ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸಿ

ದಾವಣಗೆರೆ:

        ಬ್ರಹ್ಮ, ವಿಷ್ಣು, ಮಹೇಶ್ವರರಂತೆ ದೈವೀ ಸ್ವರೂಪಿಗಳಾಗಿ ವಿದ್ಯಾ-ಬುದ್ಧಿ ಜೊತೆಗೆ ಸದಾಚಾರವನ್ನೂ ಬಿತ್ತಿ ಸರ್ವಾಂಗೀಣ ಅಭಿವೃದ್ಧಿಯುಳ್ಳ ವಿದ್ಯಾರ್ಥಿಗಳ ಸೃಷ್ಠಿಕರ್ತರಾಗುವಂತೆ ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜ್ ಶಿಕ್ಷಕರಿಗೆ ಕರೆ ನೀಡಿದರು.
ಅವರು, ನಗರದ ವನಿತಾ ಸಮಾಜದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವನಿತಾ ಸಮಾಜದ ಜಾನ ಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

      ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಕೆ ಮಾಡಿದ್ದು, ಸಮಾಜಕ್ಕೆ ತಮ್ಮ ಗುರುತರ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಈ ಮೂವರು ದೈವೀ ಸ್ವರೂಪಗಳಂತೆ ಉತ್ತಮ ಮಕ್ಕಳ ಸೃಷ್ಠಿಸಿ, ಸಂರಕ್ಷಿಸಿ, ಪೆÇೀಷಿಸುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಶ್ರಮಿಸುವಂತೆ ಕಿವಿಮಾತು ಹೇಳಿದರು.

      ದೀಪಕ್ಕೆ ತೈಲ ಹಾಕದೇ ಇದ್ದರೆ ಬತ್ತಿಯು ಬೂದಿಯಾಗಲಿದೆ. ಜ್ಯೋತಿ ಬೆಳಗಿಸುವ ಶಕ್ತಿ ತೈಲಕ್ಕಿದೆ. ಪ್ರಣತಿ, ಬತ್ತಿ ಇದ್ದರೂ ತೈಲ ಶಕ್ತಿ ಇಲ್ಲದೇ ಇದ್ದರೆ ಜ್ಯೋತಿ ಬೆಳಗುವುದಿಲ್ಲ. ಹಾಗೆ ವಿದ್ಯಾರ್ಥಿಗಳಲ್ಲಿ ಜಾನದ ಜೊತೆಗೆ ಗುರು-ಹಿರಿಯರ ಬಗ್ಗೆ ಭಕ್ತಿ, ಸುಜಾನವನ್ನು ಬಿತ್ತಬೇಕು. ಜಾನವೆಂಬ ಶಕ್ತಿ ಉಳಿಯಲು ಸದ್ಗುಣ, ಸದಾಚಾರಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

      ಮೌಲ್ಯವಿಲ್ಲದೇ ಶಿಕ್ಷಣ ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ಆತ್ಮವಿಶ್ವಾಸ, ಧೈರ್ಯ, ಭಕ್ತಿ ಇಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ. ಮಕ್ಕಳಿಗೆ ಕೇವಲ ಪಠ್ಯಕ್ರಮವನ್ನಷ್ಟೇ ಅಲ್ಲದೇ ಯೋಗ, ಸಾಮಾನ್ಯ ಜಾನ, ಮೌಲ್ಯವುಳ್ಳ ಗುಣಾತ್ಮಕ ಶಿಕ್ಷಣ ಕೊಡುವತ್ತ ಮುಂದಾಗಬೇಕು ಎಂದು ತಿಳಿಸಿದರು.

      ಶಿಕ್ಷಕರು ತರಗತಿ ಕೋಣೆಗಷ್ಟೇ ತಮ್ಮ ಕರ್ತವ್ಯವನ್ನು ಸೀಮಿತಗೊಳಿಸಿಕೊಂಡರೆ ಗುಣಾತ್ಮಕ ಶಿಕ್ಷಣಕ್ಕೆ ತೊಡಕುಂಟಾಗಲಿದೆ. ಆದ್ದರಿಂದ ಮಕ್ಕಳ ಸಾಮಥ್ರ್ಯವನ್ನು ಗುರುತಿಸಿ ಸೂಕ್ತ ಅವಕಾಶ, ಸಹಕಾರ ನೀಡುವಲ್ಲಿಯೂ ತಮ್ಮ ಕರ್ತವ್ಯವನ್ನು ವಿಸ್ತರಿಸಿಕೊಂಡಾಗ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಕಂಡು ತಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

       ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಸುಜಾತ ವಿಜಯಾನಂದ, ಕೇವಲ ಓದು, ಜಾನವಷ್ಟೇ ಅಲ್ಲದೇ ಮಕ್ಕಳಲ್ಲಿ ಮಾನವತೆಯ ವಿಕಾಸವಾಗಬೇಕು. ಮೌಲ್ಯಾಧಾರಿತ ಸಮನ್ವಯ ಶಿಕ್ಷಣ ಬಹಳ ಅವಶ್ಯ. ಮಕ್ಕಳೇ ಶಿಕ್ಷಕರ ಆಸ್ತಿಯಾಗಿದ್ದು, ಉತ್ತಮ ಶಿಕ್ಷಣ ನೀಡಿದಾಗ ಉತ್ತಮ ಬದುಕು ಕಟ್ಟಿಕೊಂಡು ಅವರೇ ಉತ್ತಮ ಶಿಕ್ಷಕರೆಂಬ ಬಿರುದು ನೀಡುವುದೇ ಶ್ರೇಷ್ಠ ಎಂದು ಹೇಳಿದರು.

       ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಈಶ್ವರಮ್ಮ ಟ್ರಸ್ಟ್ ಉಪಾಧ್ಯಕ್ಷೆ ಬಿ.ಆರ್. ಶಾಂತಕುಮಾರಿ ಉಪನ್ಯಾಸ ನೀಡುತ್ತಾ, ಶಿಕ್ಷಕರು ಮಕ್ಕಳಿಗೆ ದಾರಿ ದೀಪವಾಗಿರಬೇಕು. ಹೃದಯ ವೈಶಾಲ್ಯತೆ, ಕ್ಷಮಾ ಗುಣ ಹೊಂದುವ ಜೊತೆಗೆ ಪ್ರೀತಿಯಿಂದ ಮಕ್ಕಳನ್ನು ಗೆಲ್ಲಬೇಕು. ಸಮಾಧಾನ, ಕಾರ್ಯನಿಷ್ಠೆ, ಪರಿಶುದ್ಧತೆಯುಳ್ಳವರಾಗಿರಬೇಕೆಂದರು.

       ಇದೇ ವೇಳೆ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಶಿಕ್ಷಕಿ ಡಿ.ಆರ್. ಶಿವಲೀಲಾ ಅವರಿಗೆ ಉತ್ತಮ ಶಿಕ್ಷಕಿ ಎಂದು ಗುರುತಿಸಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಗೌರವ ಕಾರ್ಯದರ್ಶಿ ಎಸ್.ಎಂ. ಮಲ್ಲಮ್ಮ ಪ್ರಾಸ್ತವಿಕವಾಗಿ ಮಾತನಾಡಿದರು.

       ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಮ್ಮ ಮಹಾರುದ್ರಯ್ಯ, ದತ್ತಿ ದಾನಿಗಳಾದ ಪ್ರೊ. ಬಿ.ಕೆ. ತಿಪ್ಪೇಸ್ವಾಮಿ, ಐ.ಕೆ. ಉಮಾದೇವಿ, ಷಡಕ್ಷರಪ್ಪ, ರತ್ನಮ್ಮ, ವೀಣಾ ಕೃಷ್ಣಮೂರ್ತಿ, ಬಿ.ಎಂ. ಮುರುಗಯ್ಯ ಕುರ್ಕಿ, ಬೇತೂರು ಷಡಕಣ್ಣ, ರಾಜೇಂದ್ರ ಪ್ರಸಾದ್, ಸಂತೆ ಬೆನ್ನೂರು ತಿಪ್ಪಣ್ಣ ಗೌಡ್ರು ಸೇರಿದಂತೆ ಇತರರು ಇದ್ದರು. ಈಶ್ವರಮ್ಮ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಾಗ್ದೇವಿ ಸ್ವಾಗತಿಸಿದರು. ಶ್ರೀದೇವಿ ನಿರೂಪಿಸಿದರು. ಜಾನ ಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಅಧ್ಯಕ್ಷೆ ಜಯಮ್ಮ ನೀಲಗುಂದ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link