ಭಗವದ್ಗೀತೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಬಿ.ಸಿ.ನಾಗೇಶ್

ತಿಪಟೂರು
             ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಬಿ.ಸಿ.ನಾಗೇಶ್ ಭಗವದ್ಗೀತೆಯನ್ನು ಪಾಲಿಸಿ ಎಂದು ಕರೆನೀಡಿದರು.

           ಮಾನವನ ಬದುಕು ಹೇಗಿರಬೇಕೆಂದು ತೋರಿಸುವ ಒಂದು ಪ್ರಯತ್ನವೇ ಮಹನೀಯರ ದಿನಾಚರಣೆಗಳನ್ನು ಮಾಡುವುದು. ಶ್ರೀ ಕೃಷ್ಣನ ಆದರ್ಶದ ಜೊತೆಗೆ ಶ್ರೀ ಕೃಷ್ಣನನ್ನು ಮಕ್ಕಳಿಂದ ಹಿಡಿದು ವಯೋವೃದ್ಧರೆಲ್ಲರಿಗೂ ಅಚ್ಚುಮೆಚ್ಚಿನವನು. ಅವನ ಬಾಲ್ಯದಲ್ಲಿನ ತುಂಟಾಟ, ಚತುರತೆ, ಸ್ನೇಹ, ಸಹಬಾಳ್ವೆ, ನ್ಯಾಯಪರತೆ, ರಾಜಕೀಯತೆಯಿಂದ ಕಲಿಯಬೇಕಾದುದ್ದು ಬಹಳಷ್ಟಿದೆ. ಶ್ರೀ ಕೃಷ್ಣನ ಭಗದ್ಗೀತೆಯಲ್ಲಿ ಇರುವುದೆಲ್ಲವೂ ಪ್ರಕೃತಿಯಲ್ಲಿದೆ, ಭಗವದ್ಗೀತೆಯಲ್ಲಿ ಇಲ್ಲದಿರುವುದು ಪ್ರಕೃತಿಯಲ್ಲೂ ಇಲ್ಲ. ಆದ್ದರಿಂದ ಇದೊಂದು ಸಾರ್ವತ್ರಿಕ ಗ್ರಂಥ. ಇದನ್ನು ಓದಿ, ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

             ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಷಡಕ್ಷರಸ್ವಾಮಿ ಮಾತನಾಡಿ ನಾವು ಇಂದು ಶ್ರೀ ಕೃಷ್ಣನ 5,242ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಅಂದಿನ ಕಾಲದಲ್ಲಿ ತುಂಟ ಕೃಷ್ಣನ ಒಂದು ಕತೆಯಾದರೆ ಬಡವರ ದೀನದಲಿತ ಪಾಲಿನ ಆಪ್ತರಕ್ಷಕನಾಗಿ, ಕಷ್ಟದಲ್ಲಿರುವವರ ಕೂಗಿಗೆ ಬಂದು ನಿಲ್ಲುತ್ತಿದ್ದ ಶ್ರೀ ಕೃಷ್ಣನ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಿದೆ ಎಂದರು.

              ಮುಖ್ಯ ಅತಿಥಿಯಾದ ಉಪನ್ಯಾಸಕ ಕೆ.ಎನ್.ರೇಣುಕಯ್ಯನವರು ಮಾತನಾಡುತ್ತಾ, ಶ್ರೀ ಕೃಷ್ಣನನ್ನು ದಾನವರಿಪು ಎಂದು ಕರೆಯುತ್ತಾರೆ. ದಾನವರಿಪು ಎಂದರೆ ರಾಕ್ಷಸ ಸಂಹಾರಕ, ಇಂದಿನ ದುಷ್ಟ ಬುದ್ದಿಯನ್ನು, ಅನ್ಯಾಯ, ಅಧರ್ಮಗಳನ್ನು ಮೆಟ್ಟಿನಿಂತವ, ಕರುಣಾಮಯಿ. ಇಂದೂ ದುರ್ಗಾಮಾತೆಯ ಜನ್ಮದಿನವೂ ಸಹಆಗಿದೆ. ಶ್ರೀ ಕೃಷ್ಣ ಮತ್ತು ದ್ರೌಪದಿಯ ಅಣ್ಣತಂಗಿಯ ಸಂಬಂಧಕ್ಕೆ ದ್ಯೋತಕವಾಗಿಯೇ ರಕ್ಷಾಬಂಧನ ಆಚರಣೆಗೆ ಬಂದಿದೆ ಎಂದರು.

            ಯಾದವ ಸಮಾಜದ ಮುಖಂಡರು ಹಾಗೂ ಕೌನ್ಸಿಲರ್ ತರಕಾರಿ ನಾಗರಾಜು ಇಂದು ಶ್ರೀ ಕೃಷ್ಣನ ಜನ್ಮದಿವನ್ನು ಆಚರಿಸುತ್ತಿರುವುದು ಸಂತೋಷ. ಆದರೆ ಇದನ್ನು ಈ ಚಿಕ್ಕಸ್ಥಳದಲ್ಲಿ ಮಾಡುತ್ತಿರುವುದು ನಮಗೆ ಬೇಸರ ತಂದಿದೆ ಎಂದರು.

            ತಹಸೀಲ್ದಾರ್ ಶಿವರಾಜ್ ಮಾತನಾಡಿ, ಶ್ರೀ ಕೃಷ್ಣನು ಸಾರ್ವತ್ರಿಕ ದೇವರು. ಯಾವ ಭೇದ ಭಾವವಿಲ್ಲ ಎಂಬುದಕ್ಕೆ ಇಂದು ಆಗಮಿಸಿರುವ ಮುಸಲ್ಮಾನ ಬಾಂಧವರೆ ಸಾಕ್ಷಿ ಎಂದರು. ಎಲ್ಲಾ ಸಮುದಾಯದವರು ಶ್ರೀಕೃಷ್ಣನ ಆದರ್ಶಗಳನ್ನು ರೂಢಿಸಿಕೊಳ್ಳಲು ತಿಳಿಸಿದರು.

            ಕಾರ್ಯಕ್ರಮದಲ್ಲಿ ಬಿ.ಇ.ಓ ಮಂಗಳಗೌರಮ್ಮ, ಸಿ.ಡಿ.ಪಿ.ಓ ಓಂಕಾರಪ್ಪ, ದಿನೇಶ್, ಮುಂತಾದ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಶ್ರೀ ಕೃಷ್ಣ ವೇಷದಾರಿ ಮಕ್ಕಳುಗಳು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link