ಜೈಪುರ:
ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅನೇಕರು ಭಾವುಕತೆಯಿಂದ ದೇಶಕ್ಕಾಗಿ ತಾವೂ ಹೋರಾಟಕ್ಕೆ ಸಿದ್ಧ ಎಂದು ದೇಶಪ್ರೇಮ ಮೆರೆಯಲು ಅನೇಕರು ಸೇನೆಗೆ ಸೇರಿಕೊಂಡರೆ, ರಾಜಸ್ಥಾನದ ಯುವನೋರ್ವ ವಿಶೇಷ ಗೌರವ ಸಲ್ಲಿಸಿದ್ದಾರೆ.
ಬಿಕನೇರ್ ಭಗತ್ಸಿಂಗ್ ಯೂತ್ ಬ್ರಿಗೇಡ್ ಸದಸ್ಯ ಗೋಪಾಲ್ ಸಹರಣ್ ಎಂಬ ಯುವಕ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಹಚ್ಚೆ ಹಾಕಿಸಿಕೊಳ್ಳುವ ವಿಶೇಷ ಗೌರವ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದುರಂತದಲ್ಲಿ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿರುವುದಾಗಿ ಸಹರಣ್ ಹೇಳಿದ್ದಾರೆ.
In order to pay tributes to martyred soldiers of dastardly #PulwamaTerrorAttack in #JammuAndKashmir, Gopal Saharan from #Bikaner in #Rajasthan got their names tattooed on his back. pic.twitter.com/2YBy0BpeJf
— NooriBadat (@NooriBadat) February 20, 2019
ಫೆ. 14ರಂದು ನಡೆದ ದಾಳಿಯಲ್ಲಿ ಬಲಿಯಾದ 40ಕ್ಕೂ ಹೆಚ್ಚು ಸೈನಿಕರಲ್ಲದೆ, ಬೇರೆ ಬೇರೆ ಘಟನೆಗಳಲ್ಲಿ ಹುತಾತ್ಮರಾದ 31 ಸೈನಿಕರ ಹೆಸರನ್ನೂ ಸೇರಿಸಿ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ. ನನ್ನ ಈ ನಡೆ ದೇಶದ ಜನರಲ್ಲಿ ಸೈನಿಕರ ಕುರಿತಾದ ಗೌರವ ಹೆಚ್ಚಿಸುತ್ತದೆ ಎಂಬ ಭರವಸೆ ನನಗಿದೆ’ ಎಂದು ಗೋಪಾಲ್ ತಿಳಿಸಿದ್ದಾರೆ.
ರಾಜಸ್ಥಾನದ ಬಿಕಾನೇರ್ನ ಯುವಕನದು ವಿಶಿಷ್ಟ, ವಿಚಿತ್ರ ಎನಿಸುವ ದೇಶಪ್ರೇಮ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಈತನ ಮನದಲ್ಲಿ ಮಾತ್ರವಲ್ಲ, ಬೆನ್ನಿನಲ್ಲಿಯೂ ಇವೆ. ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
