ಡಾ:ಸರ್ವಪಲ್ಲಿ ರಾಧಾಕೃಷ್ಣನ್‍ರವರ 131 ನೇ ಜಯಂತ್ಯುತ್ಸವದ

ಗುಬ್ಬಿ:

           ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿವತಿಯಿಂದ ಡಾ:ಸರ್ವಪಲ್ಲಿ ರಾಧಾಕೃಷ್ಣನ್‍ರವರ 131 ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ 2018-19 ನೇ ಸಾಲಿಗೆ ಪ್ರೌಢಶಾಲಾ ವಿವಿಧ ವಿಭಾಗಗಳಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಬಿ.ಕೋಡಿಹಳ್ಳಿ ಮಠದ ಶ್ರೀಬಸವ ಬೃಂಗೇಶ್ವರಸ್ವಾಮೀಜಿ ಅಭಿನಂಧಿಸಿದರು.
        ವಿಷಯ ಶಿಕ್ಷಕರ ವಿಭಾಗದಿಂದ ಕನ್ನಡ ಬಿ.ಮಹಾಲಿಂಗಯ್ಯ ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಅಮ್ಮನಘಟ್ಟ, ಹಿಂದಿ ವಿ.ಎಸ್.ನಾಗರತ್ನಮ್ಮ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಲಕ್ಕೇನಹಳ್ಳಿ, ಸಮಾಜ ವಿಜ್ಞಾನ ಹೆಚ್.ಜಿ.ಮಂಜಪ್ಪ ಸಹಶಿಕ್ಷಕರು ಶಂಕರೇಶ್ವರ ಪ್ರೌಢಶಾಲೆ ಅತ್ತಿಕಟ್ಟೆ, ವಿಜ್ಞಾನ ನಾಗರಾಜು ಸಹಶಿಕ್ಷಕರು ಶ್ರೀನಿವಾಸಪ್ರೌಢಶಾಲೆ ಎಸ್.ಕೊಡಗೀಹಳ್ಳಿ, ಮುಖ್ಯ ಶಿಕ್ಷಕರ ವಿಭಾಗದಿಂದ ಎಂ.ಎಸ್.ನಾಗಭೂಷಣ್ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ತ್ಯಾಗಟೂರು, ವೃತ್ತಿ ಶಿಕ್ಷಣ ವಿಭಾಗದಿಂದ ಸಂಜೀವಯ್ಯ ವೃತ್ತಿ ಶಿಕ್ಷಣ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಅಮ್ಮನಘಟ್ಟ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Recent Articles

spot_img

Related Stories

Share via
Copy link
Powered by Social Snap