ಚಿಕ್ಕನಾಯಕನಹಳ್ಳಿ :
ಶಿಲ್ಪಸಿರಿ ಸಾಂಸ್ಕತಿಕ ಮತ್ತು ವಿದ್ಯಾಸಂಸ್ಥೆ ವತಿಯಿಂದ ಮಣ್ಣಿನ ಗಣಪನ ಮಾಡೋಣ ಬಾರ ಎಂಬ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟಂಬರ್ 9ರಂದು ತಾಲ್ಲೂಕಿನ ತರಬೇನಹಳ್ಳಿಯಲ್ಲಿ ಷಡಕ್ಷರಿ ಶಂಕರಲಿಂಗಪ್ಪ ಇವರ ಸಹಯೋಗದೊಂದಿಗೆ ಕಾರ್ಯಾಗಾರ ನಡೆಸುತ್ತಿದ್ದು ಶಿಲ್ಪಕಲಾ ಅಕಾಡೆಮಿ ಸದಸ್ಯ ವಿಶ್ವನಾಥ್ ಸಾರಥ್ಯವಿದೆ.
ಶಿಬಿರವು 1ರಿಂದ 10ನೇ ತರಗತಿಯ ಮಕ್ಕಳಿಗಾಗಿ, ಪ್ರಕೃತಿ ಪ್ರಿಯವಾದ ಗಣಪನಮೂರ್ತಿ ತಾವೇ ಕೈಯಾರೆ ಮಾಡಿ ತಮ್ಮ ಮನೆಗೆ ಕೊಂಡೊಯ್ಯಬಹುದಾದ ಅವಕಾಶವನ್ನು ಒದಗಿಸಿದೆ. ಈ ಶಿಬಿರವು ಸೆಪ್ಟಂಬರ್ 9ರಂದು ಬೆಳಗ್ಗೆ 10ಕ್ಕೆ ಪ್ರಾರಂಭವಾಗಲಿದ್ದು ಶಿಲ್ಪಸಿರಿ ಸಂಸ್ಥೆಯ ಅಧ್ಯಕ್ಷ ಸಿ.ಪಿ.ಗಿರೀಶ್ ಮತ್ತು ಆರ್.ಎಸ್.ಎಸ್. ನಗರ ಪ್ರಮುಖರಾದ ನಾಗರಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 9845279517, 8197560556, 9535852415 ಮೊ.ನಂ.ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.