ನೆಹರೂ ಸರ್ಕಲ್‍ನಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನನಿಸಿದ ಕುಟುಂಬ

ಚಳ್ಳಕೆರೆ

    ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ನಿವೇಶನಗಳ ಹಕ್ಕುದಾರಿಕೆ ಪಡೆಯಲು ಹೋರಾಟ ನೆಡೆಸುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇಂತಹ ಸಂದರ್ಭದಲ್ಲಿ ತನ್ನ ತಂದೆ ಹೆಸರಿಗೆ ಇದ್ದ ಜಾಗದಲ್ಲಿ ವಾಸಸಿಲು ಅವಕಾಶ ಕೊಡದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದ ವಿರುದ್ದ ರೋಸಿದ ಕುಟುಂಬ ಹಾಡುಹಗಲೇ ಸೀಮೆ ಸುರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸೋಮವಾರ ಮಧ್ಯಾಹ್ನ 11.30ರ ಸಮಯದಲ್ಲಿ ಇಲ್ಲಿನ ನೆಹರೂ ವೃತ್ತದಲ್ಲಿ ನಡೆದಿದೆ.

     ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮ ಸಮುದ್ರ ಗ್ರಾಮದ ಮಂಜುನಾಥ(45), ಪತ್ನಿ ಶಿಲ್ಪ(30), ಮಕ್ಕಳಾದ ಹೇಮಂತ(11), ಭೂಲಕ್ಷ್ಮಿ(9) ಮತ್ತು ಚೇತನ(5) ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬವಾಗಿದ್ದು, ನನ್ನ ಈ ಕಠಿಣ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಕಾರಣವೆಂದು ಆರೋಪಿಸಿದ್ದಾನೆ.

      ಸೋಮವಾರ ಮಂಜುನಾಥನ ತಂದೆ ನಿಂಗಪ್ಪನಿಗೆ ನೀಡಿದ ಹಕ್ಕು ಪತ್ರದಂತೆ ಮನೆ ನಿವೇಶನ ಅಳತೆ ಮಾಡಲು ಪಿಡಿಒರವರು ಪೊಲೀಸರೊಂದಿಗೆ ಸದರಿ ಜಾಗಕ್ಕೆ ತೆರಳಿದ್ದರು. ಆಗ ಅದೇ ಗ್ರಾಮದ ಜಗದೀಶ್, ರಾಘವೇಂದ್ರ, ಶೇಖರ್ ಮುಂತಾದವರು ಆಕ್ಷೇಪ ವ್ಯಕ್ತ ಪಡಿಸಿ ನಾವು ಕಳೆದಾರು ವರ್ಷಗಳಿಂದ ಇಲ್ಲಿದ್ದ ಸದರಿ ಜಾಗ ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಆದ್ದರಿಂದ ಈ ಜಾಗವನ್ನು ಯಾವುದೇ ಕಾರಣಕ್ಕೂ ನಿಂಗಪ್ಪನ ಮಗ ಮಂಜುನಾಥನಿಗೆ ನೀಡಬಾರದು.

      ಈ ಜಾಗದಲ್ಲಿರುವ ತಿಪ್ಪೆಗುಂಡಿಯನ್ನು ತೆರವುಗೊಳಿಸ ಬಾರದು ಎಂದು ನಿರ್ಬಂಧ ಹಾಕಿದರಲ್ಲದೆ ಮಂಜುನಾಥ ಮತ್ತು ಆತನ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಮುಂದಾದರು ಎನ್ನಲಾಗಿದೆ. ರಕ್ಷಣೆಗೆ ತೆರಳಿದ್ದ ಪೊಲೀಸರು ಸಹ ಎರಡೂ ಕಡೆ ಸಮದಾನ ಪಡಿಸಿ ಠಾಣೆಗೆ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

        ಇದರಿಂದ ರೋಸಿ ಹೋದ ಮಂಜುನಾಥ 1983ರಲ್ಲಿ ದುಗ್ಗಾವರ ಗ್ರೂಫ್ ಪಂಚಾಯಿತಿ ವತಿಯಿಂದ ದಿನಾಂಕ 18-5-1983ರಲ್ಲಿ ನನ್ನ ತಂದೆ ನಿಂಗಪ್ಪ ಹೆಸರಿಗೆ ನಿವೇಶನ ನೀಡಿದ್ದು, ಕಾರಣಾಂತರಗಳಿಂದ ನಮಗೆ ನೀಡಿದ ನಿವೇಶನದ ಸಂಖ್ಯೆ 297ರಲ್ಲಿ ವಾಸ ಮಾಡಲು ಸಾಧ್ಯವಾಗದೇ ಹೊರಗಿದ್ದು, ಕಳೆದ ಡಿಸೆಂಬರ್ 2018ರಲ್ಲಿ ನಾನು ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿ ಇ-ಸ್ವತ್ತು ಅನ್ವಯ ನನ್ನ ತಂದೆ ಹೆಸರಿಗೆ ಇರುವ ನಿವೇಶನ ಖಾತೆ ವಿವರವನ್ನು ಪಡೆದುಕೊಂಡು ನನಗೆ ಹಕ್ಕು ಪತ್ರ ನೀಡುವಂತೆ ಮತ್ತು ನಿವೇಶನ ಅಳತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಅರ್ಜಿ ನೀಡಿದ್ದೆ.

        ಇದೇ ಸಂದರ್ಭದಲ್ಲಿ 31 ಮೇ 2019ರಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿ ನನ್ನ ನಿವೇಶನ ಪಡೆಯಲು ಅಡ್ಡಿ ಪಡಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನನ್ನ ಪತ್ನಿ ಎಚ್.ಶಿಲ್ಪ ದೂರು ನೀಡಿದ್ದರು. ಆದರೆ, ಇದ್ಯಾವುದನ್ನೂ ಲೆಕ್ಕಿಸದ ಆರೋಪಿಗಳು ನನ್ನ ಮೇಲೆ ಹಲ್ಲೆ ನಡೆಸಿದರಲ್ಲದೆ ಪ್ರಾಣ ತೆಗೆಯುವ ಬೆದರಿಕೆಯನ್ನು ಹಾಕಿರುತ್ತಾರೆ.

     ಇದರಿಂದ ನನಗೆ ನ್ಯಾಯುತವಾಗಿ ದೊರೆಯಬೇಕಾದ ನಿವೇಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ ಎನ್ನುತ್ತಾನೆ. ಮಂಜುನಾಥ ಮತ್ತು ಕುಟುಂಬ ವರ್ಗ ನಿವೇಶನ ದೊರೆಯದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿಯುತ್ತಲೇ ಗ್ರಾಮದ ನೂರಾರು ಜನರು ಆಗಮಿಸಿ ನೊಂದ ಕುಟುಂಬವನ್ನು ಸಂತೈಸಿದರು. ನೆಹರೂ ವೃತ್ತದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಐವರನ್ನು ಕಂಡ ಸಾರ್ವಜನಿಕರು ಹಾಗೂ ಪೊಲೀಸರು ನ್ಯಾಯದೊರಕಿಸಿಕೊಡುವ ಭರವಸೆ ನೀಡಿ ಪೊಲೀಸ್ ಠಾಣೆಗೆ ಕರೆಸಿ ಸೀಮೆ ಎಣ್ಣೆ ಸುರಿದುಕೊಂಡ ಐವರನ್ನು ವಿಚಾರಣೆ ನಡೆಸುವ ಭರವಸೆ ನೀಡಿ ಮೈಮೇಲಿದ್ದ ಸೀಮೆ ಎಣ್ಣೆ ಬಟ್ಟೆ ತೆಗೆದು ಹಾಕಲಾಯಿತು. ಠಾಣೆಯಲ್ಲಿದ್ದ ನಲ್ಲಿ ನೀರಿನಿಂದ ಐವರು ಸೀಮೆ ವಾಸನೆಯಿಂದ ಮುಕ್ತವಾದರು.

       ಪಿಎಸ್‍ಐ ಕೆ.ಸತೀಶ್ ನಾಯ್ಕ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎನ್.ಮಂಜುನಾಥ ಮತ್ತು ಕುಟುಂಬ ವರ್ಗದ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಅಡ್ಡಿ ಪಡಿಸಿದ ಗ್ರಾಮದ ನಾಲ್ವರನ್ನು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಡುಹಗಲೇ ನನ್ನ ಕುಟುಂಬಕ್ಕೆ ಸೂಕ್ತ ನ್ಯಾಯಸಿಗಲಿಲ್ಲವೆಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮೊಟ್ಟ ಮೊದಲ ಘಟನೆ ಇದಾಗಿದ್ದು, ಈಗ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಸೌಹಾರ್ಥಿತವಾಗಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿಲ್ಲಿ ಕಾಯೋನ್ಮುಖರಾಗಿದ್ಧಾರೆ.

     ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಷ್ಟನೆ :- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ 1983ರಲ್ಲಿ ಇವರ ತಂದೆ ಹೆಸರಿಗೆ ನಿವೇಶನ ನೀಡಿದ್ದರೂ ಇದುವರೆಗೂ ಅವರ ಕುಟುಂಬದವರ ಅಲ್ಲಿ ವಾಸಿಸದೇ ದೂರ ಉಳಿದಿದ್ದು, ಖಾತೆ ಮಾಡಿಸಿಕೊಂಡಿರುವುದಿಲ್ಲ. ಸ್ವಾಧೀನವೂ ಸಹ ಇವರಿಗೆ ಇಲ್ಲ. ದಾಖಲೆಗಳ ಪ್ರಕಾರ ಸದರಿ ಜಾಗ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ್ದಾಗಿದ್ದು, ಹಲವಾರು ಕಡೆ ತಿಪ್ಪೆಗುಂಡಿಗಳಿರುತ್ತವೆ.

     ಗ್ರಾಮ ಪಂಚಾಯಿತಿಯ ಯಾವ ಸದಸ್ಯರೂ ಸಹ ಈ ಬಗ್ಗೆ ಸೂಕ್ತ ಸ್ವಷ್ಟ ಮಾಹಿತಿ ನೀಡಲಿಲ್ಲ. ಅದ್ದರಿಂದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಮಂಜುನಾಥ ಆರೋಪಿಸುವುದರಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದರು. ಗ್ರಾಮ ಪಂಚಾಯಿತಿ ಪಿಡಿಒ ಮಾತನ್ನು ವಿರೋಧಿಸುವ ಮಂಜುನಾಥ ಕಳೆದ ಆರು ತಿಂಗಳ ಹಿಂದೆಯೇ ಅರ್ಜಿ ನೀಡಿ, ಖಾತೆ ನೀಡುವಂತೆ ಮನವಿ ಮಾಡಿದ್ದೆ. ಗ್ರಾಮ ಪಂಚಾಯಿತಿ ಹಾಲಿ ಸದಸ್ಯರು ಕೂಡ ನನ್ನ ಅರ್ಜಿಗೆ ಸಹಿ ಹಾಕಿದ್ಧಾರೆ. ಆದರೆ, ಅಭಿವೃದ್ಧಿ ಅಧಿಕಾರಿಗಳ ಮಾತ್ರ ಎಲ್ಲವನ್ನೂ ವಿರೋಧಿಸಿ ನನಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link