ಕುರುಬರ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ಒತ್ತಾಯ

ದಾವಣಗೆರೆ:

     ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕುರುಬರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸಮುದಾಯ ವಿವಿಧ ಸಂಘಟನೆಗಳು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

      ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಕುರುಬರ ಮೇಲಿನ ದೌರ್ಜನ್ಯದಿಂದ ಕುರುಬರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಾ ಜೀವನ ನಡೆಸುವಂತಹ ಸ್ಥಿತಿಯಲ್ಲಿದ್ದೇವೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕುರುಬ ಸಮಾಜವನ್ನು ಎಸ್.ಟಿ. ಗೆ ಸೇರಿಸುವಂತೆ ಸರ್ಕಾರಕ್ಕೆ ನಿರಂತರವಾಗಿ ಮನವಿಗಳನ್ನು ಸಲ್ಲಿಸುತ್ತಲೇ ಬರುತ್ತಿದ್ದೇವೆ. ಸಂವಿಧಾನಬದ್ಧವಾಗಿಯೇ, ಕುರುಬರ ಎಸ್. ಟಿ. ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಹಲವಾರು ರೀತಿಯಲ್ಲಿ ಮನವಿ ಮಾಡುತ್ತಿದ್ದರೂ ಸಹ ಸರ್ಕಾರ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.

      ಕರ್ನಾಟಕ ರಾಜ್ಯದಲ್ಲಿ ಕುರುಬರು ಸಹ ಮತದಾರರಾಗಿದ್ದೂ, ಜೀವಿಸುವ ಹಕ್ಕನ್ನು ಹೊಂದಿದ್ದೇವೆ. ಎಸ್.ಟಿ. (ಪರಿಶಿಷ್ಟ ಪಂಗಡ) ಮೀಸಲಾತಿಯ ಜಾತಿನಿಂದನೆ(ಅಟ್ರಾಸಿಟಿ) ಕಾಯಿದೆಯನ್ನು ದುರುಪಯೋಗ ಮಾಡಿಕೊಂಡು ಕರ್ನಾಟಕ ರಾಜ್ಯಾದ್ಯಂತ ಕುರುಬರ ಸಮಾಜದವರ ಮೇಲೆ ಅವಹೇಳನಕಾರಿಯಾಗಿ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಆಡಿಯೋ ಮತ್ತು ವಿಡಿಯೋಗಳನ್ನು ಮಾಡಿ ಫೇಸ್‍ಬುಕ್ ಮತ್ತು ವಾಟ್ಸಪ್‍ಗಳಲ್ಲಿ ಹರಿದುಬಿಡಲಾಗುತ್ತಿದೆ. ರಾಯಚೂರಿನ ಲಾಲಪ್ಪ ನಾಯಕ ಎಂಬ ವ್ಯಕ್ತಿ “ಕುರುಬರನ್ನು ಎಲ್ಲಿ ಸಿಕ್ಕರೆ ಅಲ್ಲಿ ಕೈ ಕಾಲು ಮುರಿಯಿರಿ” ಎಲ್ಲಾ ಜಿಲ್ಲೆಗಳಲ್ಲಿ ಸಭೆಗಳನ್ನು ಮಾಡಿ, “ಕುರುಬರ ಮೇಲೆ ಅಟ್ರಾಸಿಟಿ ಕೇಸುಗಳನ್ನು ದಾಖಲು ಮಾಡಿ” ಎಂದು ಬಹಿರಂಗವಾಗಿ ವಾಲ್ಮೀಕಿ ಸಮಾಜದವರಿಗೆ ಕರೆ ಕೊಡ್ತಾರೆ. ಇಂತಹ ಹತ್ತಾರು ಪ್ರಚೋದನಾತ್ಮಕವಾದ ವಿಡಿಯೋಗಳು ದ್ವೇಷದ ವಾತಾವರಣವನ್ನುಂಟು ಮಾಡುತ್ತಿದ್ದಾರೆಂದು ದೂರಿದ್ದಾರೆ.

      ಚಿತ್ರದುರ್ಗ ಜಿಲ್ಲೆಯ ಲಕ್ಕಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದವರು ಕುರುಬ ಸಮಾಜದ ಹಿರಿಯರು, ಯುವಕರು ಮತ್ತು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಿದ್ದಾರೆ. ದೇಶದ ಮೂಲ ನಿವಾಸಿಗಳಾಗಿ, ಅಲೆಮಾರಿಗಳಾಗಿ, ಪರಿಶಿಷ್ಟ ಪಂಗಡ (ಎಸ್.ಟಿ.) ಮೀಸಲಾತಿ ಹೊಂದುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜ ಬೀದರ್ ಮತ್ತು ಕೊಡಗು ಜಿಲ್ಲೆಗಳಲ್ಲಿ ಎಸ್. ಟಿ. ಮೀಸಲಾತಿಯನ್ನು ಹೊಂದಿದೆ. ರಾಜ್ಯದ ಜಿಲ್ಲೆಗಳಿಗೂ ಎಸ್.ಟಿ. ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸಿದೆ ಇರುವುದು ದುರಾದೃಷ್ಟಕರ. ಕುರುಬ ಸಮಾಜದ ಮನವಿಗಳಿಗೆ ಸ್ಪಂದಿಸಿ, ಕುರುಬರ ಮೇಲೆ ನಡೆಯುತ್ತಿರುವ ಅಟ್ರಾಸಿಟಿ ದೌರ್ಜನ್ಯದಿಂದ ಮುಕ್ತಿಗೊಳಿಸಿ, ದುರುಪಯೋಗವನ್ನು ತಡೆಯಬೇಕು ಹಾಗೂ ದಶಕಗಳ ಕುರುಬರನ್ನು ಎಸ್.ಟಿ. ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

      ಈ ಸಂದರ್ಭದಲ್ಲಿ ಕನಕ ಬ್ಯಾಂಕ್ ಅಧ್ಯಕ್ಷ ಹೆಚ್. ಜಿ. ಸಂಗಪ್ಪ, ವಿಜಯನಗರ ಬ್ಯಾಂಕ್ ಮಂಜುನಾಥ್, ಎವಿಕೆ. ಶ್ರೀಹಾಲುಮತ ಸೌಹಾರ್ದ ಬ್ಯಾಂಕ್ ಉಪಾಧ್ಯಕ್ಷರಾದ ಜಿ. ಷಣ್ಮುಖಪ್ಪ ಹಾಲುಮತ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷರಾದ ಸಿ. ವೀರಣ್ಣ, ಕಾರ್ಯಾಧ್ಯಕ್ಷ ದೀಟೂರ್ ಚಂದ್ರು, ಉಪಾಧ್ಯಕ್ಷರುಗಳು ಸಲ್ಲಳ್ಳಿ ಹನುಮಂತಪ್ಪ, ಆರ್. ಹನುಮಂತಪ್ಪ , ಪ್ರಧಾನ ಕಾರ್ಯದರ್ಶಿ ಘನರಾಜ್, ಕಾರ್ಯದರ್ಶಿ ಎಸ್. ಎಂ. ಸಿದ್ದಲಿಂಗಪ್ಪ , ಸಂಚಾಲಕರಾದ ಪರಮೇಶ್ ಆರ್. ಬಿ. ಎಸ್. ಹೆಚ್. ಕಾಂತೇಶ್, ಪರಶುರಾಮ್ ಎನ್. ಸ್ಟ್ಯಾಂಡ್ ನಾಗರಾಜ್, ಸಂಘಟನಾ ಕಾರ್ಯದರ್ಶಿಗಳಾದ ಹಾಲೇಕಲ್ ಬಸವರಾಜ್, ಮಾಯಕೊಂಡ ಸಂದೀಪ್, ಕೆ. ಈ.ಡಿ. ಬಸವರಾಜ್, ಡಿ. ಎನ್, ಕುಮಾರ್ ಮತ್ತಿತರರು ಹಾಜರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link