ಬಕ್ರಿದ್ ಹಬ್ಬದಂದು ಸಂತ್ರಸ್ಥರಿಗೆ ನಿಧಿ ಸಂಗ್ರಹ

ಚಿತ್ರದುರ್ಗ:

   ತ್ಯಾಗ ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬದ ಅಂಗವಾಗಿ ಬುಧವಾರ ಚಂದ್ರವಳ್ಳಿಯ ಪೊಲೀಸ್ ಫೈರಿಂಗ್ ಫೀಲ್ಡ್‍ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್‍ರವರ ನೇತೃತ್ವದಲ್ಲಿ ಕೊಡಗು ಹಾಗೂ ಕೇರಳದಲ್ಲಿ ಮಳೆ ಹಾನಿಯಿಂದ ನಿರಾಶ್ರಿತರಾದವರಿಗೆ ಹಣ ಸಂಗ್ರಹಿಸಲಾಯಿತು.

  ಸಾವಿರಾರು ಸಂಖ್ಯೆಯಲ್ಲಿ ಪ್ರಾರ್ಥನೆಯಲ್ಲಿ ಜಮಾಯಿಸಿದ್ದ ಪುರುಷರು, ಮಹಿಳೆಯರು, ಮಕ್ಕಳು ನೆರೆ ಹಾವಳಿ ಸಂತ್ರಸ್ಥರಿಗೆ ಪರಿಹಾರ ರೂಪದಲ್ಲಿ ಹಣ ನೀಡಿದರೆ ಇನ್ನು ಕೆಲವರು ವಾಚು ಹಾಗೂ ಚಿನ್ನದ ಆಭರಣಗಳನ್ನು ದಾನವಾಗಿ ನೀಡಿದರು.
ನಿಧಿ ಸಂಗ್ರಹದ ನೇತೃತ್ವ ವಹಿಸಿದ್ದ ಆರ್.ಕೆ.ಸರ್ದಾರ್ ಮಾತನಾಡಿ ಕೇರಳ ಹಾಗೂ ಕೊಡಗಿನಲ್ಲಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಈಗ ಬೇಕಾಗಿರುವುದು ನೆರವು ಮಾತ್ರ. ಹಾಗಾಗಿ ಯಾವುದೇ ಜಾತಿ, ಧರ್ಮ ಎನ್ನುವುದಕ್ಕಿಂತಲೂ ಮಾನವೀಯತೆ ಮುಖ್ಯವಾಗಿರುವುದರಿಂದ ಚಿತ್ರದುರ್ಗದ ಸಮಸ್ತ ನಾಗರೀಕರು ನೆರವಿನ ಹಸ್ತ ಚಾಚಿ ಮಾನವೀಯತೆ ಮರೆಯಬೇಕು ಎಂದು ಮನವಿ ಮಾಡಿದರು.

   ಮೆಹಬೂಬ್‍ಖಾನ್, ಅಬ್ದುಲ್ಲಾ, ವಿಖ್ಹಾರ್, ನಾಸೀರ್, ಅಶ್ವಖ್, ಮುಫೀಜ್, ಹತಹಾರ್, ಏಜಾಜ್, ಇರ್ಫಾನ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಟ್ಟಡ ಕಾರ್ಮಿಕರ ಸಂಘ
ಕೊಡಗು ಹಾಗೂ ಕೇರಳದಲ್ಲಿ ನೆರೆ ಹಾವಳಿಯಿಂದ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರಾದರ ನೆರವಿಗೆ ಚಿತ್ರದುರ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಬುಧವಾರ ಹೊದಿಕೆ ಹಾಗೂ ತಿಂಡಿ ತಿನಿಸುಗಳನ್ನು ನೀಡಲಾಯಿತು.
ಸಂತೆಹೊಂಡದ ರಸ್ತೆಯಲ್ಲಿರುವ ಕಚೇರಿ ಬಳಿ ನಿರಾಶ್ರಿತರಿಗಾಗಿ ಹೊದಿಕೆ, ಬ್ರೆಡ್, ಬಿಸ್ಕತ್ ಬಾಕ್ಸ್‍ಗಳನ್ನು ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಕಾರ್ಯಕರ್ತರಾದ ಹೆಚ್.ರವಿಕುಮಾರ್, ವಿನಯ್, ಕುಮುದಾ ಇವರುಗಳಿಗೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಹಸ್ತಾಂತರಿಸಿದರು.

  ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ರಾಜು, ನಾಗೇಶ್, ಪಿ.ಲಕ್ಷ್ಮಿದೇವಿ, ಸಾವಿತ್ರಮ್ಮ, ಲಕ್ಷ್ಮಣ, ಅಶೋಕ್, ಹನುಮಂತಪ್ಪ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ರಾಜಣ್ಣ, ಸ್ವಾಮಿ, ಮಹಂತೇಶ್, ಶಿವಣ್ಣ ಇನ್ನು ಮುಂತಾದವರು ಹಾಜರಿದ್ದರು.

Recent Articles

spot_img

Related Stories

Share via
Copy link