ತುಮಕೂರು :
ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ನೂತನವಾಗಿ ನಿರ್ಮಿಸುತ್ತಿರುವ ಹೆಚ್.ಎ.ಎಲ್.ಘಟಕ ನಿರ್ಮಾಣ ಪ್ರದೇಶದಲ್ಲಿ ಹಾದು ಹೋಗಿರುವ 10.387 ಕಿ.ಮೀ. ಉದ್ದದ 220 ಕೆ.ವಿ. ಬಿ1, ಬಿ2 ಮತ್ತು ಬಿ3, ಬಿ4 ಜೋಡಿ ಪ್ರಸರಣ ಮಾರ್ಗ ಹಾಗೂ 9.885 ಕಿ.ಮೀ. ಉದ್ದದ 110 ಕೆ.ವಿ. ನಿಟ್ಟೂರು-ದೊಡ್ಡಗುಣಿ ಒಂಟಿ ಪ್ರಸರಣ ಮಾರ್ಗವನ್ನು ಸೆಪ್ಟೆಂಬರ್ 11 ರಂದು ಅಥವಾ ನಂತರದ ದಿನದಲ್ಲಿ ವಿದ್ಯುದ್ದೀಕರಿಸಿ ಚಾಲನೆಗೊಳಿಸಲಾಗುತ್ತದೆ.
ಈ ಮಾರ್ಗಗಳು ಜಿಲ್ಲೆಯ ಶೀಗೆಹಳ್ಳಿ, ತಗ್ಗಿಹಳ್ಳಿ, ಮಾರಶೆಟ್ಟಿಹಳ್ಳಿ, ಬಂಡಿಹಳ್ಳಿ, ಅಮ್ಮನಹಳ್ಳಿ ಹಾಗೂ ಕಾರೇಹಳ್ಳಿ ಗ್ರಾಮಗಳ ಸರಹದ್ದಿಯಲ್ಲಿ ಹಾದು ಹೋಗಲಿದ್ದು, ಸದರಿ ಗ್ರಾಮಗಳಲ್ಲಿ ಸಾರ್ವಜನಿಕರು ಸಾರ್ವಜನಿಕರು ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ ಇತ್ಯಾದಿಗಳನ್ನು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಎಸೆಯುವುದಾಗಲಿ, ದನಕರುಗಳನ್ನು ಗೋಪುರಗಳಿಗೆ ಕಟ್ಟುವುದಾಗಲಿ ಮಾಡಬಾರದೆಂದು ನಿಗಮ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಮೇಲ್ಕಂಡ ಕೃತ್ಯಗಳನ್ನು ಎಸೆಗಿದಲ್ಲಿ ಉಂಟಾಗುವ ವಿದ್ಯುತ್ ಅವಘಡಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.