ದೇವರ ಪ್ರಸಾದ ಸೇವಿಸಿ, 200 ಜನ ಅಸ್ವಸ್ಥ

ದಾವಣಗೆರೆ:

      ಕುರ್ಲಗಟ್ಟೆ ಆಂಜನೇಯ ಸ್ವಾಮಿಯ ಪ್ರಸಾದ ಸೇವಿಸಿದ್ದ 150ರಿಂದ 200ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಕುರ್ಲಗಟ್ಟೆ ಆಂಜನೇಯ ಸ್ವಾಮಿ ಪರುವು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಪ್ರಸಾದವನ್ನು ಸೇವಿಸಿದ ಕೆಲ ಹೊತ್ತಿನಲ್ಲಿಯೇ ಮಹಿಳೆಯರು, ಮಕ್ಕಳು ಸೇರಿದಂತೆ 60ಕ್ಕೂ ಹೆಚ್ಚು ಜನರಿಗೆ ಮೊದಲು ವಾಂತಿ, ಭೇದಿ ಶುರುವಾಗಿದೆ. ಇದಾದ ನಂತರ ಊಟ ಮಾಡಿದ ಎಲ್ಲರೂ ಅಂದರೆ, ಸುಮಾರು 150ರಿಂದ 20ಕ್ಕೂ ಹೆಚ್ಚು ಜನ ಹೀಗೆಯೇ ಅಸ್ವಸ್ಥರಾಗಿದ್ದು, ಹತ್ತಕ್ಕೂ ಹೆಚ್ಚು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ.

    ಅಸ್ವಸ್ಥರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ತೀವ್ರವಾಗಿ ಅಸ್ವಸ್ಥರಾಗಿರುವವರನ್ನು ದಾವಣಗೆರೆಯ   ಜಿಲ್ಲಾಸ್ಪತ್ರಗೆ  ವಾನಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಇನ್ನೂ ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಫುಲಾಂಬ, ದೇವರ ಪ್ರಸಾದ ತಿಂದು 150ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸ್ಥಳಕ್ಕೆ ನಾಲ್ಕರಿಂದ ಐದು ಆ್ಯಂಬುಲೆನ್ಸ್ ಕಳುಹಿಸಲಾಗಿದೆ. ಬಿಳಿಚೋಡಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಎರ್ಮೆಜೆನ್ಸಿ ಇದ್ದವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವಂತೆ ಆಸ್ಪತ್ರೆ ಅಧೀಕ್ಷಿಕಿ ನೀಲಾಂಬಿಕೆ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link