ಹುಳಿಯಾರು:
ವೈದ್ಯರು ಸೇವಾ ಹಂಬಲ ಗುಣ ಬೆಳಸಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಸಂಸದ ಎಸ್.ಪಿ.ಮುದ್ಧಹನುಮೇಗೌಡ ಅವರು ಪ್ರಶಂಸಿಸಿದರು.
ಹುಳಿಯಾರಿನಲ್ಲಿ ಕಲ್ಪತರು ಪೌಂಢೇಷನ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿಉವ ಕಲ್ಪತರು ಹಾಸ್ಪೆಟಲ್ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ವೃತ್ತಿಯು ಶ್ರೇಷ್ಠವಾದ ವೃತ್ತಿಯಾಗಿದ್ದು ಈ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ಬಹುಪಾಲು ಸೇವಾಮನೋಭಾವ ಉಳ್ಳವರಾಗಿರುತ್ತಾರೆ. ಹಾಗಾಗಿಯೇ ಅಪಘಾತವಾಗಿ ರಕ್ತ ಹೋಗುತ್ತಿರಲಿ, ಖಾಯಿಲಿ ಉಲ್ಪಣವಾಗಿ ಅಂಗಾಂಗಗಳು ಕೊಳೆಯುತ್ತಿರಲಿ, ಸ್ನಾನ ಮಾಡದೆ ದುರ್ವಾಸನೆ ಬೀರುತ್ತಿರಲಿ ಕೊಂಚವೂ ಬೇಸರಪಟ್ಟುಕೊಳ್ಳದೆ ಶುಶ್ರೂಷೆ ನೀಡುತ್ತಾರೆ ಎಂದು ಗುಣಗಾನ ಮಾಡಿದರು.
ಹುಳಿಯಾರು ಪಟ್ಟಣ ಮೂರ್ನಲ್ಕು ಜಿಲ್ಲೆಗಳ ಗಡಿ ಗ್ರಾಮಗಳ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ನಿತ್ಯ ಸಹಸ್ತ್ರಾರು ಜನ ಬಂದೋಗುತ್ತಾರೆ. ಅಲ್ಲದೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ, ಈ ನಿಟ್ಟನಲ್ಲಿ ಇಲ್ಲಿ ಸುಸಜ್ಜಿತವಾದ ಖಾಸಗಿ ಆಸ್ಪತ್ರೆ ನಿರ್ಮಿಸುವ ಮೂಲಕ ಕಲ್ಪತರು ಪೌಂಡೇಷನ್ ಟ್ರಸ್ಟ್ರ್ ರೋಗಿಗಳಿಗೆ ನೆರವಾಗಿದೆ. ಈ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಲಿ ಎಂದು ಆಶಿಸಿದರು.
ಕಲ್ಪತರು ಪೌಂಡೇಷನ್ ಟ್ರಸ್ಟ್ನ ಗೌರವ ಅಧ್ಯಕ್ಷ ಮುಸ್ತಾಫ, ಅಧ್ಯಕ್ಷೆ ಬೀಬೀ ಫಾತೀಮಾ, ಕಾರ್ಯದರ್ಶಿ ಷಂಶೀರ್ ಉಲ್ಲಾ ಷರೀಫ್, ಖಜಾಂಜಿ ಅನ್ಸರ್ ಅಲಿ, ನಿರ್ದೇಶಕ ನಯಾಜ್ ಅಹಮದ್ ಷರೀಪ್, ಸೈಯದ್ ಹಮೀದ್, ಗ್ರಾಪಂ ಸದಸ್ಯ ಸೈಯದ್ ಜಬೀಉಲ್ಲಾ, ಆರ್.ಕೆ.ಮೆಡಿಕಲ್ ರೆಹಮಾನ್ ಖಾನ್, ಸುನ್ನು, ಡಾ.ರಿಹಾನ, ತಿಮ್ಮನಹಳ್ಳಿ ಗ್ರಾಪಂ ಲೆಕ್ಕಾಧಿಕಾರಿ ಶಾಹೀದ್ ಅಪ್ರೀದಿ ಮೊದಲಾದವರಿದ್ದರು.
