ಚಿತ್ರದುರ್ಗ:
ಮಹಿಳೆ ಹಾಗೂ ಮಕ್ಕಳನ್ನು ಮಾರಿದರೆ ದುಡ್ಡು ಬರುತ್ತದೆ ಎಂದು ಹಲವರು ನೀಚ ವೃತ್ತಿಯನ್ನು ನಡೆಸುತ್ತಿದ್ದು ಈ ಬಗ್ಗೆ ಜನತೆ ವಂಚನೆ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆ ಹಾಗೂ ತಿಳಿವಳಿಕೆ ಇರಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ರವರು ತಿಳಿಸಿದರು.
ಚಂದ್ರವಳ್ಳಿ ಎಸ್.ಜೆ.ಎಂ.ಕಾಲೇಜು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಚಂದ್ರವಳ್ಳಿ ಎಸ್.ಜೆ.ಎಂ.ಕಾಲೇಜಿನ ಜಯದೇವ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟುವ ಮತ್ತು ಲೈಂಗಿಕ ಶೋಷಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಲಯರು ಯೌವ್ವನ ವ್ಯವಸ್ಥೆಯಲ್ಲಿ ಆಸೆ,ಆಮೀಷಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ, ಪ್ರೇಮ ಬೇಡ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಬೇಕು. ಪ್ರೀತಿ ಹೆಸರಿನಲ್ಲಿ ಹಲವರು ಚಿನ್ನ, ರನ್ನ ತುಂಬಾ ಚೆನ್ನಾಗಿದ್ದೀಯ ಎಂದು ನಂಬಿಸುತ್ತಾರೆ ಯಾವುದಕ್ಕೂ ಕಿವಿ ಕೊಡಬಾರದು. ಅಪರಿಚಿತರ ಜೊತೆ ಪ್ರೀತಿ ಬೇಡ ಯಾವುದೇ ಕಾರಣಕ್ಕೆ ಬೈಕ್ ಹತ್ತಬೇಡಿ ಎಚ್ಚರದಿಂದ ಇರಬೇಕು. ಯಾವುದೇ ಘಟನೆಗಳಿಗೆ ಆಸ್ಪದ ಕೊಡದೆ ಸುಂದರ ಜೀವನ ನಿರ್ಮಾಣ ಮಾಡಿಕೊಳ್ಳಿ.
ಮದುವೆ ಆಗುತ್ತೇನೆಂದು ಹಾಗೂ ಕೆಲಸ ಕೊಡಿಸುತ್ತೇವೆ, ಬಂಗಾರ ಕೊಡಿಸುತ್ತೇವೆ ಎಂದು ನಂಬಿಸಿ ಗೋವಾ, ಬಾಂಬೆಗಳಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಜ್ಯೂಸ್ನಲ್ಲಿ ಮಾದಕÀ ವಸ್ತುಗಳನ್ನು ಹಾಕಿ ಲೈಂಗಿಕ ಅತ್ಯಾಚಾರ ನಡೆಸುತ್ತಾರೆ. ನಂತರ ಇತರರಿಗೆ ಮಾರಾಟ ಮಾಡುತ್ತಾರೆ. ಇಂತಹ ಘಟನೆಗೆ ಕಾರಣವಾದರೆ ಮತ್ತೆ ಹೊಸ ಪ್ರಪಂಚಕ್ಕೆ ಬರಲು ಸಾಧ್ಯವಿಲ್ಲ. ಅವಕೃಪೆಗೆ ಒಳಗಾದರೆ ಕುಟುಂಬದವರು ಸೇರಿದಂತೆ ಯಾರೂ ಮರಿಯಾದೆ ಕೊಡುವುದಿಲ್ಲ ಕಾನಾನು ತಿಳಿವಳಿಕೆ ಹಾಗೂ ಎಚ್ಚರವಹಿಸಿದರೇ ಯಾವುದೇ ಘಟನೆ ಸಂಭವಿಸುವುದಿಲ್ಲ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರ ಸಂಘದ ಅಧ್ಯಕ್ಷರಾದ ಎನ್.ಬಿ.ವಿಶ್ವನಾಥ್ ಮಾತನಾಡಿ ಕಾನೂನು ಅರಿವು ಇಲ್ಲದಿದ್ದರೆ ಸಮಸ್ಯೆಗೆ ಕಾರಣ ಹೆಣ್ಣು ಮಕ್ಕಳ ದೌರ್ಬಲ್ಯತೆ ಕಂಡು ಮೋಸ ಮಾಡುತ್ತಾರೆ. ಯಾರೇ ವಂಚನೆ ಮಾಡಲಿಕ್ಕೆ ಬಂದರೆ ಪೊಲೀಸರಿಗೆ ದೂರು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸಿ.ಶಿವುಯಾದವ್ ಮಾತನಾಡಿ ನಿಮ್ಮ ಭವಿಷ್ಯ ನಿಮ್ಮಲ್ಲಿ ಇದೆ ಅದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಒಮ್ಮೆ ದಾರಿ ತಪ್ಪಿದರೇ ಮುಗಿಯಿತು ತಂದೆ ತಾಯಿ ನಿಮ್ಮ ಮೇಲೆ ತುಂಬಾ ವಿಶ್ವಾಸವಿಟ್ಟಿರುತ್ತಾರೆ, ಅವರಿಗೆ ದ್ರೋಹ ಮಾಡಬೇಡಿ ಅಕಸ್ಮಾತ್ ಈಗ ತಪ್ಪು ಮಾಡಿದ್ದರೇ ತಿದ್ದುಕೊಂಡು ಮುನ್ನಡೆದು ಸಮಾಜದಲ್ಲಿ ಉತ್ತಮರಾಗಿ ಬಾಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮುನಿರತ್ನಮ್ಮ ಮಾತನಾಡಿ ವಿದ್ಯಾರ್ಥಿ ಜೀವನ ಸುಂದರ ಜೀವನ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕು ಯಾವುದೇ ಸಾಧನೆ ಮಾಡಬೇಕಾದರೆ ಗುರಿ ಇಟ್ಟುಕೊಂಡು ನಿರಂತರ ಶ್ರಮವಹಿಸಿದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೆಂದು ತಿಳಿಸಿದರು.
ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಕೆ.ವೀರಭದ್ರಪ್ಪ, ಸಿವಿಲ್ ನ್ಯಾಯಾಧೀಶರಾದ ದಿಂಡಾಲು ಕೊಪ್ಪ, ಎಸ್.ಕೆ.ಜನಾರ್ಧನ, ಬಿ.ಸಿ.ದೀಪು, ಅಚ್ಚಪ್ಪ, ದೊಡ್ಡಬಸವರಾಜು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ.ಕೆ.ಸಿ.ರಮೇಶ್ ಮಾತನಾಡಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್ .ಬಿ ವಸ್ತ್ರಮಠ್ರರವರು ಇತ್ತೀಚಿಗೆ ತಪ್ಪು ಮಾಡಿದವರಿಗೆ ಒಂದೇ ದಿನದಲ್ಲಿ ಶಿಕ್ಷೆ ನೀಡಿರುವುದು ಇದೊಂದು ಐತಿಹಾಸಿಕ ದಾಖಲೆಯಾಗಿದೆ ಇವರು ನೀಡುತ್ತಿರುವ ತಿರ್ಪಿಗೆ ತಪ್ಪು ಮಾಡುವರಿಗೆ ಎಚ್ಚರಿಕೆಯಾಗಿದೆ ಇವರ ಕಾರ್ಯವೈಖರಿ ಹಾಗೂ ಜಿಲ್ಲಾದ್ಯಾಂತ ಜಾಗೃತಿ ಕಾರ್ಯಕ್ರಮಗಳು ಮತ್ತು ನೊಂದವರಿಗೆ ತ್ವರಿತ ಗತಿಯಲ್ಲಿ ನ್ಯಾಯ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
ಕನ್ನಡ ವಿಭಾಗದ ಮುಖ್ಯಸ್ಥರಾದ ಜಿ.ಎನ್.ಬಸವರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್.ಅಧಿಕಾರಿ ಬಿ.ರೇವಣ್ಣ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೋ|| ಹೆಚ್.ಕೆ.ಶಿವಪ್ಪ ವಹಿಸಿದ್ದರು.