ಕುಣಿಗಲ್
ತಾಲ್ಲೂಕು ಟ್ಯಾಕ್ಸಿ ಚಾಲಕರ ಸಂಘದ ವತಿಯಿಂದ ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಸಂಬಂಧ ಪಟ್ಟಣದಲ್ಲಿ ದೇಣಿಗೆ ಸಂಗ್ರಹಿಸಲಾಯಿತು.
ಬುಧವಾರದಂದು ನೇರವಾಗಿ ಕೊಡಗಿಗೆ ತೆರಳಿ ನೆರೆ ಸಂತ್ರಸ್ತರನ್ನು ಸಂಪರ್ಕಿಸಿ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಬರುವುದಾಗಿ ಸಂಘದ ಸದಸ್ಯರುಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಿರೀಶ್, ಖಜಾಂಚಿ ಮಂಜು, ಸದಸ್ಯರಾದ ರಾಜು, ರವಿ, ಶ್ರೀನಿವಾಸ ಮಕ್ಸೂದ್ ಆಟೋ ಚಾಲಕರ ಸಂಘದ ಅಧ್ಯಕ್ಷ ರುದ್ರೇಶ್ ಸೇರಿದಂತೆ ಇತರರು ಇದ್ದರು 27220 ರೂಪಾಯಿಗಳು ದೇಣಿಗೆ ಬಂದಿತ್ತು.
