ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಕಲಬೆರಕೆ

ತುಮಕೂರು:

      ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಕಲಬೆರಕೆ ಮಾಡಿರುವ ಬಗ್ಗೆ ವರದಿಯಾಗಿದೆ.ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಗೆ ಸೇರಿದ ಬೂದಿಬೆಟ್ಟ ಪಂಚಾಯತಿ ವ್ಯಾಪ್ತಿಗೆ ಬರುವ ಯರಮ್ಮನಹಳ್ಳಿ ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಮಿಕ್ಸ್ ಮಾಡಿರುವುದು ಬೆಳಕಿಗೆ ಬಂದಿದೆ.

    ಯರಮ್ಮನಹಳ್ಳಿ ಗ್ರಾಮದ ಉಮದೇವಿ ಎಂಬುವರ ಮನೆಯಲ್ಲಿ ತಂದಿದ್ದ ಪಡಿತರ ಅಕ್ಕಿಯನ್ನು ಸ್ವಚ್ಛಗೊಳಿಸುವಾಗ ಅಕ್ಕಿಯಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳು ಬೆರಕೆಯಾಗಿವೆ. ಆಶ್ಚರ್ಯಗೊಂಡ ಗ್ರಾಮಸ್ಥರು ಬೇರೆಯವರ ಮನೆಗೆ ಹೋಗಿ ಪಡಿತರ ಅಕ್ಕಿಯನ್ನು ಪರೀಕ್ಷಿಸಿದಾಗ ಅದರಲ್ಲೂ ಇದೇ ರೀತಿಯ ರಸಗೊಬ್ಬರ ಮಿಕ್ಸ್ ಮಾಡಿರುವುದು ಪತ್ತೆಯಾಯಿತು.

    ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದ್ದು, ತಹಸೀಲ್ದಾರ್ ಅವರ ಆದೇಶದ ಮೇರೆಗೆ ಪಡಿತರ ವಿತರಣೆಯನ್ನು ನಿಲ್ಲಿಸಲಾಗಿದ್ದು, ಆಹಾರ ಪರಿವೀಕ್ಷಕ ಮಂಜುನಾಥ್ ಮತ್ತು ವಿತರಕ ರಾಮಚಂದ್ರರೆಡ್ಡಿ ಅವರುಗಳು ಪ್ರತಿ ಮನೆಗೂ ಭೇಟಿ ನೀಡಿ ಪಡಿತರ ಪರೀಕ್ಷಿಸಿದಾಗ ಎಲ್ಲರದಲ್ಲೂ ರಸಗೊಬ್ಬರ ಮಿಶ್ರಣವಾಗಿರುವುದು ಖಾತ್ರಿಯಾಯಿತು. ನಂತರ ದಾಸ್ತಾನುಗಳ ಮೂಟೆಗಳನ್ನು ಪರೀಕ್ಷಿಸಿದಾಗ ಅದರಲ್ಲೂ ರಸಗೊಬ್ಬರ ಇರುವುದು ಪತ್ತೆಯಾಯಿತು. ಇದು ಯಾರ ಕೈವಾಡ ಎಂಬುದು ಮಾತ್ರ ಇನ್ನೂ ನಿಗೂಢ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link