ರಾಜ್ಯ ರಾಜಧಾನಿಯಲ್ಲಿ ಭೂಕಂಪ..!

ಬೆಂಗಳೂರು:

      ಬೆಂಗಳೂರಿನಲ್ಲಿ ಹಲವೆಡೆ ಭಾರಿ ಸ್ಫೋಟದ ಸದ್ದಾಗಿದ್ದು, ರಾಜಧಾನಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

      ಸ್ಫೋಟದ ಶಬ್ದಕ್ಕೆ ಬಿಲ್ಡಿಂಗ್​ಗಳು ಕೂಡ ಅಲುಗಾಡಿದ್ದು, ಸ್ಫೋಟದ ಸದ್ದಿ ಜನರು ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿದ್ದ ಎಲ್ಲ ವಸ್ತುಗಳು ಕೂಡ ಕೆಳಗೆ ಬಿದ್ದಿವೆ. ಈ ಬಗ್ಗೆ ಫೇಸ್​ಬುಕ್​​ನಲ್ಲಿಯೂ ಸಾರ್ವಜನಿಕರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

      ಬಸವೇಶ್ವರನಗರ, ಕುಮಾರಸ್ವಾಮಿ ಲೇಔಟ್, ವಿಜಯನಗರ, ಆರ್​.ಆರ್.ನಗರ, ಗಿರಿನಗರ, ಕತ್ರಿಗುಪ್ಪೆ, ಜೆ.ಪಿ.ನಗರ, ಉತ್ತರಹಳ್ಳಿ, ನಾಗರಬಾವಿ, ಕೋಣನಕುಂಟೆ, ನಂದಿನಿ ಲೇಔಟ್, ಹೊಸಕೆರೆಹಳ್ಳಿ ಸೇರಿ ಹಲವೆಡೆ ಇದೇ ಅನುಭವ ಉಂಟಾಗಿದೆ.

      ಆದರೆ ರಿಕ್ಟರ್‌ ಮಾಪನದಲ್ಲಿ ಯಾವುದೇ ಭೂಕಂಪನ ಕಂಡುಬಂದಿಲ್ಲ ಎಂದು ಭೂಗರ್ಭ ಇಲಾಖೆ ಸ್ಪಷ್ಟಪಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap