ತಿಪಟೂರು :
ವಿದ್ಯಾರ್ಥಿಗಳ ಮನಸ್ಸು ವಿಕಸನಗೊಂಡರೆ ಅವರ ಪತ್ರಿಭೆಯು ಅನಾವರಣಗೊಳ್ಳುತ್ತದೆ ಎಂದು ನಗರದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ ಟ್ಯಾಲೆಂಟ್ ಸರ್ಚ್ ಕಾಯ್ರಕ್ರವನ್ನು ಉದ್ಘಾಟಿಸುತ್ತಾ ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
ಟ್ಯಾಲೆಂಟ್ ಸರ್ಚ್ ಎನ್ನುವುದು ವಿದ್ಯಾರ್ಥಿಗಳ ಪತ್ರಿಭೆಯನ್ನು ಅನಾವರಣಗೊಳಿಸಲು ಅನುಕೂಲವಾಗಿದೆ. ಹಿಂದಿನ ಕಾಲದಲ್ಲಿ ಪ್ರಪಂಚದಲ್ಲಿ ಶಾಲೆಗಳೇ ಇಲ್ಲದಂತಹ ಸಂದರ್ಭದಲ್ಲಿ ನಮ್ಮದೇಶದಲ್ಲಿ ಗುರುಕುಲದ ಪದ್ಧತಿಯಲ್ಲಿ ಪ್ರಕೃತಿಯ ಮಡಿಲಲ್ಲಿ ಪಾಠ ಪ್ರವಚನಗಳು ನಡೆಯುತ್ತಿದ್ದವು. ಆಗ ಎಲ್ಲವನ್ನು ವಿದ್ಯಾರ್ಥಿಗಳು ನೋಡಿ ತಿಳಿದುಕೊಳ್ಳುತ್ತಿದ್ದರು. ಆದರೆ ಈಗ ಪಾಠಪ್ರವಚನಗಳು ನಾಲ್ಕುಗೋಡೆಗಳ ಮಧ್ಯದಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮರಗಿಡಗಳು, ಪ್ರಾಣಿಪಕ್ಷಿಗಳು ಮುಂತಾದವುಗಳನ್ನು ನಾವು ಮಾದರಿ ಅಥವಾ ಮಾಡೆಲ್ಗಳಿಂದ ನೋಡುತ್ತಿದ್ದೇವೆ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ಅವರ ಮನಸ್ಸು ಉಲ್ಲಾಸಗೊಳ್ಳುವುದಲ್ಲದೆ ಅವರ ಯೋಜನೆಗಳನ್ನು ಯೊರಹಾಕಲು ವೇದಿಕೆಯಾಗುತ್ತದೆ ಮತ್ತು ಅವುಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನಗಳನ್ನು ಆಯೋಜಿಸಿದರೆ ಅವುಗಳಿಂದ ಸ್ಪೂರ್ತಿಗೊಂಡ ವಿದ್ಯಾರ್ಥಿಗಳು ನಾವು ಏನ್ನಾದರೂ ಮಾಡೋಣ ಎಂಬ ಸ್ಪೂರ್ತಿಯು ಬಂದು ಒಳ್ಳೆಯ ಸ್ಪರ್ಧಾತ್ಮಕ ಮನೋಭಾವವು ಮೂಡುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ಐ.ಐ.ಟಿ ಕೊಆರ್ಡಿನೇಟರ್ ಆದ ಪ್ರೊ. ಬಿ.ಕೆ.ರಮೇಶ್, ನಗರಸಭಾ ಸದಸ್ಯರಾದ ರಾಮ್ಮೋನ್, ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಕೆ.ಉಮೇಶ್, ಕಾರ್ಯದರ್ಶಿ ಯಮುನ ಮತ್ತು ಕಾಲೇಜಿನ ಸಿಬ್ಬಂದಿವರ್ಗದವರು, ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
