ಶಾಲಾ ವಾಹನ ಅಪಘಾತ: ಸಿಬ್ಬಂದಿಗೆ ಗಾಯ

ತುಮಕೂರು
               ತುಮಕೂರು ನಗರದ ರೇಣುಕ ವಿದ್ಯಾಪೀಠದ ಶಾಲಾ ಬಸ್ ಸೆ.3 ರಂದು ಸಂಜೆ 5-30 ರಲ್ಲಿ ತುಮಕೂರು ತಾಲ್ಲೂಕು ಮಸ್ಕಲ್ ಬಳಿ ತೆರಳುವಾಗ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
                ಇದರಿಂದ ಬಸ್ ಸಿಬ್ಬಂದಿ ಸಿದ್ದಗಂಗಮ್ಮ ಎಂಬುವವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಅದರಲ್ಲಿದ್ದ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಬಸ್ ಜಖಂಗೊಂಡಿದೆ. ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಸೆ.5 ರಂದು ಐಪಿಸಿ ಕಲಂ 279, 337 ರ ಪ್ರಕಾರ ಮೊಕದ್ದಮೆ ದಾಖಲಾಗಿದೆ.

 

Recent Articles

spot_img

Related Stories

Share via
Copy link
Powered by Social Snap