ಬೆಂಗಳೂರು:
ತಮ್ಮ ಪುತ್ರನ ವಿವಾಹಕ್ಕೆ ಸಂಬಂಧಿಸಿದಂತೆ ಸಂಬಂಧ ಬೆಳೆಸಲು ಹೈದರಾಬಾದ್ನ ಉದ್ಯಮಿಯೋರ್ವರ ಮನೆಗೆ ಇಂದು ಹೆಚ್ಡಿಕೆ ದಂಪತಿ ಭೇಟಿ ನೀಡಿದ್ದರು.
ಹೈದರಾಬಾದ್ನ ಫ್ರಾಫಿಟ್ಶೂ ಕಂಪನಿ ಮಾಲೀಕ ಕೋಟೇಶ್ವರರಾವ್ ಅವರ ಪುತ್ರಿ(ಸಹಜ)ಯೊಂದಿಗೆ ನಿಖಿಲ್ ಮದುವೆ ನಿಶ್ಚಯ ಮಾಡುವ ಸಲುವಾಗಿ ಮಾತುಕತೆ ನಡೆಸಲು ಕೋಟೇಶ್ವರರಾವ್ ಅವರ ಮನೆಗೆ ಭೇಟಿ ನೀಡಿದ್ದರು. ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಈ ಹುಡುಗಿ ಸಹಜರೊಂದಿಗೆ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ.
ಇದೇ ವೇಳೆ ಕೃಷ್ಣನಗರ ಜಿಲ್ಲೆಯ ವಿಜಯವಾಡ ನಗರದ ಕನಕದುರ್ಗಮ್ಮ ದೇವಾಲಯಕ್ಕೆ ಹೆಚ್ಡಿಕೆ ದಂಪತಿ ಮತ್ತು ಕೋಟೇಶ್ವರರಾವ್ ದಂಪತಿಗಳು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮದುವೆ ವಿಚಾರವೆನ್ನುವುದು ವೈಯಕ್ತಿಕವಾದುದು, ಒಂದುವೇಳೆ ಹುಡುಗಿ ಒಪ್ಪಿಗೆಯಾದರೆ, ಆ ಹುಡುಗಿಯೊಂದಿಗೆ ಮದುವೆ ಮಾಡಿಸೋಣ ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಮದುವೆಗೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ