ಬ್ಯಾಡಗಿ
ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಅಂತರಾಜ್ಯ ಓಡಾಡಕ್ಕೆ ಕಡಿವಾಣ ಹಾಕಬೇಕಾ ಗುತ್ತದೆ, ಹೀಗಾಗಿ ಪರಪ್ರಾಂತದ ಲಾರಿಗಳ ಆಗಮನ ಹಾಗೂ ನಿರ್ಗಮನ ಕೂಡಲೇ ಸ್ಥಗಿತಗೊಳಿಸುವಂತೆ ತಹಶೀಲ್ಧಾರ ಶರಣಮ್ಮ ಕಾರಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅದೃಷ್ಟವಶಾತ್ ಬ್ಯಾಡಗಿ ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಆದರೆ ರೆಡ್ಜೋನ್, ಹಾಟ್ ಸ್ಪಾಟ್ ಇನ್ನಿತರ ಹೈಅಲರ್ಟ ಇರುವಂತಹ ಏರಿಯಾಗಳಿಂದ ಚಾಲಕರು ಬರುತ್ತಿದ್ದಾರೆ, ಅವರಲ್ಲಿ ಯಾರಾದರೂ ಸೋಂಕಿತ ರಿದ್ದರೇ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ, ಹೀಗಾಗಿ ಪರಪ್ರಾಂತದ ವಾಹನಗಳನ್ನು ಬ್ಯಾಡಗಿ ಪಟ್ಟಣದೊಳಗೆ ಬಿಡಲು ಸಾಧ್ಯ ವಾಗುವುದಿಲ್ಲ, ಸ್ಥಳೀಯ ಚಾಲಕರ ಗಾಡಿಗಳು ಸಹ ಬೇರೆ ರಾಜ್ಯಗಳಿಗೆ ಹೋಗಿಬಂದಲ್ಲಿ ಚಾಲಕರಿಗೆ ಕ್ವಾರಂಟೈನ್ ಕಡ್ಡಾಯ ವಾಗಲಿದ್ದು ಯಾವುದೇ ಕಾರಣಕ್ಕೂ ಸರಕು ಸಾಗಾಟ ನಿಲ್ಲಿಸುವಂತೆ ಸಭೆಯಲ್ಲಿ ಆದೇಶಿಸಿದರು..
ಲಾಕ್ಡೌನ್ ಇನ್ನಷ್ಟು ಬಿಗಿಗೊಳಿಸಿ:ಪಟ್ಟಣದಲ್ಲಿ ದಿನಸಿ ಅಂಗಡಿಗಳನ್ನು ಸೋಶಿಯಲ್ ಡಿಸ್ಟನ್ಸ್ ಮೇಲೆ ನಡೆಸಬೇಕಷ್ಟೇ ಆದರೆ ಬೆಳಿಗ್ಗೆ ಸಮಯದಲ್ಲಿ ಸ್ಟೇಷನರಿ, ಹಾರ್ಡವೇರ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ ಅವುಗಳನ್ನು ಕೂಡಲೇ ಸ್ಥಗಿತಗೊಳಿ ಸುವಂತೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಅವರಿಗೆ ಸೂಚನೆ ನೀಡಿದರು.
ದ್ವಿಚಕ್ರ ವಾಹನ ಓಡಾಟಕ್ಕೆ ಕಡಿವಾಣ:ಸಿಪಿಐ ಭಾಗ್ಯವತಿ ಮಾತನಾಡಿ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದೆ, ನಾಳೆಯಿಂದಲೇ ಕಾರಣವಿಲ್ಲದೇ ಅನಗತ್ಯವಾಗಿ ಓಡಾಡುವಂತಹ ವಾಹನಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದುಕೊಳ್ಳಲಿದೆ, ಅಲ್ಲದೇ ಪರಪ್ರಾಂತಗಳಿಂದ ಬರುವಂತಹ ವಾಹನಗಳ ಓಡಾಟವನ್ನು ನಿಲ್ಲಿಸುವಂತೆ ಲಾರಿಗಳ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಲಾರಿ ಏಜೆಂಟರ್ ಸಂಘಗಳಿಗೆ ನಿರ್ದೇಶನ ನೀಡಿದರು.
ಕೋಲ್ಡ್ ಸ್ಟೋರೇಜ್ಗೆ ನಿರ್ಭಂದವಿರಲಿ:ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪ್ರಭು ದೊಡ್ಮನಿ ಮಾತನಾಡಿ, ಇದೊಂದು ಅಂತರಾಷ್ಟ್ರೀಯ ಮಾರುಕಟ್ಟೆ ವರ್ತಕರ ಸಹಕಾರವಿಲ್ಲದೇ ಏನೊಂದು ಮಾಡಲು ಸಾಧ್ಯವಿಲ್ಲ, ಕೂಡಲೇ ಎಲ್ಲಾ ಕೋಲ್ಡ್ ಸ್ಟೋರೇಜ್ ಹಾಗೂ ವರ್ತಕರ ಸಭೆಯನ್ನು ಕರೆದು ಲಾಕ್ಡೌನ್ ವಿಶೇಷ ಕ್ರಮಗಳನ್ನು ಸೂಚನೆ ನೀಡಬೇಕು ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವೆಂದರು.
ಸಭೆಯಲ್ಲಿ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ವೈದ್ಯಾಧಿಕಾರಿ ಡಾ.ಪುಟ್ಟರಾಜು, ತಾಲೂಕಾ ಆರೋಗ್ಯಾಧಿಕಾರಿ ಡಾ.ಬಿ.ಆರ್. ಲಮಾಣಿ, ಎಪಿಎಂಸಿಯ ಫಕ್ಕೀರೇಶ್ ದೊಡ್ಮನಿ, ವಿಜಯ ಪತ್ತಾರ, ಗುಂಡಪ್ಪ ಸೇರಿದಂತೆ ಲಾರಿ ಮಾಲೀಕರ ಸಂಘ ಮತು ಲಾರಿ ಏಜೆಂಟರ ಸಂಘಗಳ ಪದಾಧಿಕಾರಿಗ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
