ಹರಪನಹಳ್ಳಿ
ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಮನೊಭಾವನೆ ಎಲ್ಲರಲ್ಲೂ ಮೂಡಬೇಕಾಗಿದೆ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ 22ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಭಾನುವಾರ ರಾತ್ರಿ ನಡೆದ ಸುಮಂಗಲೆಯರಿಗೆ ಉಡಿ ತುಂಬುವ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.
ರೈತರ ಬದುಕು ಉತ್ತಮ ಗೊಳ್ಳಬೇಕಾದರೆ ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂದು ಅವರು ನುಡಿದರು. ನಮ್ಮ ದೇಶದ ಸಂಸ್ಕತಿ ಶಕ್ತಿ ಸಂಸ್ಕತಿ, ಆದ್ದರಿಂದ ಹೆಣ್ಣಿಗೆ ಗೌರವ, ಪೂಜ್ಯ ಸ್ಥಾನವಿದೆ ಎಂದ ಅವರು ನವರಾತ್ರಿ ಆರಾಧನೆಯಿಂದ ಹೆಣ್ಣು ಮಕ್ಕಳು ಸಂಸ್ಕಾರವಂತರಾಗಬೇಕು, ಗಂಡು ಮಕ್ಕಳು ದುಶ್ಚಟ ಬಿಡಬೇಕು ಎಂದು ಪಂಚಪೀಠಗಳೊಂದಾದ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಹಬ್ಬ ಹರಿದಿನಗಳಿಗೆ ನಮ್ಮಲ್ಲಿ ವಿಶೇಷ ಮಹತ್ವವಿದೆ, ಹೆಣ್ಣು ಮಕ್ಕಳ ಪ್ರತೀಕ ಹಬ್ಬಗಳು, ಒಂದು ವರ್ಷಕ್ಕೆ 36 ಹಬ್ಬಗಳಿದ್ದು, ಅದರಲ್ಲಿ 1ನ್ನು ಬಿಟ್ಟರೆ, ಉಳಿದವು ಹೆಣ್ಣು ಮಕ್ಕಳ ಹಬ್ಬಗಳು ಎಂದು ಅವರು ಹೇಳಿದರು.
ಪುರಾಣ ಪ್ರವಚನ ಕಾರ ಗಂಗಾಧರ ಸ್ವಾಮಿ ಕಂಬಾಳಿ ಮಠ ಅವರು ವೀರಶೈವ ಧರ್ಮದ ಬಗ್ಗೆ ಸಂಶೋಧನೆ ಮಾಡುವವರಿಗೆ 1 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪನೆ ಮಾಡುವ ಉಜ್ಜಯಿ ನಿ ಜಗದ್ಗುರುಗಳು ಹೊಂದಿದ್ದಾರೆ ಎಂದು ಹೇಳಿದರು.
100ಕ್ಕೂ ಹೆಚ್ಚು ಸುಮಂಗೆಲೆಯರಿಗೆ ಉಜ್ಜಯಿನಿ ಶ್ರೀಗಳು ಈ ಸಂದರ್ಭದಲ್ಲಿ ಉಡಿ ತುಂಬಿದರು. ಈ ಸಂದರ್ಭದಲ್ಲಿ ಕೆ.ಎಂ.ಮಂಜುನಾಥ, ಎಂ.ಪಿ.ಎಂ. ಶಾಂತವೀರಯ್ಯ, ಎಂ.ಕೊಟ್ರೇಶಪ್ಪ,, ರೇವಣಸಿದ್ದಸ್ವಾಮಿ, ಹುಳ್ಳಿ ಕೊಟ್ರಪ್ಪ, ದಿದ್ಗಿ ಶಿವಮೂರ್ತೆಪ್ಪ, ಸಾವಳಗಿ ನಾಗಣ್ಣ, ಶಿವಮೂರ್ತೆಯ್ಯ, ಕಲ್ಲಹಳ್ಳಿ ಗುರುಸಿದ್ದಯ್ಯ, ಸಾವಳಗಿ ಶಿವಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
