ಚಂಚಲ ಮನಸ್ಸಿನ ಮನುಷ್ಯರನ್ನು ಸರಿಪಡಿಸಲು ಧಾರ್ಮಿಕ  ಕಾರ್ಯಕ್ರಮದಿಂದ ಮಾತ್ರ ಸಾಧ್ಯ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೊರಟಗೆರೆ ;-

     ಇತ್ತಿಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸ್ಥಿರವಿಲ್ಲದೆ ಚಂಚಲವಾಗುತ್ತಿದ್ದು ಚಂಚಲ ಮನಸ್ಸು ಸ್ಥಿರವಾಗಿರಿಸಲು ಧಾರ್ಮಿಕ ಕಾರ್ಯಕ್ರಮಗಳತ್ತ ಹೋದರೆ ಮಾತ್ರ ಸಾದ್ಯವಾಗಿದ್ದು ಗ್ರಾಮಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

         ಅವರು ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಗ್ರಾಮ ದೇವತೆ ಕೋಟೆ ಮಾರಮ್ಮದೇವಿ ಹಾಗೂ ಶ್ರೀ ಕೊಲ್ಲಾಪುರದಮ್ಮನವರ ನೂತನ ದೇವಾಲಯ ಮತ್ತು ಮೂಲ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೊತ್ಸವದ ಎರಡನೇ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪ್ರತಿ ಗ್ರಾಮಗಳಲ್ಲೂ ಗ್ರಾಮದೇವತಗಳು ಇದ್ದು ಈ ದೇವತೆಗಳು ಹೆಚ್ಚಿನ ಮಹತ್ವ ಪಡೆದಿರುತ್ತವೆ ಹಾಗೂ ಜನ ಸಮುದಾಯ ತಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಬೇಕಾದರೆ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಗ್ರಾಮಗಳಲ್ಲಿ ದೇವಾಲಯಗಳ ಜಿರ್ಣೋದ್ದಾರ ಮಾಡುವುದು ಬಹಳ ಕಷ್ಠದ ಕೆಲಸ ಆದರೂ ದೇವಾಲಯ ಸಮಿತಿಯ ಪಧಾದಿಕಾರಿಗಳು ಪ್ರಾಮಾಣಿಕತೆ ಹಾಗೂ ಶ್ರದ್ದೆಯಿಂದ ದೇವಾಲಯ ಉತ್ತಮವಾಗಿ ನಿರ್ಮಿಸಿ ದೇವತೆಗಳ ಪುನರ್ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದ ಅವರು ಈ ದೇವತಾ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

*ದೇವಾಲಯಕ್ಕೆ ಜಮೀನು ;-*

    ಮುಂದಿನ ದಿನಗಳಲ್ಲಿ ದೇವಲಯ ಅಭಿವೃದಿ ಹೊಂದಬೇಕಾದರೆ ಆರ್ಧಿಕವಾಗಿ ಸದೃಡವಾಗಿರಬೇಕು ಆರ್ಧಿಕ ಸಹಕಾರ ಅವಶ್ಯಕವಾಗಿದ್ದು ಕೊರಟಗೆರೆ ಕೋಟೆ ಮಾರಮ್ಮದೇವಿಯ ದೇವಾಲಯ ಅಭಿವೃದ್ದಿಗೆ ಸರ್ಕಾರದಿಂದ ಜಮೀನು ಮುಂಜೂರು ಮಾಡಿಸಿ ಅದರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ದೇವಾಲಯಕ್ಕೆ ಆರ್ಥಿಕವಾಗಿ ಆದಾಯ ಬರುವಂತೆ ಮಾಡುವುದಾಗಿ ಇದಕ್ಕೆ ದೇವಾಲಯ ಅಭಿವೃಧ್ದಿ ಸಮಿತಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. 

*3 ದಿನಗಳ ಸತತ ದಾಸೋಹ* 

      ಗ್ರಾಮ ದೇವತೆ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರ ದಮ್ಮ ದೇವಸ್ಥಾನ ಜೀವನೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಮೂರು ದಿನಗಳ ಕಾಲ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಜರುಗುತ್ತಿದ್ದು, ಸಾವಿರಾರು ಜನ ಭಕ್ತಾದಿಗಳಿಗೆ ಸತತವಾಗಿ ಅನ್ನ ಸಂತರ್ಪಣೆಯನ್ನ ಶ್ರೀಮತಿ ಪೂರ್ಣಿಮಾ ಹಾಗೂ ಜನಾರ್ಧನ್ ಜೆ ಪಿ (ತ್ರಿಧಾತ್ರಿ) ರವರ ಕುಟುಂಬದಿಂದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ದಾಸೋಹ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಯಿತು ‌.

*ಶಾಸ್ತ್ರವಾಗಿ ಜರುಗಿದ ಪೂಜಾ ಕೈಂಕರ್ಯ* 

     ಶ್ರೀಮತೆ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮನ ದೇವರ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಹತ್ತಾರು ಪುರೋಹಿತರ ಸಮ್ಮುಖದಲ್ಲಿ ಹವನ- ಹೋಮ ಗಂಗಾ ಪೂಜೆ, ಗಣಪತಿ ಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಬಹಳ ಯಶಸ್ವಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

          ಈ ಸಂದರ್ಭದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ದೇವಿಗ ವಿಶೇಷ ಪೂಜೆ ಸಲ್ಲಿಸಿ ನೂತನ ದೇವಾಲಯವನ್ನು ವಿಷಿಸಿ ನೂತನ ದೇವಾಲಯ ನಿಮಾರ್ಣ ಮಾಡಿದ ಶಿಲ್ಪಿ ಮಹಾಲಿಂಗಯ್ಯ ನವರನ್ನು ಅಭಿನಂದಿಸಿ ಗೌರವಿಸಿದರು,

             ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಪ.ಪಂ.ಅಧ್ಯಕ್ಷೆ ಅನಿತಾ, ಸ್ಥಾಯಿಸಮಿತಿ ಅಧ್ಯಕ್ಷ ಹೇಮಲತಾಮಂಜುನಾತ್, ಸದಸ್ಯರಾದ ಭಾಗ್ಯಾಮ್ಮಗಣೇಶ್, ಕೆ.ಆರ್.ಓಬಳರಾಜು, ದೇವಾಲಯ ಸಮಿತಿ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಕೆ.ಎನ್.ಲಕ್ಷ್ಮೀನಾರಾಯಣ್, ಸದಸ್ಯರಾದ ಎಸ್.ಪಿ.ಎಲ್.ರಾವ್, ಮುರಳೀಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಕೆ.ಬಿ.ಲೋಕೇಶ್, ಪುನೀತ್, ರಾಘವೇಂದ್ರ ಅರ್ಚಕ ಶ್ರೀಧರಾಚಾರ್, ದೀಪಕ್‌ಆಚಾರ್, ಹರೀಶಾಚಾರ್, ಸೇರಿದಂತೆ ಇನ್ನಿತರರು ಹಾಜರಿದ್ದರು.

  ಕೊರಟಗೆರೆ ಗ್ರಾಮದೇವತೆ ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ದೇವಾಲಯದ ಅಭಿವೃದ್ದಿಗೆ ಸರ್ಕಾರದಿಂದ ಜಮೀನು ಮುಂಜೂರು ಮಾಡಿಸಿ ಸಮುದಾಯ ಭವನ ನಿರ್ಮಾಣಮಾಡಿ ನಿರಂತರವಾಗಿ ಆರ್ಥಿಕವಾಗಿ ಅಭಿವೃದ್ದಿ ಹೊಂದುವಂತೆ ಮಾಡಲಾಗುವುದು.- ಗೃಹ ಸಚಿವ ಡಾ.ಜಿ.ಪರಮೇಶ್ವರ್.

Recent Articles

spot_img

Related Stories

Share via
Copy link