ತುಮಕೂರು ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರಾದ ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದ ಶ್ರೀ. ಸಿ.ಜಿ.ಸಿ.ಆರಾಧ್ಯರವರು (78 ವರ್ಷ) ತೀವ್ರ ಅನಾರೋಗ್ಯ ದಿಂದ ಶುಕ್ರವಾರ ರಾತ್ರಿ ವಿಧಿವಶರಾದರು.
ಮೃತರ ಅಂತ್ಯಕ್ರಿಯೆ ಇಂದು (ಶನಿವಾರ) ಮಧ್ಯಾಹ್ನ ಸ್ವಗ್ರಾಮದಲ್ಲಿ ದೊಡ್ಡಗುಣಿ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿ ಯಲ್ಲಿ ನೆರವೇರಿತು.
ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥ ದೇವಾಲಯದ ಆಡಳಿತ ಮಂಡಳಿಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಸುದೀರ್ಘ ಕಾಲದಿಂದ ಅನೇಕ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಶ್ರೀಯುತರು ಪತ್ನಿ,ಪುತ್ರ ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ.
![](https://prajapragathi.com/wp-content/uploads/2018/08/1.jpeg)