ವಾಲ್ಮೀಕಿ ಜಯಂತಿ ಪ್ರಯುಕ್ತ ಬೃಹತ್ ಬೈಕ್ ರ್ಯಾಲಿ

 ದಾವಣಗೆರೆ:

     ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಜಿಲ್ಲಾ ವಾಲ್ಮೀಕಿ ಯುವ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.

      ನಗರದ ವೀರ ಮದಕರಿ ನಾಯಕ ವೃತ್ತದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಸಮಾಜದ ಹಿರಿಯ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಬಿ.ವೀರಣ್ಣ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್‍ರಾವ್ ಜಾಧವ್, ಸಿಪಿಐ ಜಿ.ಬಿ.ಉಮೇಶ್ ಪುಷ್ಪ ನಮನ ಸಲ್ಲಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.

       ವೀರ ಮದಕರಿ ನಾಯಕ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿಯು ಶ್ರೀ ದುರ್ಗಾಂಬಿಕ ದೇವಸ್ಥಾನದ ಮಾರ್ಗವಾಗಿ ಹಾಸಬಾವಿ ವೃತ್ತ, ಅರಳಿಮರ ವೃತ್ತ, ಪಿಬಿ ರಸ್ತೆ ಮುಖಾಂತರ ವಿನೋಬನಗರ, ವಿನೋಬನಗರ 3ನೇ ಹಂತ, ರಾಮ್ ಅಂಡ್ ಕೋ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಶಿವಪ್ಪಯ್ಯ ವೃತ್ತ, ಕೆಟಿಜೆ ನಗರ ಮತ್ತಿತರೆಡೆ ಸಂಚರಿಸಿ ನಿಟುವಳ್ಳಿಯ ದುರ್ಗಾಂಭಿಕಾ ದೇವಸ್ಥಾನ ತಲುಪಿ ಮುಕ್ತಾಯವಾಯಿತು.

      ಬೈಕ್ ರ್ಯಾಲಿಯಲ್ಲಿ ಸಮಾಜದ ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ವಿನಾಯಕ ಪೈಲ್ವಾನ್, ಕೆಟಿಜೆ ನಗರ ಲಕ್ಷ್ಮಣ್, ರಾಘು ದೊಡ್ಮನಿ, ಪಣಿಯಾಪುರ ಲಿಂಗರಾಜ್, ಚಿಕ್ಕಿ ಮಂಜುನಾಥ್, ನರೇಂದ್ರ ಕರೂರು, ಪ್ರವೀಣ್ ಶಾಮನೂರು, ಕರೂರು ಹನುಮಂತು, ಆರನೇಕಲ್ಲು ವಿರೂಪಾಕ್ಷ, ಐಗೂರು ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link