ನೇಣು ಹಾಕಿಕೊಂಡು ಅಪರಿಚಿತ ವ್ಯಕ್ತಿ ಸಾವು

ತುಮಕೂರು:

      ದೇವರಾಯನದುರ್ಗ ಕಾಡಿನ ಕೊರಟಗೆರೆ-ಊರ್ಡಿಗೆರೆ ರಸ್ತೆಗೆ ಸೇರುವ ದೇವರಾಯನದುರ್ಗ ಬೆಟ್ಟದ ರಸ್ತೆಯ ನಾಯಕನಕೆರೆ ಬಳಿಯ ಯಕ್ಕದಕಟ್ಟೆಯ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

       ಸುಮಾರು 25 ರಿಂದ 30 ವರ್ಷದ ಈತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿಲ್ಲ. ಗುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಈತನ ಎಡಗೈನಲ್ಲಿ ಚಲನಚಿತ್ರ ನಟ ಉಪೇಂದ್ರನ ಚಿತ್ರ ಮತ್ತು ಡಿಸೈನ್ ರೀತಿ ತ್ರಿಶೂಲದ ಹಚ್ಚೆ ಇರುತ್ತದೆ. ಬಲಗೈನಲ್ಲಿ ನಂದಿ ಚಿತ್ರ ಮತ್ತು ಡಿಸೈನ್ ರೀತಿಯ ಶಂಖು ರೀತಿಯ ಹಚ್ಚೆಗಳಿರುತ್ತವೆ. ಮೃತ ವ್ಯಕ್ತಿ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕ್ಯಾತ್ಸಂದ್ರ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link