ಬೆಂಗಳೂರು
ಕೇರಳದಲ್ಲಿ ನಡೆಯುತ್ತಿರುವ ಚಿತ್ರವೊಂದರ ಚಿತ್ರೀಕರಣದಲ್ಲಿ ನಟಿಸಲು ಅಹ್ವಾನದ ಮೇಲೆ ಹೋಗಿದ್ದ ನನಗೆ ಚಿತ್ರ ತಂಡ ಕಿರುಕುಳ ನೀಡಿದೆ ಎಂದು ಸ್ಯಾಂಡಲ್ವುಡ್ ನಟಿ ಅಕ್ಷತಾ ಶ್ರೀಧರ್ ನಗರ ಪೆÇಲೀಸರಿಗೆ ದೂರು ನೀಡಿದ್ದಾರೆ.
`ಕೊಚ್ಚಿನ್ ಶಾದಿ ಚೆನ್ನೈ 03′ ಹೆಸರಿನಲ್ಲಿ ನಿರ್ಮಾಣವಾಗಲಿರುವ ಚಿತ್ರದಲ್ಲಿ ಅಭಿನಯಿಸಲು ಆಹ್ವಾನ ನೀಡಿದ್ದರಿಂದ ಅಲ್ಲಿಗೆ ತೆರಳಿದ ಮೇಲೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಅಕ್ಷತಾ ಶ್ರೀಧರ್ ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನಟಿ ಅಕ್ಷತಾ ಶ್ರೀಧರ್ ಮಲೆಯಾಳಂ ಚಿತ್ರದಲ್ಲಿ ನಟಿಸಲು ಕೇರಳಕ್ಕೆ ತೆರಳಿದ್ದು ಆಕೆಯ ವಾಸ್ತವ್ಯಕ್ಕೆ ಹೋಟೆಲ್ ನೀಡಲಾಗಿತ್ತು. ಅಲ್ಲಿ ನೀಡಿದ್ದ ಹೋಟೆಲ್ ಕೊಠಡಿ ಸ್ವಚ್ಛ ಮಾಡಿರಲಿಲ್ಲ. ಈಬಗ್ಗೆ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದಾಗ ಜಗಳ ಮಾಡಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಶೂಟಿಂಗ್ಗೆ ಕರೆಯಿಸಿಕೊಂಡ ಚಿತ್ರತಂಡ ಕೂಡ ಬೆಂಬಲ ನೀಡದೇ ನಟಿ ವಿರುದ್ಧವೇ ತಿರುಗಿ ಬಿತ್ತು ಎನ್ನಲಾಗಿದೆ.
ತ್ರಾಟಕ, ಪಾನಿಪುರಿ, ರಾಜೀವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಅಕ್ಷತಾ ಶ್ರೀಧರ್ ನಟಿಸಿದ್ದಾರೆ. ಈ ಘಟನೆಯಿಂದ ಭಯಗೊಂಡ ಅಕ್ಷತಾ, ಕೂಡಲೇ ಹೋಟೆಲ್ ಬಿಲ್ ಪಾವತಿಸಿ ಚಿತ್ರೀಕರಣದಿಂದ ಹಿಂದಿರುಗಿದ್ದಾರೆ. ಪೆÇಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೇ ಈಗಾಗಲೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೂ ಮೌಖಿಕ ದೂರು ದಾಖಲು ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/maxresdefault-9.gif)