ದುರ್ಯೋಧನನ ಅಹಂಕಾರವೇ ಅವನ ಅವಸಾನಕ್ಕೆ ಕಾರಣ-ಮುರಳಿಕೃಷ್ಣಪ್ಪ

ತುಮಕೂರು:

              ಹದಿನೆಂಟು ದಿನ ನಡೆದ ಮಹಾಭಾರತದ ಯುದ್ಧದಲ್ಲಿ ಹದಿನೇಳು ದಿನ ಮುಗಿದು ಹದಿನೆಂಟನೆ ದಿನ ಆರ್ಧ ಮುಗಿದಿದೆ. ಈ ಯುದ್ಧಲ್ಲಿ ಗುರುಕುಲಾ ಪಿತಾಮಹಾ ದ್ರೋಣರು, ಕರ್ಣ ತಮ್ಮಂದಿರು ಮಿಗಿಲಾಗಿ ಮಗ ಹೀಗೆ ಎಲ್ಲಾ ಸಾವಾಗಿದ್ದಾರೆ. ಈಗ ಒಂಟಿಯಾದ ದುರ್ಯೋಧನ ತನ್ನ ಅಹಂಕಾರದಿಂದಲೇ ಅವನ ಅವಸಾನಕ್ಕೆ ಕಾರಣವಾಗುತ್ತದೆ. ಎಂದು ಜ್ಞಾನಬುತ್ತಿ ಸತ್ಸಂಗದ ಗೌರವಾಧ್ಯಕ್ಷ ಮತ್ತು ಪ್ರಾಚೀನ ಕಾವ್ಯಗಳ ಪ್ರವಚನಕಾರ ಮುರಳಿಕೃಷ್ಣಪ್ಪ ಹೇಳಿದರು.

              ಅವರು ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ ಕಾರ್ಯಕ್ರಮದಲ್ಲಿ ದುರ್ಯೋಧನನ ಅವಸಾನದಲ್ಲಿ ಶ್ರೀಕೃಷ್ಣನ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

              ಮಹಾಭಾರತದ ಯುದ್ದದಲ್ಲಿ ದುಯೋಧನ ಎಲ್ಲರನ್ನು ಕಳೆದುಕೊಂಡಿದ್ದಾನೆ. ಈ ಎಷ್ಟೇ ವೀರ ಶೂರನಾದರು ಸಹ ಸಾವಿಗೆ ಹೆದರಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಪಾಂಡವರು ಒಬ್ಬೊಬ್ಬರಾಗಿ ಮಾತನಾಡುವ ಮಾತನ್ನು ಅತ್ಯಂತ ಅದ್ಭುತವಾಗಿ ರನ್ನ ಕವಿ ತನ್ನ ಗಧಾಯುದ್ಧ ಕೃತಿಯಲ್ಲಿ ಚಿತ್ರಿಸಿದ್ದಾನೆಂದು ತಿಳಿಸಿದರು.

              ವೈಶಂಪಾಯನ ಸರೋವರದಲ್ಲಿ ಅಡಗಿರುವ ದುರ್ಯೋಧನನನ್ನು ಹೊರಗೆ ಬರುವಂತೆ ಮಾಡಲು ಅನೇಕ ರೀತಿ ವಾಧ್ಯಗಳನ್ನು ನುಡಿಸಲಾಗುತ್ತದೆ. ಸರದಿಯಂತೆ ನಕುಲ, ಸಹದೇವ ಅರ್ಜುನ, ಧರ್ಮರಾಯ ಅವರಿಗೆ ತೋಚಿದಂತೆ ಮಾತನಾಡುತ್ತಾನೆ. ಸಹದೇವ ಹೇಳುವಂತೆ ಅಪಕೀರ್ತಿ ಎಂಬ ಕೆಸರಿನಲ್ಲಿ ಅಡಗಿರುವೆ ಎಂದು ಹೇಳಿದರೆ, ಅರ್ಜುನ- ಜಲಚರ ಇರುವ ಕೊಳದಲ್ಲಿ ನಈನು ನೀರೊಳಗಿದ್ದು ಬದುಕಲು ಬಯಸಿದ್ದರೂ ಯುದ್ಧ ಭೂಮಿಯಲ್ಲಿ ಇರಬೇಕಾದ ನೀನು ನೀರೊಳಗಿದ್ದಿಯಾ ಎಂಬ ಮಾತು ಮಾರ್ಮಿಕವಾಗಿದೆ ಎಂದರು.

              ದುರ್ಯೋಧನನ ಸ್ಥಿತಿಯನ್ನು ರನ್ನ ಕವಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ. ನೀರೊಳಗಿರ್ದುಂ ಬೆಮೆರ್ತನ್ ಉರಗ ಪತಾಕಂ. ಭೀಮ ಮಾತು ಪ್ರಾರಂಭ ಮಾಡುತ್ತಿದ್ದಂತೆ ವೈಶಂಪಾಯನ ಸರೋವರ ಬಿಸಿಯಾಗುತ್ತದೆ. ನೀರು ಕುದಿದು ನೀರೊಳಗಿದ್ದ ಜಲಚರಗಳು ನೀರಿಂದ ಹಾರಿ ದೂರ ಹೋಗುತ್ತವೆ. ದುಯೋಧನ ನೀರಿನೊಳಗಡೆ ಇದ್ದರು ಸಹ ಬೆವರುತ್ತಿದ್ದ ಎಂದು ಹೇಳುತ್ತ ಉರಗಪತಾಕ ಎಂದು ದುರ್ಯೋಧನನ್ನನು ಕುರಿತು ಹೇಳಿರುವ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ ಎಂದರು.

                ದುರ್ಯೋಧನನ ತಪ್ಪನ್ನು ಹುಡುಕಿದರೆ ಬೇಕಾದಷ್ಟಿದೆ. ಅದೆಲ್ಲ ಏನೇ ಇರಲಿ ಕೃಷ್ಣನ ಪಾತ್ರ ಇಲ್ಲಿ ಮಹತ್ವದ್ದು. ಮುಳ್ಳಿನಿಂದ ಮುಳ್ಳನ್ನೇ ತೆಗೆಯಬೇಕು. ಅನ್ಯಾಯವನ್ನು ಅನ್ಯಾಯದಿಂದಲೇ ಸರಿಪಡಿಸಬೇಕು. ಮಾಯೆಯನ್ನು ಮಾಯೆಯಿಂದಲೇ ಗೆಲ್ಲಬೇಕು ಎಂಬುದು ಕೃಷ್ಣನ ನೀತಿ. ಗಧಾ ಯುದ್ದದಲ್ಲಿ ನಾಭಿಯ ಕೆಳಗೆ ಹೊಡೆಯುವಂತಿಲ್ಲ. ಇದು ಯುದ್ಧ ನೀತಿ. ದುರ್ಯೋಧನ ಭೂಮಿ ಬಿಟ್ಟು ಮೇಲೆ ಎಗರಿದಾಗ ಭೀಮ ತೊಡೆಗೆ ಹೊಡೆದು ದುರ್ಯೋಧನನನ್ನು ಸಾಯಿಸುತ್ತಾನೆ. ಇದು ಶ್ರೀಕೃಷ್ಣ ತಂತ್ರಗಾರಿಕೆ ಎಂದು ಹೇಳಿದರು.

                 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿಯ ಅಧ್ಯಕ್ಷೆ ಎಂ.ಸಿ.ಲಲಿತ ರನ್ನನ ಗದಾಯುದ್ಧದಲ್ಲಿ ವೈಶಂಪಾಯನ ಪ್ರಸಂಗವನ್ನು ಅತ್ಯಂತ ಸುಂದರವಾಗಿ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾನೆ. ಇಲ್ಲಿಯ ತಂತ್ರ, ಚಾಣಾಕ್ಷತನ, ಜಾತಿ ಬೇಧಗಳನ್ನು ಮರೆತು ಶ್ರೀಕೃಷ್ಣನ ವ್ಯಕ್ತತ್ವ ನೋಡುತ್ತಾ ಧರ್ಮಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟವನೆ ಶ್ರೀಕೃಷ್ಣ ಎಂದು ಹೇಳಿದರು.

                 ಉಪನ್ಯಾಸ ಮಾಡಿದ ಟಿ.ಮುರಳೀಕೃಷ್ಣಪ್ಪ ಅವರನ್ನು ಸನ್ಮಾನ ಮಾಡಲಾಯಿತು. ಸಂಸ್ಥಾಪಕ ಪಿ.ಶಾಂತಿಲಾಲ್ 475ನೇ ಕಾರ್ಯಕ್ರಮದ ಖರ್ಚಿನ ವಿವರ ನೀಡಿ ಉಳಿದ ಹಣದಿಂದ ಮಂಕುತಿಮ್ಮನ ಕಗ್ಗ ಕೊಂಡು ವಿತರಿಸಲಾಯಿತು. ಸುಮನಾ ಮತ್ತು ಇಂದಿರ ಪ್ರಾರ್ಥಿಸಿದರೆ, ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸಿದ್ದಗಂಗಮ್ಮ ನಿರೂಪಿಸಿದರು.

Recent Articles

spot_img

Related Stories

Share via
Copy link