ನಕಲಿ ಬಂಗಾರ ನೀಡಿ ಹಣ ದೋಚಿದ್ದ ಆರೋಪಿಗಳ ಬಂಧನ

 ಹರಪನಹಳ್ಳಿ :

      ನಕಲಿ ಬಂಗಾರ ನೀಡಿ ಮೋಸ ಮಾಡಿದ ಆರೋಪಿಗಳನ್ನು ಬಂಧಿಸಿ ರೂ.12 ಲಕ್ಷ ಹಣ ಹಾಗೂ ಒಂದು ಪಲ್ಸರ್ ಮೊಟರ್ ಸೈಕಲ್‍ನ್ನು ವಶಪಡಿಕೊಳ್ಳಲಾಗಿದೆ ಎಂದು ಡಿವೈಎಸ್‍ಪಿ ನಾಗೇಶ ಐತಾಳ ತಿಳಿಸಿದ್ದಾರೆ.

      ಶಿವ್ಯನಾಯ್ಕ್ ಆಗ್ರಹಾರ ತಾಂಡ, ದುರಗಪ್ಪ ಯಲ್ಲಾಪುರದ ಕೊರಚರಹಟ್ಟಿ ಕವಾಡಿ ಮಲ್ಲಿಕಾರ್ಜುನ ಪಾವನಪುರ ಗ್ರಾಮದವರನ್ನು ಹರಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜುಲೈ 27ರಂದು ಬೆಂಗಳೂರು ನಿವಾಸಿ ಚಂದ್ರಶೆಟ್ಟಿ ಎಂಬವರಿಗೆ ಗುಂಡಗತ್ತಿ ಗ್ರಾಮದ ಬಳಿ ಮಾಚಿಹಳ್ಳಿ ರಸ್ತೆಯಲ್ಲಿ ಈ ಬಂದಿತರು ನಕಲಿ ಬಂಗಾರದ 3.50ಕೆ.ಜಿ ಬೊಟ್ಟುಗಳನ್ನು ನೀಡಿ ರೂ.12 ಲಕ್ಷ ಲಪಾಟಾಯಿಸಿದ್ದರು.

      ಹಣ ಕಳೆದು ಕೊಂಡ ಚಂದ್ರಶೆಟ್ಟಿ ಹಲುವಾಗಲು ಪೊಲೀಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪತ್ತೆಗೆ ಬಲೆ ಬೀಸಿದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ಹಣ ಹಾಗೂ ಕೃತ್ಯಕ್ಕೆ ಬಳಸಿ ಬೈಕ್‍ನ್ನು ವಶ ಪಡಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link