ದೊಡ್ಡೇರಿ
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಗುಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5 ವರ್ಷದ ಅವಧಿಯ ಕಾರ್ಯಕಾರಿ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಲಕ್ಷ್ಮಣ, ಉಪಾಧ್ಯಕ್ಷರಾಗಿ ತಿಪ್ಪೆಸ್ವಾಮಿ ಹಾಗೂ ನಿರ್ದೇಶಕರುಗಳಾಗಿ ಗೋಪಾಲಪ್ಪ, ಶಿವರಾಜು, ಮಲ್ಲಿಕಾರ್ಜುನಯ್ಯ, ರಾಜಣ್ಣ, ನಾಗಭೂಷಣ, ನರಸಿಂಹಣ್ಣ, ಮಂಜಮ್ಮ, ಗೌರಮ್ಮ, ಜಿ.ಶ್ರೀನಿವಾಸ, ತಿಪ್ಪೆಸ್ವಾಮಿ ಆಯ್ಕೆಯಾಗಿರುತ್ತಾರೆ.
ಈ ಸಂಘಕ್ಕೆ ಶನಿವಾರ ಚುನಾವಣೆ ನಡೆಯಬೇಕಾಗಿತ್ತು. ಆದರೆ ಚುನಾವಣೆಗೆ ಆಸ್ಪದವೆ ಇಲ್ಲದಂತೆ ಮೇಲಿನ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್.ಎಲ್.ಹನುಮಂತರಾಯಪ್ಪ ಘೋಷಿಸಿದರು.ಈ ಸಂಧರ್ಭದಲ್ಲಿ ಚಂದ್ರಗಿರಿ ಗ್ರಾಂಪಂ ಸದಸ್ಯ ಕೆ.ರಂಗನಾಥ, ಲಕ್ಷ್ಮಮ್ಮಜಯರಾಮಯ್ಯ, ಮುಖಂಡ ಡಿ.ಸಿ.ವೀರೆಂದ್ರ, ರಾಮಚಂದ್ರಪ್ಪ, ಹೇಮಂತ್ಕುಮಾರ್.ಜಿ.ಎಮ್, ಕಾರ್ಯದರ್ಶಿ ಸೀನಪ್ಪ, ಹಾಲು ಪರೀಕ್ಷಕ ಕಾಂತರಾಜು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
