ಕುಲಪತಿಯಿಂದ ಕಿವಿಮಾತು

ತುಮಕೂರು:

               ಇಂದಿನ ಯುವಜನಾಂಗಅನಗತ್ಯ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲುಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದುತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶ್ರೀ ಸಿದ್ಧಾರ್ಥ ಮಾಧ್ಯಮಅಧ್ಯಯನಕೇಂದ್ರ (ಎಸ್‍ಎಸ್ ಸಿ ಎಂ ಎಸ್ ) ಹಾಗೂ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್‍ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ( ಎಸ್‍ಎಸ್ ಐ ಬಿ ಎಂ) ಜಂಟಿಯಾಗಿ ಆಯೋಜಿಸಿದ್ದ ಪ್ರಥಮ ವರ್ಷದ ಬಿಸಿಎ, ಬಿ.ಕಾಂ., ಬಿಬಿಎಂ, ಎಂ.ಎಸ್.ಡಬ್ಲ್ಯೂ , ಎಂ.ಕಾಂ., ಎಂ.ಎಸ್.ಸಂವಹನ ಹಾಗೂ ಎಂ.ಎಸ್. ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                  ಉತ್ಪಾದಕರಾಗುವ ಮೂಲಕ ಮಾನವ ಕೆಲಸದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.ಆದ್ದರಿಂದದೇಶದ ಹಾಗೂ ಸಮಾಜದಅಭಿವೃದ್ಧಿಗಾಗಿ ಶ್ರಮಿಸುವವರುಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಡಾ.ವೈ.ಎಸ್.ಸಿದ್ದೇಗೌಡ ಹೇಳಿದರು.
ವಿಜ್ಞಾನ ಮತ್ತುತಂತ್ರಜ್ಞಾನದಅಭಿವೃದ್ಧಿಯಲ್ಲಿಜಾಗತಿಕ ಮಟ್ಟದಲ್ಲಿ ಭಾರತತನ್ನಇರುವಿಕೆಯನ್ನು ಸಾಬೀತುಪಡಿಸಿಕೊಂಡಿದೆ.

                 ಅದೇರೀತಿಕರ್ನಾಟಕದಲ್ಲಿಇತ್ತೀಚಿಗೆಅಭಿವೃದ್ಧಿ ಪಥವನ್ನು ಕಾಣಬಹುದಾಗಿದೆ.ತುಮಕೂರನ್ನು ಕೈಗಾರಿಕಾ ವಲಯವನ್ನಾಗಿ ರಾಜ್ಯ ಸರ್ಕಾರ ಗುರುತಿಸಿದೆ.ಜಿಲ್ಲಾ ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ಅವರು ಈಗಾಗಲೇ ಜಿಲ್ಲೆಯಲ್ಲಿಉದ್ಯೋಗ ಸೃಷ್ಟಿಗೆ ಮುಂದಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಲು ವಿದ್ಯಾವಂತಅರ್ಹರು ಮುಂದಾಗಬೇಕುಎಂದು ಕುಲಪತಿಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಶ್ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಪದವೀದರರಾಗಬೇಡಿ ವಿದ್ಯಾವಂತರಾಗಿಎಂದುಕರೆಕೊಟ್ಟರು.

ಬದುಕಿನಲ್ಲಿ ನೋವನ್ನುತಿಂದೂ ಈ ಜಗತ್ತಿನಲ್ಲಿಈಜಲುಯಾರುಕಲಿತಿರುತ್ತಾರೋಅವರೇಜೀವನದಲ್ಲೀಗೆಲ್ಲುತ್ತಾರೆಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನವಿದ್ದು, ಈ ಗಂಭೀರತೆಯನ್ನುಕಾಲೇಜು ವಿದ್ಯಾರ್ಥಿನಿಯರುಅರಿತುಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಅಧ್ಯಯನಅವಧಿಯಲ್ಲಿ ಸದಾಜಾಗೃತೆಯಿಂದ ಕಾರ್ಯೋನ್ಮರಾಗುವಂತೆ ಎಚ್ಚರಿಕೆ ಸಂದೇಶವನ್ನು ಸ್ವಾಮೀಜಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಮಾರುತಿ ಡಿ. ಮಾಲೆ, ಎಸ್‍ಎಸ್‍ಐಟಿ ಆಡಳಿತಾಧಿಕಾರಿ ಡಾ. ವೈ.ಎಂ.ರೆಡ್ಡಿ, ಎಸ್‍ಎಸ್‍ಐಬಿಎಂ ಪ್ರಾಂಶುಪಾಲ ಡಾ.ಎನ್. ಎಸ್. ರವಿಕುಮಾರ್, ಮಾಧ್ಯಮಅಧ್ಯಯನಕೇಂದ್ರದ ನಿರ್ದೇಶಕರಾದಡಾ.ಬಿ.ಟಿ.ಮುದ್ದೇಶ್, ಎಸ್‍ಎಸ್‍ಐ ಬಿ ಎಂ ಹಾಗೂ ಎಸ್‍ಎಸ್ ಸಿ ಎಂ ಎಸ್ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಿಬ್ಬಂದಿಯೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ವಾರಪತ್ರಿಕೆ ಸಿದ್ಧಾರ್ಥ ಸಂಪದ, ಚಿತ್ರಸಂಪುಟ ಸಿದ್ಧಾರ್ಥ ಸ್ನ್ಯಾಪ್ಸ್ , ಹಾಗೂ ನಿಷ್ಕಲ್ಮಶ – ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link