ತುಮಕೂರು
ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಅಲ್ಲಿನ ಎಕ್ಸಿಕ್ಯುಟೀವ್ ಇಂಜಿನಿಯರ್ ಬೆಂಗಳೂರ್ಕರ್ ಅವರು ಬು‘ವಾರ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಗಳ ಗುಣಮಟ್ಟ ಕುರಿತು ಪಾಲಿಕೆಯ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿದರು.
ಪಾಲಿಕೆಯ ಇಂಜಿನಿಯರಿಂಗ್ ವಿಭಾಗ, ನೀರು ಪೂರೈಕೆ ವಿಭಾಗ, ವಿದ್ಯುತ್ ವಿಭಾಗ, ಆರೋಗ್ಯ ವಿಭಾಗ ಮತ್ತಿತರ ವಿಭಾಗಗಳ ಇಂಜಿನಿಯರ್ಗಳು ಮತ್ತು ಅಧಿಕಾರಿಗಳು ಈ ಪರಾಮರ್ಶೆ ಸಭೆಯಲ್ಲಿ ಪಾಲ್ಗೊಂಡು, ತಮ್ಮ ವ್ಯಾಪ್ತಿಯ ಕಡತಗಳನ್ನು ಹಾಜುರುಪಡಿಸಿ, ವಿವಿ‘ ಮಾಹಿತಿಗಳನ್ನು ನೀಡಿದರು.
ಇಲ್ಲಿ ನಡೆಸಿರುವ ಪರಾಮರ್ಶೆ ಆ‘ರಿಸಿ ಸದರಿ ಅಧಿಕಾರಿಯು ಪೌರಾಡಳಿತ ನಿರ್ದೇಶನಾಲಯಕ್ಕೆ ಗುಣಮಟ್ಟ ಕುರಿತು ವರದಿಯನ್ನು ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.