ಬೆಂಗಳೂರು:
ಕೇರಳ, ಕೊಡಗು ಭಾಗದಲ್ಲಿ ಪ್ರವಾಹವನ್ನು ಕಂಡಾಗಿದೆ ಇದೀಗ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಭೀಕರ ಪ್ರವಾಹ ಎದುರಾಗುವ ಎಲ್ಲಾ ಸಾಧ್ಯಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳ, ಕೊಡಗು ಬಳಿಕ ಆಂಧ್ರದಲ್ಲಿ ಮಳೆ ಆರಂಭವಾಗಿದ್ದು, ಈಗಾಗಲೇ 100 ಮಿಲಿಮೀಟರ್ಗೂ ಅಧಿಕ ಮಳೆಯಾಗಿದೆ. ನೈಋತ್ಯ ಮುಂಗಾರು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಹೆಚ್ಚಾಗಿದೆ, ರಾಯಲ್ಸೀಮಾ ಪ್ರದೇಶದಲ್ಲಿ ಅಷ್ಟಾಗಿ ಪ್ರಭಾವ ಗೋಚರಿಸುತ್ತಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಹಾಗೂ ಮಂಗಳವಾರ ಖಮ್ಮಮ್, ಭೂಪಲ್ಪಲ್ಲಿ, ಸೂರ್ಯಪೇಟೆ, ಅಡಿಲಾಬಾದ್, ನಿಜಾಮಾಬಾದ್, ನಲಗೊಂಡ, ಕಾಮರೆಡ್ಡಿ ಹಾಗೂ ಮೇದಕ್ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಒಡಿಶಾ ಹಾಗೂ ವಿದರ್ಭಾದಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ