ನವದೆಹಲಿ:
ಮಾಜಿ ಪ್ರದಾನಿ ವಾಜಪೇಯಿ ಅವರ ನಿಧನದಿಂದಾಗಿ ಭಾರತವು ಒಂದು ಅತ್ಯಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ಸಮಸ್ತ ಭಾರತೀಯರ ರತ್ನವಾಗಿರುವ ಇವರು, ನಮಗೆ ಕೆಲಸ ಮಾಡಿಸುವ ಶಕ್ತಿಯ ಪ್ರೇರಣೆಯಾಗಿದ್ದರು.ಭಾರತದ ಹೆಮ್ಮೆಯ ಪುತ್ರರಾಗಿದ್ದರು.ಅವರ ನಿಧನದಿಂದಾಗಿ ವಾಜಪೇಯಿ ಜತೆ ಒಂದು ಯುಗ ಅಂತ್ಯಗೊಂಡಿದೆ ಎಂದು ಹೇಳಿದರು.
ಭಾರತದ ಓರ್ವ ಶ್ರೇಷ್ಠ ಮಗ : ರಾಹುಲ್
ಅಜಾತಶತ್ರು ಎಂದೇ ಹೆಸರಾದ ಮಾಜಿ ಪ್ರದಾನಿ ಎ.ಬಿ.ವಾಜಪೇಯಿ ಅವರು, ಭಾರತದ ಓರ್ವ ಶ್ರೇಷ್ಠ ಮಗನಾಗಿದ್ದರು ಹಾಗೂ ಲಕ್ಷಾಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
