ಮಿಡಿಗೇಶಿ
ಕಾರೇನಹಳ್ಳಿ ಬಳಿ ಶ್ರೀ ಮುರಾರ್ಜಿದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (18ಕೋಟಿವೆಚ್ಚ) ಶಂಕುಸ್ಥಾಪನೆ ಮಧುಗಿರಿ ವಿಧಾನಸಭಾ ಸದಸ್ಯರಿಂದ ಚಾಲನೆ.ಆ.29 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆ ವತಿಯಿಂದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮ ಪಂಚಾಯ್ತಿಗೆ ಸೇರಿದ ಕಾರೇನಹಳ್ಳಿ ಗ್ರಾಮದ ಬಳಿಯಿರುವ ಶನೈಶ್ವರಸ್ವಾಮಿ ಗುಡ್ಡದ ಅರಣ್ಯ ಇಲಾಖೆಗೆ ಸೇರಿದ ಒಂಭತ್ತು ಎಕರೆ ಭೂಮಿಯನ್ನು ಘನ ಸರ್ಕಾರದ ವಶಕ್ಕೆ ತೆಗೆದುಕೊಂಡಿದ್ದು 2017-18ನೇ ಸಾಲಿನ ಯೋಜನೆಯಡಿಯಲ್ಲಿ ಘನ ಸರ್ಕಾರದಿಂದ ದಿಂದ 18 ಕೋಟಿ ರೂಪಾಯಿಗಳ ಅನುದಾನ ಮಂಜೂರಾತಿಯಾಗಿದ್ದು (ಹೊಸಕೆರೆಯಿಂದ ಆಂಧ್ರ ರತ್ನಗಿರಿ ಗ್ರಾಮಕ್ಕೆ ಹಾದುಹೋಗುವ ರಸ್ತೆಯಿಂದ ಸುಮಾರು ಒಂದು ಕಿ.ಮೀ ಅಂತರ ದೂರದಲ್ಲಿ) ಕಾರಣಾಂತರದಿಂದ ಸದರಿ ಶ್ರೀ ಮುರಾರ್ಜಿದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನೂತನ ಕಟ್ಟಡದ ಶಂಕುಸ್ಥಾಪನೆ, ಕಟ್ಟಡ ನಿರ್ಮಾಣ ಕಾರ್ಯಕ್ರಮಗಳು ಹಿಂದುಳಿದಿದ್ದವು ಸದರಿ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಮುಹೂರ್ತ ತಾ:29-08-2018ರ ಬುಧವಾರದಂದು ಬೆಳಿಗ್ಗೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯನವರು (ಗುದ್ದಲಿಪೂಜೆ) ಶಂಕುಸ್ಥಾಪನೆ ನೆರವೆರಿಸಿದರು.
ಎಂ.ವಿ ವೀರಭದ್ರಯ್ಯನವರು ಮಾತನಾಡಿ ನಮ್ಮ ದೇಶ ಭವ್ಯ ಭಾರತವಾಗಬೇಕಾದಲ್ಲಿ ಪೋಷಕರು, ಬೋಧಕ ವರ್ಗದವರು ಒಮ್ಮನಸ್ಸಿನಿಂದ ತಮ್ಮ ತಮ್ಮತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಮಾಡಿಸಿದಾಗ ಇಂದಿನ ಮಕ್ಕಳೇ ಮುಂದಿನ ಭಾರತದೇಶದ ಪ್ರಜೆಗಳಾಗಲಿದ್ದಾರೆಂಬುದಾಗಿ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಉನ್ನತ ಸ್ಥಾನಕ್ಕೆ ಬರಲೆಂಬ ಸದುದ್ದೇಶಗಳಿಂದಲೇ ತಾಲ್ಲೂಕು ಹೋಬಳಿ ಮಟ್ಟ ಗ್ರಾಮಪಂಚಾಯ್ತಿ ಮಟ್ಟಗಳಲ್ಲಿ ಶ್ರೀ ಮುರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಕುವೆಂಪು ಶಾಲೆ, ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ, ಅಂಬೇಡ್ಕರ್ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು ಸದರಿ ಶಾಲೆಗಳಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸುವಂತೆ ತಿಳಿಸಿದರು. ಮುಂದುವರಿದು ಮಾತನಾಡಿ ಶಿಕ್ಷಣ ಸುಮ್ಮನೆ ಬರುವುದಿಲ್ಲ, ಋಷಿಮುನಿಗಳು ತಪಸ್ಸು ಮಾಡಿದಂತೆ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಡುವಂತೆ ತಿಳಿಸಿದರು. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳು ತುಂಬಾ ಕಡಿಮೆಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸರ್ಕಾರಿ ಶಾಳೆಗಳ ಬೋಧಕವರ್ಗದವರು ಖಾಸಗಿ ಶಾಲೆಯ ಬೋಧಕರೊಡನೆ ಬೋಧನಾಕ್ರಮದ ಪೈಪೋಟಿಮಾಡಬೇಕಾದಂತ ಅತ್ಯಾವಶ್ಯಕತೆಯಿರುವುದಾಗಿ ಎಚ್ಚರಿಸಿದರು.
ಇದೇ ಸಂದಂರ್ಭದಲ್ಲಿ ಹೆಚ್.ರಾಮಕೃಷ್ಣಪ್ಪ, ಡಾ.ಶಿವಕುಮಾರ್, ಎಸ್.ಸುರೇಶ್ ಸಿ.ಆರ್.ಪಿ.ರಂಗನಾಥರವರುಗಳು ಮಾತನಾಡಿದರು. ಹೊಸಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷಿಣಿ ಗಾಯಿತ್ರಿ ರಾಜಣ್ಣನವರು, ಚೆನ್ನಲಿಂಗಪ್ಪ, ಬಸವರಾಜು, ಭೂತಣ್ಣ ಪಿ.ಡಿ.ಓ ಶ್ರೀದೇವಿ ಬೊಳ್ಳೊಳಿ, ರಾಜಶೇಖರಯ್ಯ, ಸರ್ಕಾರಿ ಹಾಲಿನ ಡೈರಿ ಅಧ್ಯಕ್ಷರಾದ ಮುದ್ದಲಿಂಗಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ರಂಗಶಾಮಯ್ಯ, ಹಾಗೂ ಶಾಲಾ ಮಕ್ಕಳು, ಕೆಲವೇ ಪೋಷಕರು ಮಾತ್ರ ಉಪಸ್ಥಿತರಿದ್ದರು. ಸದರಿ ಮುರಾರ್ಜಿವಸತಿ ಶಾಲಯೆ ಪ್ರಭಾರ ಪ್ರಾಂಶುಪಾಲರು ಹಾಗೂ ಇದಕ್ಕೆ ಸಂಬಂಧಿಸಿದ ಇಲಾಖೆಯವರು ಶಂಕುಸ್ಥಾಪನೆ ಕಾರ್ಯಕ್ರಮದ ಬಗ್ಗೆ ಕಾಟಾಚಾರ ಪ್ರಚಾರದಿಂದ ಜನ ಸಾಮಾನ್ಯರುಗಳಿಗೆ ವಿಷಯ ತಿಳಿದಿರುವುದಿಲ್ಲ ಈ ಬಗ್ಗೆ ಅಸಾಮದಾನ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
