ದಾವಣಗೆರೆ:
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಲ ಪ್ರಳಯ ಸಂಭವಿಸಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಪಾಲಾಗಿರುವ ಕೊಡಗಿನ ನೆರೆ ಸಂತ್ರಸ್ಥರಿಗೆ ನೆರವು ನೀಡುವ ಉದ್ದೇಶದಿಂದ ದಾವಣಗೆರೆ ಜಿಲ್ಲಾ ಕುರುಬರ ಯುವ ಘಟಕದ ಪದಾಧಿಕಾರಿಗಳು ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಿದ್ದಾರೆ.
ನಗರದ ಪಿಬಿ ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕೇಂದ್ರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಇ.ಆನಂದ್ ಕೊಡುಗಿಗೆ ಪ್ರವಾಸ ಬೆಳೆಸಿದ ಜಿಲ್ಲಾ ಕುರುಬರ ಯುವ ಘಟಕದ ಪದಾಧಿಕಾರಿಗಳ ತಂಡದ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಯುವ ಘಟಕದ ಎಸ್.ಟಿ.ರಾಜೇಶ್ ಹಾಲೇಕಲ್ಲು, ಬಿ.ಲಿಂಗರಾಜ್, ಇಟ್ಟಿಗುಡಿ ಮಂಜುನಾಥ್, ಕೊಕ್ಕನೂರು ಮಂಜುನಾಥ್, ಬೀರಪ್ಪ ಅವರ ನೇತೃತ್ವದ ತಂಡವು 400 ಹೊದಿಕೆ, 300 ಪುರುಷರ ಒಳ ಉಡುಪುಗಳು, 100 ಸ್ಕೂಲ್ ಬ್ಯಾಗ್, 100 ಅಂಗಿ, ಹಾಲಿನ ಪುಡಿಯ ಪೊಟ್ಟಣ, ಬಿಸ್ಕೇಟ್ ಪೊಟ್ಟಣಗಳನ್ನು ತಗೆದುಕೊಂಡು ಬುಧವಾರ ಸಂಜೆ ಕೊಡಗಿಗೆ ಪ್ರಯಾಣ ಬೆಳೆಸಿತು.
ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಟಿ.ಅರವಿಂದ್ ಹಾಲೇಕಲ್ಲು, ಅಧ್ಯಕ್ಷ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ್, ಬಾತಿ ಜಯರಾಜ್, ಪುಟ್ಟಪ್ಪ, ಎಸ್.ಎಸ್.ಗಿರೀಶ್, ಹಾಲೇಶ್, ಲೋಕಿಕೆರೆ ಪ್ರದೀಪ್, ಅಡಾಣಿ ಸಿದ್ದಪ್ಪ, ಇಟ್ಟಿಗುಡಿ ಮಂಜುನಾಥ್, ಡಿ.ಜಿ.ಪ್ರಕಾಶ್, ಬೀರಪ್ಪ, ಕನಕ ಡಿಜಿಟಲ್ ಚಂದ್ರಶೇಖರ್, ಲಿಂಗರಾಜ.ಎಂ, ಗಂಗಾಧರ್ ನಿಟ್ಟುವಳ್ಳಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/08/kanaka-yuva-ghataka.gif)