ದಾವಣಗೆರೆ:
ಕೇರಳ ಮತ್ತು ಕೊಡಗಿನ ನೆರೆ ಸಂತ್ರಸ್ಥರಿಗಾಗಿ ನಗರದ ದೇಶಪಾಂಡೆ ಫೌಂಡೇಶನ್, ಲೀಡರ್ಸ್ ಎಕ್ಸ್ಲ್ ರೇಟಿಂಗ್ ಡೆವಲೆಪ್ಮೆಂಟ್ ಪ್ರೋಗ್ರಾಮ್ನ ಲೀಡ್ ವಿದ್ಯಾರ್ಥಿಗಳು ನಗರದ ಕೆಲವು ಅಂಗಡಿ ಮಳಿಗೆಗೆ ಹಾಗೂ ಮನೆಗಳಿಗೆ ತೆರಳಿ 28,050 ರೂ. ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ.
ದೈನಂದಿನ ಹಾಗೂ ಗೃಹ ಬಳಕೆಯ ವಸ್ತುಗಳು, ಆಹಾರ ಸಮಗ್ರಿಗಳು ಸಂಗ್ರಹಿಸಿದ್ದು ಎಲ್ಲಾ ಸಮಗ್ರಿಗಳನ್ನು ದಾವಣಗೆರೆಯದೇಶಪಾಂಡೆ ಫೌಂಡೇಶನ್ನ ಲೀಡ್ ಸಂಸ್ಥೆಯುತನ್ನದೆ ಸಂಸ್ಥೆವತಿಯಿಂದ ಸಂತ್ರಸ್ಥರಿಗೆ ತಲುಪಿಸಿದ್ದಾರೆ.
ಈ ಸಂದರ್ಭದಲ್ಲಿ ಲೀಡ್ ಸಂಸ್ಥೆಯಕಾರ್ಯಕ್ರಮದ ವ್ಯಾವಸ್ಥಾಪಕ ಕೃಷ್ಣಾಜಿ ಮೋರೆ, ಸಂಯೋಜಕ ಸಂತೋಷ್ಕುಮಾರ, ಧ. ರಾ. ಮ ವಿಜ್ಞಾನ ಕಾಲೇಜು, ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನ 100ಕ್ಕೂ ಹೆಚ್ಚು ಲೀಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/08/lead-students.jpg)