ರಮೇಶ್ ಜಾರಕಿಹೊಳಿ ಕೆನ್ನೆ ಸವರಿದ ಸಿ.ಎಂ. : ಹುಬ್ಬೇರಿಸಿದ ಮುಖ್ಯಮಂತ್ರಿ ನಡೆ

 ಬೆಳಗಾವಿ:

      ಜಿಲ್ಲಾ ಉಸ್ತುವಾರಿ ಸಚಿವರ ಕೆನ್ನೆಯನ್ನು ಸವರುವ ಮೂಲಕ ಮುಖ್ಯಮಂತ್ರಿಗಳ ನಡೆ ಹುಬ್ಬೇರುವಂತೆ ಮಾಡಿದ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆದಿದೆ.

      ಬೆಳಗಾವಿಯ ಕೆ.ಎಲ್.ಎಸ್. ಅಮೃತ ಮಹೋತ್ಸವದ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಬಂದ ಜಿಲ್ಲಾ ಉಸ್ತುವಾರಿ ಸಚಿವರೋರ್ವರ ಕೆನ್ನೆಯನ್ನು ಸವರುವ ಮೂಲಕ ಮಖ್ಯಮಂತ್ರಿಗಳ ನಡೆ ಹುಬ್ಬೇರುವಂತೆ ಮಾಡಿದೆ.

      ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಬಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಕೆನ್ನೆಯನ್ನು ಮುಖ್ಯಮಂತ್ರಿಗಳು ಸವರಿದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ವಿಚಲಿತರಾದಂತೆ ಕಂಡು ಬಂತು.

       ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾವಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಸುವರ್ಣಸೌಧ ನಿರ್ಮಿಸಿ ಮೊದಲ ಬಾರಿಗೆ ನಾನು ಅಧಿವೇಶನ ನಡೆಸಿದ್ದೇನೆ. ಈಗ ಈ ಸುವರ್ಣಸೌಧಕ್ಕೆ ವಿಶೇಷ ಕಚೇರಿ ಸ್ಥಳಾಂತರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap