ಬೆಂಗಳೂರು ಜಲಮಂಡಳಿ : ಅಕ್ರಮ ತಡೆಗೆ ಜಾಗೃತ ದಳ ರಚನೆ : ಸಿಎಂ

ಬೆಂಗಳೂರು

    ಬೆಂಗಳೂರು ನಗರದಲ್ಲಿನ ನೀರಿನ ಕಳವು, ಅಕ್ರಮ ಸಂಪರ್ಕ ಮತ್ತು ಸೋರಿಕೆ ತಡೆಗೆ ಗಟ್ಟಲು ಜಾಗೃತ ದಳ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್‌ನಲ್ಲಿ ಘೋಷಿಸಿದ್ದಾರೆ.

    ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಬೆಂಗಳೂರು ಜಲಮಂಡಳಿ ಕಾವೇರಿ ನದಿಯಿಂದ ಒಂದರಿಂದ ನಾಲ್ಕನೇ ಹಂತದವರೆಗೆ ಒಂದು ಸಾವಿರ 450 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದೆ.

    ನೀರು ಸರಬರಾಜಿಗೆ 50 ವರ್ಷಗಳ ಹಿಂದೆ ಪೈಪ್‌ಗಳನ್ನು ಅಳವಡಿಸಲಾಗಿದ್ದು, ಅವು ಹಳೆಯದಾಗಿದ್ದು ಬದಲಾವಣೆ ಮಾಡಬೇಕಿದೆ. ಜೊತೆಗೆ ಹಳೆಯ ಶಿಥಲೀಕರಣಗಳ ಪುನಃಶ್ಚೇತನ ಸೇರಿದಂತೆ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap