ಹರಪನಹಳ್ಳಿ:
ಖಾಸಗೀ ಒಡೆತನದ ಬೋರ್ವೆಲ್ ಗಳಿಂದ ಕುಡಿವ ನೀರು ಪೂರೈಕೆಗಾಗಿ ಪಡೆದ ಬಾಡಿಗೆ ಹಣ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನೆಡೆಸಿದ ಘಟನೆ ತಾಲೂಕಿನ ಮೈದೂರು ಗ್ರಾಮ ಪಂಚಾಯಿತಿಯಲ್ಲಿ ಜರುಗಿದೆ.
ತಾಲೂಕಿನಲ್ಲಿ ಕುಡಿವ ನೀರಿನ ಭವಣೆ ಇನ್ನೂ ನೀಗಿಲ್ಲ, ಕೆಲವು ಗ್ರಾಮಗಳಲ್ಲಿ ಸಾಕಷ್ಟು ತೊಂದರೆಯಿದೆ. ಮೈದೂರು ಗ್ರಾಮದಲ್ಲಿ ಕುಡಿವ ನೀರಿನ ತೊಂದರೆ ನೀಗಿಸಲು ಖಾಸಗೀ ಬೋರ್ವೆಲ್ ಮಾಲೀಕರಿಂದ ಒಪ್ಪಂದ ಮಾಡಿಕೊಂಡು ನೀರು ಪಡೆದು ಪೂರೈಸಿದ್ದಾರೆ. ಆದರೆ ನೀರಿನ ಬಾಡಿಗೆ ಹಣ ನೀಡಲು ಮಾತ್ರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಅಧ್ಯಕ್ಷರು ಸಿದ್ದರಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಿಡಿಓ ಕಚೇರಿ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೇ ತಮ್ಮ ಮನಬಂದಂತೆ ವರ್ತಿಸುವುದಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಪ್ರತಿಭಟನೆ ಮಾಡುತ್ತಿದ್ದರೂ ನಿರ್ಲಕ್ಷದಿಂದ ಅಸಡ್ಡೆ ಮಾತುಗಳನ್ನಾಡುವ ಇವರ ವರ್ತನೆ ಸರಿಯಲ್ಲ. ಕೂಡಲೇ ಖಾಸಗೀಯವರಿಂದ ನೀರು ಪಡೆದಿದ್ದಕ್ಕೆ ಬಾಡಿಗೆ ಹಣ ಪಾವತಿಸಬೇಕು, ಪಿಡಿಓರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಚೇರಿಗೆ ಬೀಗ ಹಾಕಿದ್ದರಿಂದ ಸಿಬ್ಬಂಧಿಗಳು ಪ್ರತಿಭಟನೆ ಅಂತ್ಯವಾಗುವವರೆಗೂ ಕಚೇರಿಯ ಹೊರಗಡೆಯೇ ಕುಳಿತು ಕೊಳ್ಳವಂತಾಗಿತ್ತು .ಇಓ ತಿಪ್ಪೇಸ್ವಾಮಿಯವರು ಮಾತನಾಡಿ ನೀರಿನ ಬಾಡಿಗೆ ಹಣವನ್ನು ಶೀಘ್ರದಲ್ಲಿಯೇ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಮದ್ಯಾಹ್ನದ ವೇಳೆಗೆ ಪ್ರತಿಭಟನೆ ಹಿಂಪಡೆದರು. ಹಣ ಪಾವತಿಯಲ್ಲಿ ವಿಳಂಭ ನೀತಿ ಅನುಸರಿಸಿದರೆ ಉಘ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕುಬೇರಪ್ಪ, ಶಂಕರ್, ನಾಗರಾಜ್ ಹಾಗೂ ತಾತೇಶ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
