ಮೂರು ಪಕ್ಷಗಳ ಅಧಿಕಾರ ಹೊಂದಾಣಿಕೆ ವಿ.ಎಸ್.ಎಸ್.ಎನ್‍ಗೆ ಅವಿರೋಧ ಆಯ್ಕೆ

ಕುಣಿಗಲ್

            ತಾಲ್ಲೂಕಿನ ಕೆ.ಹೊನ್ನಮಾಚನಹಳ್ಳಿಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ಗೆ ಮೂರು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಯದಂತೆ ಅವಿರೋಧ ಆಯ್ಕೆಯಾಗಿ ತಾಲ್ಲೂಕಿನಲ್ಲಿ ಮಾದರಿಯಾಗಿದ್ದಾರೆ.

             ತಾಲ್ಲೂಕಿನಲ್ಲಿ ವಿಶಿಷ್ಟ ರಾಜಕೀಯಕ್ಕೆ ಹೆಸರಾಗಿದ್ದ ಕೆ.ಹೆಚ್.ಹಳ್ಳಿ ಎಂದೆಂದು ಗುದ್ದಾಟವಿಲ್ಲದೆ ಚುನಾವಣೆಗಳು ನಡೆದ ಉದಾರಣೆಯಿಲ್ಲ. ಆದರೆ ಕಳೆದ 25 ವರ್ಷದ ರಾಜಕಾರಣದಲ್ಲಿ ಎಂದೂ ಕಂಡರಿಯದ ಹೊಂದಾಣಿಕೆ ಇದಾಗಿದ್ದು ಒಟ್ಟು 12 ಸ್ಥಾನಗಳಿಗೆ ಹೊಂದಾಣಿಕೆಯಾಗಿ ಜೆಡಿಎಸ್-6 ಕಾಂಗ್ರೆಸ್-5 ಹಾಗೂ ಬಿಜೆಪಿ-1 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇದೀಗ ಪ್ರತಿ 10 ತಿಂಗಳಿಗೆ ಒಬ್ಬರಂತೆ ಮೊದಲ 10 ತಿಂಗಳಿಗೆ ಅಧ್ಯಕ್ಷರಾಗಿ ಜೆಡಿಎಸ್‍ನ ತಿರುಮಲಪಾಳ್ಯದ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಕೆ.ಎಚ್.ಹಳ್ಳಿಯ ರಾಮಣ್ಣ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

              ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಸತೀಶ್ ಸದಸ್ಯತ್ವ ಪಡೆದಿರುವ ಎಲ್ಲಾ ರೈತರಿಗೂ ಸಮಾನ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಹಾಗೂ ಪ್ರತೀ ರೈತರಿಗೂ ಸಾಲ ಸೌಲಭ್ಯ ದೊರಕುವಂತೆ ಮಾಡಲಾಗುವುದು. ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನ ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಟಿ.ಟಿ.ವೆಂಕಟೇಶ್ ಹಾಗೂ ವಿಎಸ್‍ಎಸ್‍ಎನ್ ಮಾಜಿ ಅಧ್ಯಕ್ಷರಾದ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link