ತುಮಕೂರು:
ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.
ಆ ಯಮ್ಮ ಎಂತವಳು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಕೆಲವು ರಾಜಕಾರಣಿಯರು ಹಾಗೂ ಹಿರಿಯರ ಬಗ್ಗೆ ಹದ್ದು ಮೀರಿ ಮಾತನಾಡ್ತಾಳೆ. ಈಗಾಗಲೇ ಅವಳು ಹದ್ದು ಮೀರಿದ್ದಾಳೆ. ಅವಳಿಗೆ ಯಾರೂ ಬೆಲೆ ಕೊಡುವುದಿಲ್ಲ. ರಮ್ಯಾ ಹುಟ್ಟೇ ಹೇಗೆಂದು ಗೊತ್ತಿಲ್ಲ ಅಂತ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ನೆನ್ನೆ(ಬುಧವಾರ) ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಭಾಯಿ ಪಟೇಲರ 182 ಅಡಿ ಎತ್ತರದ ಏಕತಾ ಪ್ರತಿಮೆಯ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು, ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ, ನಾಚಿಕೆ ಎಲ್ಲ ಬಿಟ್ಟು ಪ್ರಧಾನಿಯವರಿಗೆ ಹಿಕ್ಕೆ ಎಂಬ ಪದ ಉಪಯೋಗಿಸಿದ್ದಾಳೆ. ನಾಚಿಕೆಯಾಗಬೇಕು. ಆ ಯಮ್ಮ ಹಿಕ್ಕೆಗೂ ಸಾಟಿಯಿಲ್ಲ. ಲಜ್ಜೆಗೆಟ್ಟು ನಡೆಯುತ್ತಾಳೆ. ಇನ್ನೂ ಆಕೆ ನಡತೆ ಸರಿಪಡಿಸಿಕೊಳ್ಳದೆ ಇದರೆ ಆಕೆಯ ಇತಿಹಾಸ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆಯ ಕರಗಂಟೆಯನ್ನೂ ಭಾರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/ramya-1.gif)