‘ಡಿವಿಜಿ ನೆನಪು-71’ರಲ್ಲಿ ಸ್ವಾಮಿ ಜಪಾನಂದಜಿ ಆಶಯ: ದಾನವು ಪ್ರಚಾರಕ್ಕೆ ಸೀಮಿತವಾಗದಿರಲಿ

ತುಮಕೂರು

               ದಾನ ಮಾಡುವಾಗ ಅಹಂ ಇರಬಾರದು. ಅದು ಪ್ರಚಾರಕ್ಕೂ ಸೀಮಿತವಾಗಬಾರದು. ಅದು ನೊಂದ ಜನರನ್ನು ನೇರವಾಗಿ ತಲುಪುವಂತಿರಬೇಕು. ಮಿಗಿಲಾಗಿ ನಮ್ಮ ದಾನವನ್ನು ಸ್ವೀಕರಿಸುವ ಮೂಲಕ ದಾನ ಮಾಡಲು ನಮಗೊಂದು ಅವಕಾಶ ಕೊಟ್ಟ ಆ ನೊಂದವರಿಗೆ ವಿನಮ್ರತೆಯಿಂದ ತಲೆಬಾಗಿ ನೀಡಬೇಕು. ಆಗಲೇ ಸಾರ್ಥಕತೆ ಮೂಡುವುದು ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅವರು ಹೇಳಿದರು.

                ತುಮಕೂರು ನಗರದ ಗಾಯತ್ರಿ ಸಮುದಾಯ ‘ವನದಲ್ಲಿ ಸರಸ್ ಫೌಂಡೇಷನ್ ವತಿಯಿಂದ ಮಂಗಳವಾರ ಸಂಜೆ ಏರ್ಪಟ್ಟಿದ್ದ ‘‘ಡಿವಿಜಿ ನೆನಪು’’ ಉಪನ್ಯಾಸ ಮಾಲಿಕೆಯ 71 ನೇ ತಿಂಗಳಿನ ಕಾರ್ಯಕ್ರಮದಲ್ಲಿ ‘‘ಜಗಳವೇತಕೊ ತಮ್ಮ’’ ಎಂಬ ಕಗ್ಗ ಕುರಿತು ಅವರು ಉಪನ್ಯಾಸ ಮಾಡುತ್ತಿದ್ದರು.

                ಜಲಪ್ರಳಯದಿಂದ ತತ್ತರಿಸಿರುವ ನೆರೆಯ ರಾಜ್ಯ ಕೇರಳದಲ್ಲಿ ನೊಂದ ಜನರಿಗೆ ಇನ್ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಅವರು ಸಿದ್ಧಪಡಿಸಿರುವ ಪರಿಹಾರ ಸಾಮಗ್ರಿಯನ್ನು ಆದಿವಾಸಿ ಸಂತ್ರಸ್ತರಿಗೆ ತಾವು ನೇರವಾಗಿ ವಿತರಿಸುವಾಗ ಕಂಡ ಭೀಕರ ಸನ್ನಿವೇಶಗಳನ್ನು ವಿವರಿಸಿದ ಅವರು, ನೊಂದ ಜನರು ಬಯಸುವುದು ನಾವು ಕೊಡುವ ಯಾವುದೋ ವಸ್ತುವನ್ನಷ್ಟೇ ಅಲ್ಲ; ಅವರು ಬಯಸುವುದು ನಮ್ಮ ಪ್ರೀತಿಯನ್ನು, ನಮ್ಮ ಹೃದಯವಂತಿಕೆಯನ್ನು. ಈ ನಿಟ್ಟಿನಲ್ಲಿ ‘‘ಇವ ನಮ್ಮವ-ಇವ ನಮ್ಮವ’’ ಎಂಬುದು ವಾಸ್ತವದಲ್ಲಿ ಅನುಷ್ಠಾನಕ್ಕೆ ಬರಬೇಕು. ಅದಕ್ಕಾಗಿ ಒಬ್ಬರು ಮತ್ತೊಬ್ಬರಿಗೆ ಪರಸ್ಪರ ಸ್ಪಂದಿಸುವಂತಹ ಅಂತರ್ ಮಾನವೀಯ ಸಂಬಂ‘ ಬೆಳೆಯಬೇಕು ಎಂದು ಆಶಿಸಿದರು.

                 ನಮ್ಮ ಸಣ್ಣತನಗಳಿಂದ ನಾವಿಂದು ನಮ್ಮ ಮನಸ್ಸನ್ನು ಕುಬ್ಜಗೊಳಿಸಿಕೊಂಡು ಪರಸ್ಪರ ಜಗಳವಾಡುತ್ತಿದ್ದೇವೆ. ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿಯೂ ಈ ಸಮಸ್ಯೆ ಕಾಡುತ್ತಿದೆ. ‘‘ನಾನು, ನನ್ನದು, ನನಗೊಬ್ಬನಿಗೇ, ಎಲ್ಲವೂ ನನ್ನಿಂದಲೇ, ನಾನೊಬ್ಬನೇ ಬದುಕಬೇಕು’’ ಎಂಬ ಅಹಂಕಾರವೇ ಇದಕ್ಕೆ ಮೂಲ ಕಾರಣ. ಆ ಸ್ವಾರ್ಥವನ್ನು ಬಿಟ್ಟು ವಿಸ್ತಾರವಾಗಿರುವ ಈ ಭೂಮಿಯಂತೆಯೇ ನಮ್ಮ ಮನಸ್ಸನ್ನೂ ವಿಶಾಲಗೊಳಿಸಿಕೊಂಡು ನೆಮ್ಮದಿಯಿಂದ ಬಾಳಬೇಕು. ಅದನ್ನೇ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆಂದು ಶ್ರೀ ಸ್ವಾಮಿ ಜಪಾನಂದಜಿ ತಿಳಿಸುತ್ತ, ಕೇರಳ-ಕೊಡಗಿನ ಜಲಪ್ರಳಯದಲ್ಲಿ ಶ್ರೀಮಂತ-ಬಡವ ಇಬ್ಬರೂ ಸಂತ್ರಸ್ತರಾಗಿ ಇಂದು ಒಟ್ಟಿಗೆ ಪರಿಹಾರ ಕೇಂದ್ರದಲ್ಲಿರುವುದನ್ನು ಎಲ್ಲರೂ ಸದಾ ನೆನಪಿನಲ್ಲಿಟುಕೊಂಡು ಅಹಂಕಾರವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
                 ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋ‘ನಾ ಸಂಸ್ಥೆಯ (ಇಸ್ರೋ) ಹಿರಿಯ ವಿಜ್ಞಾನಿ ಬಿ.ಕೆ. ವೆಂಕಟರಾಮು ಅವರು ಮಾತನಾಡುತ್ತ, ಡಿ.ವಿ.ಗುಂಡಪ್ಪನವರು ತಾವು ನಂಬಿದ ತತ್ತ್ವಕ್ಕೆ ಬದ್ಧರಾಗಿ ಎಂದಿಗೂ ಯಾರೊಂದಿಗೂ ರಾಜಿಯಾಗದೆ ಬದುಕಿದ ಧೀಮಂತರು. ಯಾವುದೇ ಪ್ರಶಸ್ತಿ, ಬಹುಮಾನ, ಹೆಸರು, ಕೀರ್ತಿಗಳಿಗೆ ಆಸೆಪಡದೆ ನಿಸ್ಪಹತೆಯಿಂದ ಜೀವಿಸಿದವರು. ಅಂತಹ ದಿಗ್ಗಜರು ಬರೆದಿರುವ ‘ಮಂಕುತಿಮ್ಮನ ಕಗ್ಗ’ವು ಓದುಗರಲ್ಲಿ ಜೀವನ ಸಾರ್ಥಕತೆಯ ಭಾವವನ್ನು ಮೂಡಿಸುತ್ತದೆ. ಕಗ್ಗವನ್ನು ಓದುವುದೆಂದರೆ ಅದು ದೈವ ಪೂಜೆಯಷ್ಟೇ ಲಪ್ರದ ಎನಿಸುತ್ತದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಆರ್.ಎಸ್.ಅಯ್ಯರ್ ಸ್ವಾಗತಿಸಿ, ವಂದಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link