ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ಸಂಘಟಿತರಾಗಬೇಕು: ಕೆ ಎನ್‌ ರಾಜಣ್ಣ

ತುಮಕೂರು:

     ಅಸಹಾಯಕರು,ಅಸಂಘಟಿತರು ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ಸಂಘಟಿತರಾಗುವ ಅಗತ್ಯವಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

     ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘ,ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ,ಬ್ರಹ್ಮಶ್ರೀ ನಾರಾಯಣಗುರ ಜಿಲ್ಲಾ ಜಯಂತೋತ್ಸ ಸಮಿತಿ,ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರು 169ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬಡವರು,ನಿರ್ಗತಿಕರು,ಶೋಷಿತರು ಒಂದಾಗಿ ಸ್ವಾಭಿಮಾನದ ಬದುಕು ರೂಢಿಸಿ ಕೊಳ್ಳಬೇ ಕೆಂಬುದು ನಾರಾಯಣಗುರು ಅವರ ಆಶಯವಾಗಿತ್ತು.ಹಾಗಾಗಿ ಎಲ್ಲಾ ಶೋಷಿತರು,ಅಸಂಘಟಿತರು ಒಂದಾಗಲು, ನಾರಾಯಣಗುರು ಜಯಂತಿ ಒಂದು ವೇದಿಕೆಯಾಗಲಿ ಎಂದರು.

     ದೇವರನಾಡು ಎಂದು ಕರೆಯುತ್ತಿದ್ದ ಕೇರಳದಲ್ಲಿ ಅಸ್ಪಷ್ಯತೆ,ಆನಾಚಾರ,ದೇವರ ಹೆಸರಿನಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುತಿದ್ದ ದೌರ್ಜನ್ಯ, ದಬ್ಬಾಳಿಕೆಯನ್ನು ಕಣ್ಣಾರೆ ಕಂಡ ನಾರಾಯಣಗುರುಗಳು, ಶೋಷಿತರಿಗಾಗಿಯೇ ನೂರಾರು ದೇವಾಲಯಗಳನ್ನು ಕಟ್ಟಿಸಿದರು.ಅರ್ಥಿಕ ಸೃಢತೆ ಸಿಗಬೇಕೆಂದರೆ ಉದ್ಯೋಗ ದೊರೆಯಬೇಕು.ಉದ್ಯೋಗಕ್ಕೆ ಅಗತ್ಯ ಶಿಕ್ಷಣ ಬೇಕು ಎಂಬುದನ್ನು ಮನಗಂಡ ಗುರುಗಳು ರಾತ್ರಿ ಶಾಲೆಗಳನ್ನು ತೆರೆದು ನಿಮ್ನ ಸಮುದಾಯಗಳಿಗೆ ಶಿಕ್ಷಣ ನೀಡಲು ಮುಂದಾದರೂ, ಕೇರಳ ಶೇ100ರಷ್ಟು ಸಾಕ್ಷರತೆ ಸಾಧಿಸಿದ್ದರೇ,ಅಂದು ನಾರಾಯಣಗುರುಗಳು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ ಎಂದು ಸಚಿವ ಕೆ.ಎನ್.ರಾಜಣ್ಣ ನುಡಿದರು.

    ಈಡಿಗರೆಂದರೆ ಶ್ರೀಮಂತರು ಎಂಬ ಭಾವನೆ ಇತರೆ ಸಮುದಾಯಗಳಲ್ಲಿ ಇದೆ.ಆದರೆ ಇದು ತಪ್ಪು,ಗ್ರಾಮೀಣ ಭಾಗದಲ್ಲಿ ಇಂದಿಗೂ ಕಡು ಬಡತನದಲ್ಲಿ ಬದುಕುತ್ತಿರುವವರನ್ನು ನಾವು ಕಾಣಬಹುದು.ಹೆಂಡ,ಸಾರಾಯಿ ಮಾರಾಟ ಮಾಡುವಾಗ ಒಂದಷ್ಟು ಬದುಕು ನಡೆಯುತಿತು.ಆದರೆ ಈಗ ಹೆಂಡದ ಗುತ್ತಿಗೆ ಬೇರೆ ಸಮುದಾಯಗಳ ಕೈಯಲ್ಲಿದೆ.ಹಾಗಾಗಿ ಬದುಕಿಗಾಗಿ ನಿತ್ಯ ಸಂಘರ್ಷವನ್ನು ಈ ಸಮುದಾಯ ಎದುರಿಸುತ್ತಿದೆ.

    ಸಮುದಾಯದ ಕೆಲ ಹಿರಿಯರು ಸಮಾಜಕ್ಕಾಗಿ ಕೆಲಸ ಮಾಡಿದ ಪರಿಣಾಮ ಒಂದಷ್ಟು ವಿದ್ಯಾರ್ಥಿ ನಿಲಯಗಳು ತೆರೆದು ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಬಂಗಾರಪ್ಪ, ಆರ್.ಎಲ್.ಜಾಲಪ್ಪ,ಜೆ.ಪಿ.ನಾರಾಯಣಸ್ವಾಮಿ ಸೇರಿದಂತೆ ಹಲವರು ಸಮುದಾಯಕ್ಕಾಗಿ ದುಡಿದ್ದಾರೆ.ಅವರನ್ನು ಸ್ಮರಿಸಿ ಕೊಂಡು,ದುಶ್ಚಟಗಳಿAದ ದೂರವಾಗಿ,ವೈಷಮ್ಯ ಮರೆತು ಒಂದಾದರೆ ಅರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ.ಜಿಲ್ಲಾ ಆರ್ಯ ಈಡಿಗರ ಸಂಘದ ಕೋರಿಕೆಯಂತೆ ತುಮಕೂರು ನಗರ ಮತ್ತು ಮಧುಗಿರಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

    ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಶೋಷಿತರನ್ನು ಮೇಲೆತ್ತಲು ಪ್ರಯತ್ನಿಸಿದವರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಮುಖರು.ಒಂದೇ ದೈವ, ಒಂದೇ ಜಾತಿ,ಒಂದೇ ಧರ್ಮ ಎಂಬ ಘೋಷವಾಕ್ಯದೊಂದಿಗೆ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದರು.ಹಿಂದುಳಿದ ವರ್ಗಗಳನ್ನು ಮರೆತರೆ ಅಭಿವೃದ್ದಿ ಎಂಬುದು ಮರೀಚಿಕೆಯಾಗಲಿದೆ.ಜಾತಿ ರಹಿತ ಸಮಾಜ ನಾರಾಯಣಗುರುಗಳ ಕನಸಾಗಿತ್ತು ಎಂದರು

    ಆರ್ಯ ಈಡಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತನಂದ ಮಹಾಸ್ವಾಮೀಜಿ ಮಾತನಾಡಿ,ಕೇರಳ ಇಂದು ಬುದ್ದಿವಂತರ ನಾಡು ಎನಿಸಿಕೊಂಡಿದ್ದರೆ, ಅದರ ಹಿಂದಿನ ಶಕ್ತಿ ಬ್ರಹ್ಮಶ್ರೀ ನಾರಾಯಣಗುರು.ಯಾರನ್ನು ದೂಷಿಸದೆ ಶಾಂತಿ ಮತ್ತು ಶಿಕ್ಷಣದ ಮೂಲಕ ಎಲ್ಲಾ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ,ದೇವಾಲಯ ಸ್ಥಾಪನೆಯ ಜೊತೆಗೆ, ಗುಡಿ ಕೈಗಾರಿಕೆ ಮೂಲಕ ಅರ್ಥಿಕ ಸದೃಢತೆಯನ್ನು ತಂದುಕೊಟ್ಟರು.ಅವರನ್ನು ಹೆಚ್ಚು ಹೆಚ್ಚು ಅರಿಯುವ ಕೆಲಸ ಆಗಬೇಕೆಂದರು.

   ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಾರಾಯಣಗುರು ಜಯಂತೋತ್ಸವದ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ,ಬಂಗಾರಪ್ಪ ನವರ ಕಾಲದಲ್ಲಿ ಸಮುದಾಯಕ್ಕೆ ನೀಡಿದ್ದ ಎರಡು ಎಕರೆ ಜಾಗದಲ್ಲಿ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಹಾಸ್ಟಲ್ ನಡೆಯುತ್ತಿದ್ದು,ಉಳಿದ ಜಾಗದಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಬೇಕೆಂಬ ಒತ್ತಾಸೆ ಸಮುದಾಯದ್ದು,ಸಚಿವರು ಸರಕಾರದೊಂದಿಗೆ ಮಾತನಾಡಿ,ಅನುದಾನ ಕೊಡಿಸುವಂತೆ ಭಿನ್ನವತ್ತಳೆ ಸಲ್ಲಿಸಿದರು.

    ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ,ಅಬಕಾರಿ ಗುತ್ತಿಗೆದಾರರಾದ ಮಹದೇವ್,ನಾರಾಯಣಗುರು ಸಮಾಜ ಟ್ರಸ್ಟ್ನ ಮಾಧವನ್,ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್,ಚಲನಚಿತ್ರ ನಿರ್ಮಾಪಕ ರವಿ.ಆರ್. ಗರಣಿ,ಶಾಸಕರಾದ ಜೋತಿಗಣೇಶ್,ಹೆಚ್.ವಿ.ವೆಂಕಟೇಶ್, ಬಿ.ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ಊರುಕೆರೆ ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿರಿದ್ದರು.

    ಇದೇ ವೇಳೆ ಸಮಾಜದ ಹಿರಿಯರಾದ ಎಂ.ನಾಗರಾಜು,ದೇವೇದ್ರಪ್ಪ, ಎನ್.ಜಿ.ನಾಗರಾಜ, ಜಯರಾಂ, ಜನಾರ್ಧನ್, ಭೀನಾ ಬಾಬು ಹಾಗೂ ಲಕ್ಷಿಕಾಂತರಾಜ ಅರಸ್ ಅವರುಗಳಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‌ಹಾಲ್ ಮುಂಭಾಗದಿAದ ಕಲಾಕ್ಷೇತ್ರವರೆಗೆ ವಿವಿಧ ಕಲಾತಂಡಗಳ ಪ್ರದರ್ಶನದ ಮೂಲಕ ನಾರಾಯಣಗುರುಗಳ ಪುತ್ಥಳಿ ಮೆರವಣಿಗೆ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap