ಚಾಮರಾಜನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ

ಚಾಮರಾಜನಗರ:

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ 40 ಪರ್ಸೆಂಟ್ ಕಮಿಷನ್ ಹಗರಣದ ವಿರುದ್ಧ ಚಾಮರಾಜನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ, ಮಾತನಾಡಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಂಬರುವ ದಿನಗಳಲ್ಲಿ ವಿಧಾನಸಭಾ ಕೇಂದ್ರದಲ್ಲೂ ಇದೇ ರೀತಿಯ ಪ್ರತಿಭಟನಾ ಸಭೆಗಳನ್ನು ನಡೆಸಬೇಕು ಎಂಬ ಚಿಂತನೆ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟು ಕೆಟ್ಟ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿರುವ, ದೇಶದಲ್ಲಿ ದ್ವೇಷದ ವಿಷಬೀಜ ಬಿತ್ತುವ ಸರ್ಕಾರವನ್ನು ನೋಡಿಯೇ ಇಲ್ಲ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನ, ಅಧಿಕಾರಿಗಳು ಮಾತನಾಡುತ್ತಾ ಇದ್ದಾರೆ.

ರಾಜ್ಯದಲ್ಲಿ ಏ.19,20 ರಂದು ಮಳೆ; 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

07/06/2021 ರಲ್ಲಿ ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕದ ಯಾವುದೇ ಸರ್ಕಾರಿ ಕಾಮಗಾರಿಗೆ ನಾವು 40% ಕಮಿಷನ್ ನೀಡಬೇಕು, ಈ 40% ಕಮಿಷನ್ ಕೊಟ್ಟು ನಮ್ಮಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ.

ಕಮಿಷನ್ ಗಾಗಿ ಈ ಸರ್ಕಾರ ನಮಗೆ ಕಿರುಕುಳ, ಹಿಂಸೆ ಕೊಡುತ್ತಿದೆ, ದಯಮಾಡಿ ಇದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ. ಕೆಂಪಣ್ಣನವರು ಬರೆದ ಈ ಪತ್ರ ನನ್ನ ಬಳಿಯೂ ಇದೆ, ಎಲ್ಲಾ ಪತ್ರಿಕೆಗಳಲ್ಲಿ ವರದಿ ಕೂಡ ಆಗಿದೆ. ಈ ರೀತಿ ಗುತ್ತಿಗೆದಾರರ ಸಂಘದವರು ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡಿ ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು.

ನಾಲ್ಕನೇ ಅಲೆ ಆತಂಕ: ದೇಶದಲ್ಲಿ ಕರೊನಾ ಪ್ರಕರಣ ದಿಢೀರ್ ಏರಿಕೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಚುನಾವಣಾ ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರ ಸರ್ಕಾರ 10% ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದರು, ಅದಕ್ಕೆ ನಾನು ತಾವು ಪ್ರಧಾನಿ ಹುದ್ದೆಯಲ್ಲಿ ಇದ್ದೀರ, ತಮ್ಮ ಬಳಿ ಸಿಬಿಐ, ಇಡಿ, ಇಂಟೆಲಿಜೆನ್ಸ್ ಎಲ್ಲವೂ ಇವೆ, ಈ ರೀತಿ ಆಧಾರ ರಹಿತ ಆರೋಪ ಮಾಡುವ ಬದಲು ತನಿಖೆ ಮಾಡಿಸಿ ಆದರೆ ಪ್ರಧಾನಿ ಹುದ್ದೆಗೆ ಅಗೌರವ ತೋರುವಂತೆ ನಡೆದುಕೊಳ್ಳಬೇಡಿ ಎಂದು ಹೇಳಿದ್ದೆ.

ಈಗ ಕೆಂಪಣ್ಣನವರು ಬರೆದಿರುವ ಪತ್ರ ಸಾಕ್ಷಿಯಾಗಿ ನಿಮ್ಮ ಬಳಿ ಇದೆ, ತನಿಖೆ ಮಾಡಿಸಿ ಮೋದಿಯವರೆ. ಯಾಕೆ ಮೌನವಾಗಿದ್ದೀರ? ನಿಮ್ಮ ಮೌನ ರಾಜ್ಯದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತೆ ಅಲ್ಲವೇ?

ನರೇಂದ್ರ ಮೋದಿ ಅವರು ತಮ್ಮನ್ನು ಚೌಕಿದಾರ ಎಂದು ಕರೆದುಕೊಂಡಿದ್ದರು, ನಾ ಖಾವೂಂಗಾ, ನಾ ಖಾನೇದೂಂಗ ಎಂದಿದ್ದರು. ಈಗ ಒಂಭತ್ತು ತಿಂಗಳು ಆಗಿದೆ, ಆದರೂ ಪತ್ರದ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ. ನರೇಂದ್ರ ಮೋದಿ ಅವರ ಬೂಟಾಟಿಕೆ, ನಾಟಕ ಜನರಿಗೆ ಅರ್ಥವಾಗ್ತಿದೆ.

ಐಪಿಎಲ್‌ಗೆ 15 ವರ್ಷಗಳ ಸಂಭ್ರಮ; ವಿಶೇಷ ವಿಡಿಯೊ ನೋಡಿ

ಸ್ವಾತಂತ್ರ್ಯ ಭಾರತದಲ್ಲಿ ಅನೇಕ ಜನ ಪ್ರಧಾನಿಗಳು ಬಂದು ಹೋಗಿದ್ದಾರೆ, ಆದರೆ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಇಲ್ಲ. ನರೇಂದ್ರ ಮೋದಿ ಅವರು ಕೊಟ್ಟ ಯಾವುದಾದರೂ ಒಂದು ಭರವಸೆಯನ್ನು ಈಡೇರಿಸಿದ್ದಿದ್ದರೆ ತೋರಿಸಲಿ ನೋಡೋಣ.

ನರೇಂದ್ರ ಮೋದಿ ಅವರು ಅಚ್ಚೇದಿನ್ ಬರುತ್ತೆ ಅಂದರು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಗೃಹ ಬಳಕೆಯ ಸಿಲಿಂಡರ್ ಬೆಲೆ ರೂ. 414 ಇತ್ತು, ಇವತ್ತು ಒಂದು ಸಾವಿರ ರೂಪಾಯಿ ಆಗಿದೆ. ಯುಪಿಎ ಸರ್ಕಾರದ ಕೊನೆ ವರ್ಷ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 68, ಡೀಸೆಲ್ ಬೆಲೆ ರೂ. 46 ಇತ್ತು.

ಇಂದು ಪೆಟ್ರೋಲ್ ಬೆಲೆ 111 ರೂಪಾಯಿ, ಡೀಸೆಲ್ ಬೆಲೆ 97 ರೂಪಾಯಿ ಆಗಿದೆ. ಅಚ್ಚೇದಿನ್ ಕಹಾ ಹೈಜೀ? ಅಂದು ಪೆಟ್ರೋಲ್ ಮೇಲೆ ಹೆಚ್ಚುವರಿ ಅಬಕಾರಿ ತೆರಿಗೆ 9 ರೂಪಾಯಿ 20 ಪೈಸೆ ಇತ್ತು, ಈಗ ಅದು 32 ರೂಪಾಯಿ 98 ಪೈಸೆ ಆಗಿದೆ. ಡೀಸೆಲ್ ಮೇಲೆ ತೆರಿಗೆ 3 ರೂಪಾಯಿ 46 ಪೈಸೆ ಇತ್ತು, ಈಗದು 31 ರೂಪಾಯಿ 84 ಪೈಸೆ ಆಗಿದೆ. ಜನರ ರಕ್ತ ಕುಡಿಯುತ್ತಿದ್ದೀರಲ್ರೀ ನರೇಂದ್ರ ಮೋದಿ ಅವರೇ. ಗೊಬ್ಬರ, ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಮುಟ್ಟಿದೆ.

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ

ರಸಗೊಬ್ಬರ ಬೆಲೆ ಡಿಎಪಿ ಯ ಪ್ರತಿ ಬ್ಯಾಗ್ ಮೇಲೆ 150 ರೂಪಾಯಿ ಏರಿಕೆ ಮಾಡಿದ್ದಾರೆ. ಪ್ರತೀ ವರ್ಷ ದೇಶದ ರೈತರು ಸುಮಾರು 1 ಕೋಟಿ 20 ಲಕ್ಷ ಟನ್ ಗಳಷ್ಟು ಡಿಎಪಿ ಬಳಕೆ ಮಾಡುತ್ತಾರೆ. ಇದರಿಂದ ಸರ್ಕಾರ 3,200 ಕೋಟಿ ರೂಪಾಯಿ ಹೆಚ್ಚುವರಿಯಾಗಿ ರೈತರಿಂದ ಸುಲಿಗೆ ಮಾಡಿದೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿ ರೈತರ ಸಾಲ ದುಪ್ಪಟ್ಟು ಮಾಡಿದ್ದಾರೆ.

ಈ ಬಾರಿ ಚಾಮರಾಜನಗರದ ರೈತರು ಅರಿಶಿಣ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ, ಧ್ರುವ ನಾರಾಯಣ ಅವರು ತಾವು ಸಂಸದರಾಗಿದ್ದಾಗ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರೊಂದಿಗೆ ಮಾತನಾಡಿ ಮಾರುಕಟ್ಟೆ ಬೆಲೆಗೆ ಅರಿಶಿನ ಖರೀದಿಸುವಂತೆ ಮಾಡಿದ್ದೆ ಎಂದು ಹೇಳಿದರು. ಈ ಸರ್ಕಾರ ಯಾಕೆ ಅದನ್ನು ಮಾಡುತ್ತಿಲ್ಲ?

ನಾಯಿಮರಿ ಹೊತ್ತೊಯ್ದ ಚಿರತೆ ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯ

ರಾಜ್ಯದಲ್ಲಿ ಹದಿನೈದು ಲಕ್ಷ ಟನ್ ರಾಗಿ ಬೆಳೆದಿದ್ದಾರೆ, ಸರ್ಕಾರ 1ಲಕ್ಷದ 90 ಸಾವಿರ ಟನ್ ಖರೀದಿ ಮಾಡಿದೆ. ರೈತರು ಉಳಿದ ರಾಗಿಯನ್ನು ಏನು ಮಾಡಬೇಕು? ಸರ್ಕಾರ ರಾಗಿ ಖರೀದಿ ನಿಲ್ಲಿಸಿರುವದರಿಂದ ರೈತರಿಗೆ ಪ್ರತೀ ಕ್ವಿಂಟಾಲ್ ರಾಗಿಗೆ 1,500 ರೂಪಾಯಿ ನಷ್ಟವಾಗುತ್ತಿದೆ. ನಾವು ರೈತರ ಪರ ಎನ್ನುವ ಬಸವರಾಜ ಬೊಮ್ಮಾಯಿ ಅವರೇ ಇದೇನಾ ರೈತರ ಕಾಳಜಿ? ಇವತ್ತು ಭತ್ತ, ರಾಗಿ, ಮೆಕ್ಕೆಜೋಳ, ಅರಿಶಿಣ ಕೊಂಡುಕೊಳ್ಳೋರೆ ಇಲ್ಲ.

ನಿಮ್ಮ ಕೈಲಾಗದ ಮೇಲೆ ಯಾಕೆ ಸರ್ಕಾರದಲ್ಲಿ ಇದ್ದೀರ ಬೊಮ್ಮಾಯಿ ಅವ್ರೆ? ಇದೇ ವಿಚಾರವನ್ನು ವಿಧಾನಸಭೆಯಲ್ಲೂ ಹೇಳಿದ್ದೇನೆ, ನಿಮ್ಮ ಕೈಲಿ ರೈತರ ಬೆಳೆ ಕೊಂಡು ಕೊಳ್ಳುವ ತಾಕತ್ತು ಇಲ್ಲದಿದ್ದರೆ ಕುರ್ಚಿ ಬಿಟ್ಟು ಹೋಗಿ, ನಾವು ಬಂದು ಖರೀದಿ ಮಾಡುತ್ತೇವೆ ಎಂದು ಹೇಳಿದೆ.

ಏ.22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ: 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

ಈ ಸರ್ಕಾರ ಬಂದು ಮೂರು ವರ್ಷ ಆಯ್ತು, ಇವತ್ತಿನ ವರೆಗೆ ಒಂದೇ ಒಂದು ಹೊಸ ಮನೆ ಮಂಜೂರು ಮಾಡಿಲ್ಲ. ಕುಮಾರಸ್ವಾಮಿ ಒಂದು ವರ್ಷ, ಬಿಜೆಪಿ ಮೂರು ವರ್ಷದಿಂದ ಅಧಿಕಾರದಲ್ಲಿ ಇದೆ, ಹೊಸ ಮನೆ ಬಿಡಿ ನಮ್ಮ ಸರ್ಕಾರ ಮಂಜೂರು ಮಾಡಿದ್ದ ಮನೆಗಳಿಗೆ ಎರಡನೇ, ಮೂರನೇ ಕಂತಿನ ಹಣ ನೀಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಐದು ವರ್ಷದಲ್ಲಿ ಹದಿನೈದು ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ.

ಈ ಬಿಜೆಪಿಯವರದು ಬಡವರ, ದಲಿತರ ಪರವಾದ ಸರ್ಕಾರನ? ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕು ಎಂದು ಕಾನೂನು ಮಾಡಿದ್ದು ರಾಜ್ಯದ ಇತಿಹಾಸದಲ್ಲಿ ನಮ್ಮ ಸರ್ಕಾರ ಎಂಬುದನ್ನು ಜನ ಮರೆಯಬಾರದು. ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಹಣ 29,690 ಕೋಟಿ ರೂಪಾಯಿ, ಆಗಿನ ಬಜೆಟ್ ಗಾತ್ರ 2.02 ಲಕ್ಷ ಕೋಟಿ ರೂಪಾಯಿ.

ಈ ಸಾಲಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ ರೂಪಾಯಿ, ಆದರೆ ಈ ಯೋಜನೆಗೆ ಘೋಷಿಸಿರುವ ಅನುದಾನ ರೂ. 28,000 ಕೋಟಿ. ಈ ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ಸೋಪ್ ಕಿಟ್ ಕೊಟ್ಟಿಲ್ಲ, ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಇಂಥಾ ಸರ್ಕಾರ ಇರಬೇಕೇನ್ರಿ?

ಸಿದ್ದರಾಮಯ್ಯಗೆ ನಾಲ್ಕು ನೇರ ಪ್ರಶ್ನೆ ಕೇಳಿದ ,ಹೆಚ್.ಡಿ.ಕುಮಾರಸ್ವಾಮಿ ಧೈರ್ಯವಿದ್ದರೆ ಉತ್ತರಿಸಿ, ವಿಷಯಾಂತರ ಬೇಡ ಎಂದು ಟಾಂಗ್ ಕೊಟ್ಟ ಮಾಜಿ ಸಿಎಂ

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿಭಾಗ್ಯ, ವಿದ್ಯಾಸಿರಿ ಮುಂತಾದ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ರಾಜ್ಯದ 4 ಕೋಟಿ 30 ಲಕ್ಷ ಜನರಿಗೆ ತಲಾ ಏಳು ಕೆ.ಜಿ ಉಚಿತವಾಗಿ ಅಕ್ಕಿ ಕೊಡುತ್ತಿದ್ದೆವು. ಇವೆಲ್ಲ ಯಾವುದೋ ಒಂದು ಜಾತಿ, ಧರ್ಮದ ಜನರಿಗಾಗಿ ತಂದ ಯೋಜನೆಗಳಲ್ಲ.

ಬಡವರು ಹೊಟ್ಟೆ ತುಂಬಾ ಊಟ ಮಾಡಿದ್ರೆ ನಿಮಗೆ ಹೊಟ್ಟೆ ಉರಿನಾ? ಯಾಕೆ ಅದನ್ನು ಐದು ಕೆ.ಜಿ ಗೆ ಇಳಿಸಿದ್ದೀರ? ನಮ್ಮ ಸರ್ಕಾರ 2.60 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿತ್ತು, ಇದು ಅತ್ಯಂತ ಯೋಗ್ಯವಾದ ಕಾರ್ಯಕ್ರಮ, ಇದನ್ನು ಮುಂದುವರೆಸಬೇಕು ಎಂದು ಕೃಷಿ ತಜ್ಞರು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರ ಬಂದಮೇಲೆ ಈ ಯೋಜನೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ.

ಮೇ 2ನೇ ವಾರ SSLC ಪರೀಕ್ಷೆ ಫಲಿತಾಂಶ

ಸರ್ಕಾರ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ 8,000 ಕೋಟಿ ರೂಪಾಯಿಯಲ್ಲಿ, ಆರೋಗ್ಯ ಸಚಿವರು ಸುಮಾರು 2,000 ಕೋಟಿ ಲಂಚ ಹೊಡೆದಿದ್ದಾರೆ. ಅದಕ್ಕೆ ಈ ಸರ್ಕಾರದ ಅತ್ಯಂತ ಭ್ರಷ್ಟ ಇಲಾಖೆ ಎಂದರೆ ಆರೋಗ್ಯ ಇಲಾಖೆ, ಅತೀ ಭ್ರಷ್ಟ ಸಚಿವರು ಎಂದರೆ ಆರೋಗ್ಯ ಸಚಿವರು ಎಂದು ಕೆಂಪಣ್ಣನವರು ಹೇಳಿದ್ದಾರೆ.

ಸಂತೋಷ್ ಪಾಟೀಲ್ ಎಂಬ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಗುತ್ತಿಗೆದಾರ ಬೆಳಗಾವಿ ಜಿಲ್ಲೆಯ ಹಿಂಡಲಗಾ ಪಂಚಾಯತಿ ವ್ಯಾಪ್ತಿಯಲ್ಲಿ ರೂ. 4 ಕೋಟಿ ಕಾಮಗಾರಿಗಳನ್ನು ಮಾಡಿದ್ದರು. ನೂರು ವರ್ಷಕ್ಕೆ ಒಮ್ಮೆ ಊರಿನ ಜಾತ್ರೆ ಬರುತ್ತೆ,

ಊರಲ್ಲಿ ರಸ್ತೆ ಕೆಲಸ ಆಗಬೇಕು ಎಂದು ಈಶ್ವರಪ್ಪ ಅವರನ್ನು ಕೇಳಿದಾಗ ಕೆಲಸ ಮಾಡಿ ದುಡ್ಡು ಕೊಡ್ತೀನಿ ಎಂದು ಹೇಳಿ ಕೆಲಸ ಮುಗಿದ ಮೇಲೆ ಬಿಲ್ ಬಿಡುಗಡೆ ಮಾಡಲು 40% ಕಮಿಷನ್ ಕೊಡಿ ಎಂದು ಈಶ್ವರಪ್ಪ, ಬಸವರಾಜ ಮತ್ತು ರಮೇಶ್ ಕೇಳಿದ್ದಾರೆ. ಹಣ ಬಿಡುಗಡೆ ಮಾಡಿಲ್ಲ ಎಂದು ನೊಂದು ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಈಶ್ವರಪ್ಪ ಮನುಷ್ಯನಾ ಇಲ್ಲ ರಾಕ್ಷಸನ? ಇವರನ್ನು ಕೊಲೆಗಡುಕ ಎನ್ನದೆ ಬೇರೆ ಏನು ಕರೀಬೇಕು?

ಬೆಂಗಳೂರನ್ನು ಅಂತರರಾಷ್ಟ್ರೀಯ ಸ್ಮಾರ್ಟ್ ಸಿಟಿ ಮಾಡಲು ಸರ್ಕಾರದ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಗುತ್ತಿಗೆದಾರ ಸಂತೋಷ್ ಪಾಟೀಲ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ನಾನು ಸಾಲ ಮಾಡಿ, ಹೆಂಡತಿ ಒಡವೆ ಅಡವಿಟ್ಟು ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡಿದ್ದೀನಿ, ನನ್ನಿಂದ 40% ಕಮಿಷನ್ ಕೊಡಲು ಆಗ್ತಿಲ್ಲ, ನೀವೆ ಅನುದಾನ ಬಿಡುಗಡೆ ಮಾಡಿಸಿ, ಇಲ್ಲದಿದ್ದರೆ ನನಗೆ ಉಳಿದಿರುವ ಹಾದಿ ಆತ್ಮಹತ್ಯೆ ಮಾತ್ರ ಎಂದು ಹೇಳಿದ್ದಾರೆ. ನಾವು ಬೆಳಗಾವಿಯ ಸಂತೋಷ್ ಪಾಟೀಲ್ ಮನೆಗೆ ಸಾಂತ್ವನ ಹೇಳಲು ಹೋಗಿದ್ದೆವು,

ಅವರ ತಾಯಿ ನನ್ನ ಮಗನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದರು. ಮೃತನ ಹೆಂಡತಿ ಇದೇ ಮಾತು ಹೇಳಿದ್ರು, ಸಂತೋಷ್ ಪಾಟೀಲ್ ಸಾಯುವ ಮೊದಲು ಕಳುಹಿಸಿರುವ ವಾಟ್ಸಾಪ್ ಮೆಸೇಜ್ ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೇನು ಸಾಕ್ಷಿ ಬೇಕು?

ಬೊಜ್ಜು, ಸ್ಥೂಲಕಾಯ ಸಮಸ್ಯೆಗಳ ಕುರಿತು ಏಪ್ರಿಲ್ 21 ರಿಂದ 23 ರ ವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ತಜ್ಞ ವೈದ್ಯರ ಸಮ್ಮೇಳನ: ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯ

ಈಶ್ವರಪ್ಪ ಲಂಚ ಕೇಳಿರುವುದು ಗೊತ್ತಿದ್ದರೂ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಲ್ಲ. ಈ ಕಾಯ್ದೆಯ ಸೆಕ್ಷನ್ 7(a), 13 ಕ್ಲಾಸ್ 1 ರಡಿ ಕೇಸ್ ದಾಖಲಾಗಬೇಕಿತ್ತು. ಈಗ ಸೆಕ್ಷನ್ 34, 306 ಅಡಿ ಮಾತ್ರ ಕೇಸ್ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಇದೆ, ಬೇರೆ ಯಾರಾದ್ರೂ ಈ ತಪ್ಪು ಮಾಡಿದ್ರೆ ಬಂಧಿಸುತ್ತಿದ್ದರೋ ಇಲ್ವೋ? ಈಶ್ವರಪ್ಪನವರ ಬಂಧನವಾಗಬೇಕು ಮತ್ತು ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ 14 ನೇ ಪರಿಚ್ಛೇದವು ಕಾನೂನಿನ ಮುಂದೆ ಸರ್ವರೂ ಸಮಾನರು, ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ಸಿಗಬೇಕು ಎಂದು ಹೇಳುತ್ತದೆ. ನಾವೇನು ಈಶ್ವರಪ್ಪ ಅವರ ಮೇಲೆ ರಾಜಕೀಯ ದ್ವೇಷಕ್ಕೆ ಈ ಮಾತು ಹೇಳುತ್ತಿಲ್ಲ, ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂಬುದು ನಮ್ಮ ಒತ್ತಾಯ.

ಎರಡನೇ ಹಂತಕ್ಕೆ ಬಂದ ರಷ್ಯಾ- ಉಕ್ರೇನ್ ಯುದ್ದ

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕುರ್ಚಿಯಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ತಾವೆಲ್ಲ ಮನೆ ಮನೆಗೆ ಹೋಗಿ ಈ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಬೇಕು, ಆ ಮೂಲಕ ರಾಜ್ಯವನ್ನು ಉಳಿಸಬೇಕು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾದ ಕಾಂಗ್ರೆಸ್ ನವರನ್ನು ಜೈಲಿಗಾಕಿ ಎಂದು ಬ್ರಿಟಿಷರಿಗೆ ಹೇಳಿಕೊಟ್ಟವರು ಇದೇ ಆರ್.ಎಸ್‌ಎಸ್ ನವರು. ಇವರು ರಾಷ್ಟ್ರಭಕ್ತರಲ್ಲ, ರಾಷ್ಟ್ರ ದ್ರೋಹಿಗಳು. ನಾವು ಅಧಿಕಾರಕ್ಕೆ ಬರಬೇಕು ಎಂಬುದು ಮುಖ್ಯವಲ್ಲ, ಈ ರಾಜ್ಯ, ದೇಶ, ಸಂವಿಧಾನ ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಸುಳ್ಳು ಹೇಳಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.

ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

ಈ ದೇಶ ಯಾವುದೇ ಒಂದು ಧರ್ಮದವರದ್ದಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮಗಳ ಜನರು ಹೋರಾಟ ಮಾಡಿದ್ದಾರೆ. ಅದಕ್ಕಾಗಿ ಬಾಬಾ ಸಾಹೇಬರು ಸಂವಿಧಾನದಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಎಂಬ ತತ್ವಗಳನ್ನು ಕೊಟ್ಟಿದ್ದಾರೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಅವರು ಹೇಳಿದ್ದಾರೆ. ಆದರೆ ಈ ಬಿಜೆಪಿ, ಆರ್.ಎಸ್.ಎಸ್ ನವರು ಹೀಗೆ ಬದುಕಲು ಬಿಡುತ್ತಿಲ್ಲ.

ಕುಮಾರಸ್ವಾಮಿ ಅವರು ಈಶ್ವರಪ್ಪ ಅವರನ್ನು ಏಕೆ ಬಂಧಿಸಬೇಕು ಎಂದು ಹೇಳಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಹೇಳುವ ಮಾತಾ ಇದು? ಇಂಥವರಿಗೆ ಜನ ಧಿಕ್ಕಾರ ಹಾಕಬೇಕು. ಈ ಬಿಜೆಪಿ ಮತ್ತು ಅವರಿಗೆ ಬೆಂಬಲವಾಗಿ ನಿಂತವರಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಬೇಕು.

 ಚೀನಾದ ಶಾಂಘೈನಲ್ಲಿ ಕೊರೊನಾಗೆ ಮೂವರು ಬಲಿ, ಲಾಕ್‌ಡೌನ್‌ ಬಳಿಕ ಮೊದಲ ಸಾವಿನ ವರದಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap