು ಪಕ್ಕದ ಮನೆಗಳಿಗೆ ಚಿಲಕ ಹಾಕಿ ಕುರಿದೊಡ್ಡಿಯಿಂದ 6 ಕುರಿಗಳನ್ನು ತಾವು ತಂದಿದ್ದ ಮಾರುತಿ ಒಮ್ನಿ (ಕೆ.ಎ.02 ಪಿ 4433) ಗೆ ತುಂಬುತ್ತಿದ್ದಾಗ ಒಂದು ಕುರಿ ತಪ್ಪಿಸಿಕೊಂಡು ಅರಚುತ್ತಿದ್ದ ಸದ್ದು ಕೇಳಿ ಕೂಗಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ಇಬ್ಬರು ಕಳ್ಳರನ್ನು ಹಿಡಿದು ನಂತರ ಕುರಿಯನ್ನು ತುಂಬಿಕೊಂಡಿದ್ದ ವಾಹನವನ್ನು ಹಿಂಬಾಲಿಸಿ ಹೋದ ಗ್ರಾಮಸ್ಥರು ವಾಹದ ಸಮೇತ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಕಳ್ಳರನ್ನು ಮತ್ತು ವಾಹನವನ್ನು ತಂದು ದೇವಾಲಯದ ಮುಂದೆ ಕಟ್ಟಿಹಾಕಿದರು.
ಘಟನೆಯ ವಿವರ ತಿಳಿದು ಸ್ಥಳಕ್ಕಾಗಮಿಸಿದ ಎಸ್.ಐ.ಕೃಷ್ಣರಾಜು ಮತ್ತು ಸಿಬ್ಬಂದ ವರ್ಗದವರು ಭೇಟಿನೀಡಿ, ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.