ಹಿರಿಯೂರು :
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ನೇತೃತ್ವದಲ್ಲಿ ವಿಶ್ವಕರ್ಮ ಜಯಂತೋತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ ಈ ನಿಟ್ಟಿನಲ್ಲಿ ಸಮಾಜದ ಎಲ್ಲರೂ ವಿದ್ಯಾವಂತರಾಗಬೇಕು ಹಾಗೂ ಆ ಸಮಾಜದ ಜನ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ರಾಜಕೀಯ ಶಕ್ತಿ ಗಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣಚಾರ್ ರವರು ಮಾತನಾಡಿ, ನಗರದ ಚಿಕ್ಕಪೇಟೆಯಲ್ಲಿರುವ ಕಾಳಿಕಾಂಬದೇವಿ ಹಾಗೂ ವೀರಭದ್ರಾಸ್ವಾಮಿ ದೇವಸ್ಥಾನಗಳನ್ನು 2 ಕೋಟಿರೂಗಳ ವೆಚ್ಚದಲ್ಲಿ ನವೀಕರಣ ಮಾಡಲಿದ್ದು ಶಾಸಕರು ತಮ್ಮ ಅನುದಾನದಲ್ಲಿ ಸ್ವಲಪ ಭಾಗವನ್ನು ನೀಡಬೇಕು ಹಾಗೂ ಅರುಣ ಟೆಕ್ಸಟ್ಸೆಲ್ ಮುಂದಿನ ವೃತ್ತಕ್ಕೆ ಅಮರಶಿಲ್ಪಿ ಜಕಣಚಾರಿ ಹೆಸರಿಡಬೇಕು ಎಂಬ ಹಾಗೂ ವಿಶ್ವಕರ್ಮ ಸಮಾಜಕ್ಕೆ ನಗರಸಭೆಯಿಂದ ರುದ್ರಭೂಮಿ ಮಂಜೂರಾಗಿ ಮಾಡಿಸಿಕೊಂಡಬೇಕು ಎಂಬ ಮನವಿ ಪತ್ರವನ್ನು ಶಾಸಕರಿಗೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ತಾ||ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮುಖಂಡ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಇಮ್ರಾನ್ ಬಾನು, ಎ.ಪಿ.ಎಂ.ಸಿ ಅಧ್ಯಕ್ಷ ಈರಲೀಗೇಗೌಡ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಪಿ.ಟಿ.ದಾದಪೀರ್, ನಗರಸಭೆಆಯುಕ್ತ ರಮೇಶ್ ಸುಣಗಾರ್, ಬಿಸಿಎಂ ಅಧಿಕಾರಿ ಮಧುರೆ, ಸಮಾಜ ಕಲ್ಯಾಣಅಧಿಕಾರಿ ಕ್ರಷ್ಣಮೂರ್ತಿ, ಅಕ್ಷರದಾಸೋಹ ಅಧಿಕಾರಿ ನಾಗರಾಜಾಚಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ನಾರಾಯಣಚಾರ್, ಗೌ||ಅಧ್ಯಕ್ಷರಾದ ಪುರುಷೋತ್ತಮ್, ಕಾರ್ಯದರ್ಶಿ ಗೋಪಾಲಚಾರ್, ಉಪಾಧ್ಯಕ್ಷ ಸತ್ಯನಾರಾಯಣಚಾರ್, ಸಮಾಜದ ಮುಖಂಡರುಗಳಾದ ಬಿ.ಶೈಲಚಾರ್, ಬಿ.ಹನುಮಂತಚಾರ್, ಎಲ್.ನಾರಾಯಣಚಾರ್, ಕೃಷ್ಣಚಾರ್, ನಾಗರಾಜಚಾರ್, ಇತರರು ಉಪಸ್ಥಿತರಿದ್ದರು. ಅನಂತರ ವಿಶ್ವಕರ್ಮ ಪ್ರತಿಕೃತಿಯನ್ನು ನಗರದ ಮುಖ್ಯ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಅದ್ದೂರಿ ಮೆರವಣೆಗೆ ನಡೆಸಲಾಯಿತು.ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತೋತ್ಸವ ಸಮಾರಂಭಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ : ಪೂರ್ಣಿಮಾ ಶ್ರೀನಿವಾಸ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
