ನೊಂದವರ ಕಣ್ಣೀರು ಒರೆಸುವುದೆ ಗುರಿ

ಬೆಂಗಳೂರು :

     ಅಮಾಯಕರು, ನೊಂದವರ ಕಣ್ಣೀರು ಒರೆಸಿ ನಗರದ ಜನಸಾಮಾನ್ಯರಿಗೆ ರಕ್ಷಣೆ ನೀಡಿ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ನಗರದ ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ. 

     ಅಂತರಿಕ ಭದ್ರತಾ ದಳದ ಡಿಜಿಪಿಯಾಗಿ ವರ್ಗಾವಣೆಯಾಗಿರುವ ಪ್ರತಾಪ್ ರೆಡ್ಡಿ ಅವರಿಂದ ಬ್ಯಾಟನ್ ಸ್ವೀಕರಿಸಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.

     ಜನ ಸಾಮಾನ್ಯರ ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಹಾರ ದೊರಕದಿದ್ದರೆ ಹಿರಿಯ ಅಧಿಕಾರಿಗಳು ಜನ ಪ್ರತಿನಿಧಿಗಳ ಬಳಿಗೆ ಹೋಗುತ್ತಾರೆ ಅದನ್ನು ತಪ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

    ಶ್ರೀಮಂತರು, ಬಲಾಡ್ಯರು,ರಾಜಕೀಯ ಬಲ ಹೊಂದಿರುವವರಿಗೆ ಮಾತ್ರ ಪೊಲೀಸ್ ಠಾಣೆಗಳಲ್ಲಿ ನೆರವು ಸಿಗಲಿದೆ ಎನ್ನುವ ಮನೋಭಾವವನ್ನು ತಪ್ಪಿಸಿ ಎಲ್ಲರಿಗೂ ನ್ಯಾಯ ಸಮಸ್ಯೆಗಳಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರೌಡಿಗಳ ನಿಗ್ರಹ:

     ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಹಿಂದಿನ ಪೊಲೀಸ್ ಆಯುಕ್ತರುಗಳು ಶ್ರಮಿಸಿ ಕೈಗೊಂಡಿರುವ ಹಲವು ಕ್ರಮಗಳನ್ನು ಮುಂದುವರೆಸಿ ನಗರವನ್ನು ರೌಡಿ ಚಟುವಟಿಕೆಗಳಿಂದ ಮುಕ್ತಗೊಳಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

     ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟು ಪ್ರಯೋಜನಗಳಿವೆಯೋ ಅಷ್ಟೇ ದುಷ್ಪರಿಣಾಮಗಳಿವೆ ಅದರಿಂದಾಗಿ ಒಳ್ಳೆಯದನ್ನು ಬಳಸಿ ನಕಲಿ ಪ್ರಚೋದನಾಕಾರಿ ಪೋಸ್ಟ್ ಕಾಮೆಂಟ್ ಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ಸರ್ಕಾರಕ್ಕೆ ಕೃತಜ್ಞತೆ:

     ನಗರದಲ್ಲಿ ಕಮಿಷನರ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

    ತೆರೆಯ ಹಿಂದೆ ಮಾತನಾಡುತ್ತಿದೆ. ಈಗ ತೆರೆಯ ಮುಂದೆ ಮಾತನಾಡುತ್ತೀದ್ದೇನೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರ ನಗರದಲ್ಲಿ ಎಲ್ಲಾ ಆಗು ಹೋಗು ಪೊಲೀಸ್ ವ್ಯವಸ್ಥೆಯನ್ನು ಬಲ್ಲೆ ಬಹಳಷ್ಟು ಸವಾಲುಗಳಿವೆ. ಅದನ್ನು ಎದರಿಸಲು ಎಲ್ಲಾ ಸಿಬ್ಬಂದಿಯನ್ನು ಗಮನಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬೆಂಗಳೂರು ಬದಲಾವಣೆ ಬಗ್ಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದರು.

ವಿಶ್ವಾಸ ನಂಬಿಕೆ:

     ಭಾಸ್ಕರ್ ರಾವ್, ಕಮಲ್ ಪಂತ್, ಪ್ರತಾಪ್ ರೆಡ್ಡಿ ಸೇರಿ ನಗರದಲ್ಲಿ ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ನಗರದ ನಾಗರಿಕರು ಇಲಾಖೆ ಮೇಲಿಟ್ಟಿರುವ ಅಪಾರ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ನಗರದ ಗುಪ್ತಚರದಳ ಬಲವರ್ಧನೆ ಮಾಡಬೇಕು. ಗುಪ್ತದಳ ಪೊಲೀಸ್ ಇಲಾಖೆಯ ಬೆನ್ನೆಲುಬು.ಅದನ್ನು ಹೆಚ್ಚು ಬಲವರ್ಧನೆ ಮಾಡಬೇಕು. ಇವತ್ತಿನ ಪೊಲೀಸ್ ವ್ಯವಸ್ಥೆಗೆ ಅನುಗುಣವಾಗಿ ಇರಬೇಕು ಗುಪ್ತದಳದಿಂದ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ಪ್ರಿಡಿಕ್ಟಿಂಗ್ ಪೊಲೀಸಿಂಗ್ ಬಗ್ಗೆ ರಿಸರ್ಚ್ ನಡೆಯುತ್ತಿದೆ. ಅದನ್ನು ನಗರ ಪೊಲೀಸಿಂಗ್ ಗೆ ಅಳವಡಿಸಿಕೊಳ್ಳಲಾಗುವುದು ಎಂದರು.

ಪ್ರಕೃತಿ ನಿಯಮ:

     ಮಾತಾಡುವಾಗ ಮೊದಲಿಗೆ ನಾನು ಬೆಂಗಳೂರಿಗ ಎಂದು ಹೇಳುತ್ತೇನೆ. ಬೆಂಗಳೂರು ನಗರ ತಾನು ಹುಟ್ಟಿ ಬೆಳೆದ ಸ್ಥಳ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜೊತೆಗೊಂಡAತೆ ಕೆಲಸ ಮಾಡುತ್ತೇವೆ. ಚಿಕ್ಕಂದಿನಿಂದ ನಗರ ಹಾಗೂ ಪೊಲೀಸ್ ಇಲಾಖೆಯನ್ನು ನೋಡಿದ್ದೇನೆ. ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆ ಜೊತೆಗೆ ಐತಿಹಾಸಿಕ ವ್ಯವಸ್ಥೆಗಳನ್ನು ನೋಡುತ್ತೇವೆ. ಸಾಕಷ್ಟು ಹಿರಿಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮಾಡಿರುವಂತಹ ವ್ಯವಸ್ಥೆ ಹಾಗೂ ಕೆಲಸಗಳನ್ನು ಮುಂದುವರೆಸಿಕೊAಡು ಹೋಗುತ್ತೇನೆ. ಬದಲಾವಣೆ ಅವಶ್ಯಕತೆ ಇರುವ ಕಡೆ ಬದಲಾವಣೆ ಮಾಡಬೇಕು. ಟೆಕ್ನಾಲಜಿ ಹಾಗು ಸೈಬರ್ ಬಗ್ಗೆ ಕೆಲಸ ಆಗಬೇಕು ಎಂದಿದ್ದಾರೆ.

ಟೋಯಿಂಗ್ ಪರಿಶೀಲನೆ:

      ನಗರ ಪೊಲೀಸ್ ಆಂದರೆ ಅದು ವಿಜಿಬಲ್ ಪೊಲೀಸಿಂಗ್ ಅದು ಆಗಬೇಕು ಜನರಿಗೆ ಹತ್ತಿರವಾಗಬೇಕು. ಹಿಂದೆ ತಾನು ಟ್ರಾಫಿಕ್ ಅಡಿಶನಲ್ ಕಮಿಷನರ್ ಆಗಿ ಕೆಲಸ ಮಾಡಿದ್ದೆ. ಟ್ರಾಫಿಕ್ ಮ್ಯಾನೆಜ್‌ಮೆಂಟ್ ಇರುವುದು ಒಂದು ಇಲಾಖೆ ಯಿಂದ ಆಗುವ ಕೆಲಸ ಅಲ್ಲ. ಬಿಬಿಎಂಪಿಯಿಂದ ಪರಿಹಾರಕ್ಕೆ ಇತರ ಇಲಾಖೆಯ ಸಹಯೋಗ ಸಹಕಾರ ಬೇಕು. ಅರ್ಬನ್ ಡೆವಲಪ್ಮೆಂಟ್ ಎಲ್ಲವರನ್ನು ಸೇರಿಕೊಂಡು ಸುಧಾರಣೆ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಹಾಗು ಸಿಬ್ಬಂದಿ ಗಳ ಸಲಹೆ ಮೇರೆ ಉತ್ತಮವಾಗಿ ಉಪಯೋಗವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.

     ನಗರದ ಸಂಚಾರ ಸಮಸ್ಯೆಯನ್ನು ಪೊಲೀಸ್ ಇಲಾಖೆಯನ್ನು ಪರಿಹರಿಸುವುದು ಆಸಾಧ್ಯ ಅದರಿಂದಾಗಿ ಬಿಬಿಎಂಪಿ,ಸಾರಿಗೆ,ಇAಧನ ಇನ್ನಿತರ ಇಲಾಖೆಯ ಸಹಯೋಗದೊಂದಿಗೆ ಸಂಚಾರ ಉತ್ತಮಗೊಳಿಸಲು ಶ್ರಮಿಸಲಾಗುವುದು ಟೋಯಿಂಗ್ ಜೊತೆಗೆ ಪರ್ಯಾಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಹೊಸ ರೂಪ:

     1994ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ದಯಾನಂದ ಅವರು ಪೊಲೀಸ್ ಇಲಾಖೆಯ ಹಲವು ಉನ್ನತ ಹುದ್ದೆಗಳನ್ನ ನಿರ್ವಹಿಸಿ ದಕ್ಷ ಪ್ರಮಾಣಿಕ ಅಧಿಕಾರಿ ಎನ್ನುವ ಖ್ಯಾತಿ ಹೊಂದಿದ್ದಾರೆ.

     ನಗರದಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಸಂಚಾರ ವಿಭಾಗದ ಆಯುಕ್ತರಾಗಿ, ಸಾರಿಗೆ ಆಯುಕ್ತರಾಗಿ, ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ ದಯಾನಂದ ಅವರು ಗುಪ್ತಚರದಳಕ್ಕೆ ಹೊಸರೂಪ ಕೊಟ್ಟಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap