ರೋಟರಿ,ರೆಡ್‍ಕ್ರಾಸ್‍ನಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಹಿರಿಯೂರು :

        ಜೀವನದ ಜಂಜಾಟದಲ್ಲಿ ಕಣ್ಣಿನ ಸೋಂಕುಗಳನ್ನು ಅಲಕ್ಷಿಸದೇ ಕೂಡಲೇ ವೈದ್ಯರ ಬಳಿಗೆ ಹೋಗಿ ನೇತ್ರ ತಪಾಸಣೆ, ಸಲಹೆ, ಚಿಕಿತ್ಸೆಗಳನ್ನು ಪಡೆದುಕೊಂಡು ಕಣ್ಣಿನರಕ್ಷಣೆ ಮಾಡಿಕೊಳ್ಳಬೇಕು ಎಂಬುದಾಗಿ ರೋಟರಿ ಅಧ್ಯಕ್ಷರಾದ ಎಮ್.ಎಸ್. ರಾಘವೇಂದ್ರ ಹೇಳಿದರು.

        ನಗರದ ಥಿಯಾಸಫಿಕಲ್ ಸೊಸೈಟಿಯಲ್ಲಿ ಭಾರತೀಯ ರೆಡ್‍ಕ್ರಾಸ್, ರೋಟರಿಕ್ಲಬ್, ಸರ್ವೋದಯಾ ಥಿಯಾಸಫಿಕಲ್ ಸೊಸೈಟಿ. ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜಿಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ- ಹಿರಿಯೂರು, ಚಿತ್ರದುರ್ಗ ಹಾಗೂ ಎಂ.ಆರ್.ಟಿ. ಕಣ್ಣಿನಆಸ್ಪತ್ರೆ-ಕೊಂಡ್ಲಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ರೋಟರಿ ಕ್ಲಬ್, ರೆಡ್‍ಕ್ರಾಸ್ ಸಂಸ್ಥೆಗಳು ನಡೆಸುವ ಆರೋಗ್ಯ ತಪಸಣಾ ಶಿಬಿರಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಶಿಬಿರಗಳ ಸದುಪಯೋಗ ಪಡೆಯುವಂತೆ ಅವರು ಕೋರಿದರು.

        ಥಿಯಾಸಫಿಕಲ್ ಸೊಸೈಟಿ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ ಮಾತನಾಡಿ, ಈ ದಿನದ ಶಿಬಿರವನ್ನು ದಾನಿಗಳಾದ ಎಚ್.ಎಸ್.ರಾಧಾಕೃಷ್ಣರವರು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಈ ದಂಪತಿಗಳಿಗೆ ರೆಡ್‍ಕ್ರಾಸ್ ಮತ್ತು ರೋಟರಿ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.

         ಈ ಕಾರ್ಯಕ್ರಮದಲ್ಲಿ ರೋಟರಿಕಾರ್ಯದರ್ಶಿ ಎಚ್.ವೆಂಕಟೇಶ್, ಎಚ್.ಪಿ.ರವೀಂದ್ರನಾಥ್, ಎಸ್.ಜೋಗಪ್ಪ, ಕಿರಣ್, ರೆಡ್‍ಕ್ರಾಸ್ ಸೌಭಾಗ್ಯವತೀದೇವರು, ಪಿ.ಆರ್.ಸತೀಶ್‍ಬಾಬು, ಪರಮೇಶ್ವರ್‍ಭಟ್, ಎಚ್.ಎಸ್.ರಾಧಾಕೃಷ್ಣ, ರಂಗನಾಥಪ್ಪ ಕೊಂಡ್ಲಹಳ್ಳಿ, ಎಂ.ಆರ್.ಟಿ. ಕಣ್ಣಿನ ಆಸ್ಪತ್ರೆ ನೇತ್ರತಜ್ಞ ವೈದ್ಯರಾದ ಕೆ.ನಾಗರಾಜ್, ಸಿಬ್ಬಂದಿಗಳಾದ ವೀರೇಶ್, ಲತಾ, ಪಂಚಾಕ್ಷರಿ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

         ಈ ಶಿಬಿರದಲ್ಲಿ ಸುಮಾರು 80 ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. ಮತ್ತು ಹೆಚ್ಚಿನ ನೇತ್ರ ಚಿಕಿತ್ಸೆ ಅಗತ್ಯವಿರುವ 20 ಜನರಿಗೆ ಕೊಂಡ್ಲಹಳ್ಳಿ ಆಸ್ಪತ್ರೆಯಲ್ಲಿ ಉಚಿತನೇತ್ರ ಚಿಕಿತ್ಸೆ ಮಾಡಲಾಗುವುದು ಎಂಬುದಾಗಿ ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link